ಬೆಂಗಳೂರು: ಮನೆಯ ಭದ್ರತೆಗೆಂದು ನೇಮಕಗೊಂಡಿದ್ದ ಸೆಕ್ಯುರಿಟಿಯೇ ಹಾಡಹಗಲೇ ಕಳ್ಳತನ ಮಾಡಿದ ಪ್ರಕರಣ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯ ಕೈಕಾಲುಗಳನ್ನು ಕಟ್ಟಿಹಾಕಿ ಮನೆಯಲ್ಲಿದ್ದ 10 ಲಕ್ಷ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಜೆಬಿ ನಗರದ ಕೇಂದ್ರೀಯ ಸ್ಕೂಲ್ ಬಳಿಯಿರುವ ಮನೆಯಲ್ಲಿ ದರೋಡೆ ಆಗಿದ್ದು, ಸೆಕ್ಯುರಿಟಿ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಪ್ರತಾಪ್ ಎಂಬಾತ ಕೃತ್ಯ ಎಸಗಿದ್ದು, ಸದ್ಯ ಪರಾರಿಯಾಗಿದ್ದಾನೆ.
ನೇಪಾಳ ಮೂಲದ ಪ್ರತಾಪ್ ಮತ್ತು ಆತನ ಪತ್ನಿ ಕಳೆದ ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಇಂದು ಮಧ್ಯಾಹ್ನ ಪ್ಲಾಟ್ನಲ್ಲಿ ಮಹಿಳೆ ಒಬ್ಬರೇ ಇರುವುದುನ್ನು ಗಮನಿಸಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಭೀಮಾಶಂಕರ್ ಗುಳೇದ್ ಹಾಗೂ ಜೀವನ ಭೀಮಾನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಕೆಲಸ ಕೊಡಿಸುವುದಾಗಿ ಜಾಹೀರಾತು: ಯುವಕ-ಯುವತಿಯರನ್ನು ವಂಚಿಸುತ್ತಿದ್ದವರು ಅರೆಸ್ಟ್