ETV Bharat / state

ಹುಡಿ ಎಬ್ಬಿಸಿದ ಹಾನಗಲ್‌, ಧಗಿ ಧಗಿಸಿದ ಸಿಂದಗಿಯೊಳಗೆ ಬಹಿರಂಗ ಪ್ರಚಾರಕ್ಕೆ ತೆರೆ.. ಇನ್ನೇನಿದ್ರೂ ಒಳ್‌ಗಿಂದೊಳಗೇ..

author img

By

Published : Oct 27, 2021, 9:29 PM IST

Updated : Oct 27, 2021, 10:44 PM IST

Sindagi and hanagal by -election voting campaign ended
ಹಾನಗಲ್​, ಸಿಂದಗಿ ಉಪಚುನಾವಣೆ ಪ್ರಚಾರ ಅಂತ್ಯ

ಸಂಜೆ ಏಳು ಗಂಟೆಯಾಗುತ್ತಿದ್ದಂತೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಮೂರು ಪಕ್ಷದ ಪ್ರಮುಖ ನಾಯಕರು ಕ್ಷೇತ್ರ ತೊರೆದರು. ಅಭ್ಯರ್ಥಿಗಳು ಬೆರಳೆಣೆಕೆಯಷ್ಟು ಕಾರ್ಯಕರ್ತರೊಡನೆ ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ..

ಬೆಂಗಳೂರು : ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಮೂರು ಪಕ್ಷಗಳು ಭಾರೀ ಪ್ರಚಾರ ನಡೆಸಿದ್ದವು.

ಉಪಚುನಾವಣೆ ಹಿನ್ನೆಲೆ ಅಬ್ಬರ ಪ್ರಚಾರ ನಡೆಸಿದ ಬಿಜೆಪಿ

ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷದ ಅಭ್ಯರ್ಥಿಗಳ ಪರ ರಾಜಕೀಯ ನಾಯಕರು ಬೃಹತ್​​ ರೋಡ್​ ಶೋ ನಡೆಸಿ ಜನರಲ್ಲಿ ಹಲವು ಆಶ್ವಾಸನೆಗಳನ್ನು ನೀಡಿ ಪಕ್ಷದ ಗೆಲುವಿಗೆ ಕಾರಣರಾಗಬೇಕು ಎಂದು ಮತದಾರನ ಮನಗೆಲ್ಲಲು ಅಂತಿಮ ಕ್ಷಣದ ಕಸರತ್ತು ನಡೆಸಿದರು.

ಬೆಳಗ್ಗೆಯಿಂದ ಸಂಜೆವರೆಗೆ ಸಿಎಂ ಪ್ರಚಾರ : ಹಾನಗಲ್ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಮೂರು ಪಕ್ಷಗಳ ಅಭ್ಯರ್ಥಿಗಳು, ಪಕ್ಷದ ನಾಯಕರು ಅಬ್ಬರದ ಪ್ರಚಾರ ನಡೆಸಿದರು. ಸಿಎಂ ಬೊಮ್ಮಾಯಿಯವರಂತೂ ಮುಂಜಾನೆಯಿಂದ ಸಂಜೆಯವರೆಗೆ ಮಾಸನಕಟ್ಟಿ,ಕೂಡಲ ನರೇಗಲ್, ಕಾಡಶೆಟ್ಟಿಹಳ್ಳಿ ಮತ್ತು ಬೊಮ್ಮನಹಳ್ಳಿಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು.

Sindagi and hanagal by -election voting campaign
ರೋಡ್​ ಶೋ ನಡೆಸಿದ ಬಿಎಸ್​ವೈ, ಸಿಎಂ ಬೊಮ್ಮಾಯಿ

ರೋಡ್​ ಶೋ ನಡೆಸಿದ ಬಿಎಸ್​ವೈ : ಹಾನಗಲ್‌ನಲ್ಲಿ ನಡೆದ ಬಹಿರಂಗ ಪ್ರಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ನಗರಾದ್ಯಂತ ರೋಡ್​​​ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಮತಯಾಚಿಸಿದರು. ಇದರ ಜೊತೆಗೆ ಕ್ಷೇತ್ರದ ವಿವಿಧೆಡೆ ನಟಿ ಶೃತಿಯವರು ಕೂಡ ಅಭ್ಯರ್ಥಿ ಪರ ಮತಯಾಚಿಸಿದರು.

ಕಾಂಗ್ರೆಸ್​ ಸಮಾವೇಶ : ಬಿಜೆಪಿಯ ಅಬ್ಬರದ ಪ್ರಚಾರದ ನಡುವೆಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಪ್ರಚಾರ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರತಿಪಕ್ಷನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಜಿ.ಪರಮೇಶ್ವರ್​, ಮುನಿಯಪ್ಪ ಜಮೀರ್ ಅಹ್ಮದ್, ಹೆಚ್ಕೆಪಾಟೀಲ್ ಸೇರಿದಂತೆ ವಿವಿಧ ಮುಖಂಡರು ಭರ್ಜರಿ ಪ್ರಚಾರ ಮಾಡಿದರು.

Sindagi and hanagal by -election voting campaign
ಕಾಂಗ್ರೆಸ್​ ಸಮಾವೇಶ

ಮನೆ ಮನೆ ಪ್ರಚಾರ : ಸಂಜೆ ಏಳು ಗಂಟೆಯಾಗುತ್ತಿದ್ದಂತೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಮೂರು ಪಕ್ಷದ ಪ್ರಮುಖ ನಾಯಕರು ಕ್ಷೇತ್ರ ತೊರೆದರು. ಅಭ್ಯರ್ಥಿಗಳು ಬೆರಳೆಣೆಕೆಯಷ್ಟು ಕಾರ್ಯಕರ್ತರೊಡನೆ ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ.

ಅಕ್ಟೋಬರ್​ ಅಂತ್ಯಕ್ಕೆ ಮತದಾನ : ಈ ಎರಡೂ ಕ್ಷೇತ್ರಗಳಿಗೆ ಅ.30ರಂದು ಮತದಾನ ನಡೆಯಲಿದೆ. ನ.2ರಂದು ಮತ ಎಣಿಕೆ ನಡೆಯಲಿದೆ. ಮಾದರಿ ನೀತಿ ಸಂಹಿತೆಯಂತೆ ಮತದಾನಕ್ಕೆ 72 ತಾಸುಗಳ ಮುಂಚೆ ಬಹಿರಂಗ ಪ್ರಚಾರ ಕೊನೆಗೊಂಡಿದೆ. ಇನ್ನೇನಿದ್ದರೂ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 282 ಜನರಿಗೆ ಕೋವಿಡ್ ಸೋಂಕು ದೃಢ: 13 ಮಂದಿ ಸಾವು

Last Updated :Oct 27, 2021, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.