ETV Bharat / state

ಭದ್ರತೆಗಿದ್ದ ಸೆಕ್ಯುರಿಟಿಯೇ ಕಿರಾತಕ.. ಮನೆ ಯಜಮಾನಿಯ ಕೈಕಾಲು ಕಟ್ಟಿ ಚಿನ್ನಾಭರಣ, ನಗದು ದರೋಡೆ!

author img

By

Published : Jun 29, 2022, 5:55 PM IST

Theft from the security guard in Bangalore
ರಕ್ಷಣೆಗೆಂದು ನೇಮಿಸಿದ್ದ ಸೆಕ್ಯೂರಿಟಿಯಿಂದಲೇ ಕಳ್ಳತನ

ಮನೆಯ ರಕ್ಷಣೆಗೆಂದು ನೇಮಿಸಿದ್ದ ಸೆಕ್ಯುರಿಟಿಯೇ ಕಳ್ಳತನ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಮನೆಯಲ್ಲಿ ಒಬ್ಬರೇ ಮಹಿಳೆ ಇರುವುದನ್ನು ಗಮನಿಸಿ ಈ ಕೃತ್ಯ ಎಸಗಿದ್ದಾನೆ.

ಬೆಂಗಳೂರು: ಮನೆಯ ಭದ್ರತೆಗೆಂದು ನೇಮಕಗೊಂಡಿದ್ದ ಸೆಕ್ಯುರಿಟಿಯೇ ಹಾಡಹಗಲೇ ಕಳ್ಳತನ ಮಾಡಿದ ಪ್ರಕರಣ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯ ಕೈಕಾಲುಗಳನ್ನು ಕಟ್ಟಿಹಾಕಿ ಮನೆಯಲ್ಲಿದ್ದ 10 ಲಕ್ಷ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಜೆಬಿ ನಗರದ ಕೇಂದ್ರೀಯ ಸ್ಕೂಲ್ ಬಳಿಯಿರುವ ಮನೆಯಲ್ಲಿ ದರೋಡೆ ಆಗಿದ್ದು, ಸೆಕ್ಯುರಿಟಿ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಪ್ರತಾಪ್ ಎಂಬಾತ ಕೃತ್ಯ ಎಸಗಿದ್ದು, ಸದ್ಯ ಪರಾರಿಯಾಗಿದ್ದಾನೆ.

ನೇಪಾಳ ಮೂಲದ ಪ್ರತಾಪ್ ಮತ್ತು ಆತನ ಪತ್ನಿ ಕಳೆದ ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಇಂದು ಮಧ್ಯಾಹ್ನ ಪ್ಲಾಟ್​ನಲ್ಲಿ ಮಹಿಳೆ ಒಬ್ಬರೇ ಇರುವುದುನ್ನು ಗಮನಿಸಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಭೀಮಾಶಂಕರ್ ಗುಳೇದ್ ಹಾಗೂ ಜೀವನ ಭೀಮಾನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಕೆಲಸ ಕೊಡಿಸುವುದಾಗಿ ಜಾಹೀರಾತು: ಯುವಕ-ಯುವತಿಯರನ್ನು ವಂಚಿಸುತ್ತಿದ್ದವರು ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.