ETV Bharat / state

ಜನಪರ ಕೆಲಸ ಮಾಡುವ ಗುಣ ಬಿಎಸ್​ವೈ ರಕ್ತದಲ್ಲೇ ಇದೆ: ಆರ್​. ಅಶೋಕ್

author img

By

Published : Jul 25, 2021, 10:30 AM IST

R Ashok
ಆರ್​. ಅಶೋಕ್

ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್. ಹೋರಾಟದಿಂದಲೇ ಬಂದಿರುವ ಯಡಿಯೂರಪ್ಪನವರು ದೇಹದಲ್ಲಿ ರಕ್ತ ಇರೋವರೆಗೂ ಜನಪರ ಕೆಲಸ ಮಾಡುತ್ತಾರೆ ಎಂದು ಸಿಎಂ ಕಾರ್ಯವೈಖರಿಯನ್ನು ಕಂದಾಯ ಸಚಿವ ಆರ್​. ಅಶೋಕ್ ಕೊಂಡಾಡಿದ್ದಾರೆ.

ಬೆಂಗಳೂರು: ಜನರ ಪರವಾಗಿ ನಿಲ್ಲುವ ಗುಣ ಯಡಿಯೂರಪ್ಪ ಅವರಿಗೆ ರಕ್ತಗತವಾಗಿಯೇ ಬಂದಿದೆ. ಯಾವುದೇ ಸಮಸ್ಯೆ ಬಂದರೂ ಜನಪರ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಬಿಎಸ್​ವೈ ರಾಜೀನಾಮೆ ಸನ್ನಿಹಿತವಾಗುತ್ತಿದ್ದರೂ ಸಹ ಸಿಎಂ ಕರ್ತವ್ಯ ನಿಷ್ಠೆಯನ್ನು ಕಂದಾಯ ಸಚಿವ ಅಶೋಕ್ ಶ್ಲಾಘಿಸಿದರು.

ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್. ಅವರು ರೈತ ಪರವಾಗಿ ಹೋರಾಟ ಮಾಡಿ, ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ಹೋರಾಟದಿಂದಲೇ ಬಂದಿರುವ ಯಡಿಯೂರಪ್ಪನವರು ದೇಹದಲ್ಲಿ ರಕ್ತ ಇರೋವರೆಗೂ ಜನಪರ ಕೆಲಸ ಮಾಡುತ್ತಾರೆ ಎಂದು ಸಿಎಂ ಕಾರ್ಯವೈಖರಿಯನ್ನು ಕೊಂಡಾಡಿದರು.

ನಾಯಕತ್ವ ಕುರಿತು ಹೈಕಮಾಂಡ್ ಇಂದು ನೀಡುವ ಸೂಚನೆ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಇಂದು ಹೈಕಮಾಂಡ್​ನಿಂದ ಸಂದೇಶ ಬರುವ ಬಗ್ಗೆ ನನಗೆ ಗೊತ್ತಿಲ್ಲ. ಆ ರೀತಿಯ ಸಂದೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ದೃಷ್ಟಿ ಜನರ ಕಷ್ಟ ದೂರ ಮಾಡುವುದು ಮಾತ್ರ. ಕೇಂದ್ರದ ಮಾಹಿತಿ ಕುರಿತು ನೀವು ಸಿಎಂ ಬಳಿಯೇ ಕೇಳಬೇಕು. ನಮ್ಮ ಗಮನ ಪರಿಹಾರ ಕ್ರಮಗಳತ್ತ ಮಾತ್ರ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.