ETV Bharat / state

ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್​ನಿಂದಲೇ ಕನ್ನ ಆರೋಪ.. 6 ಮಂದಿ ಗ್ರಾಹಕರ ಕೋಟ್ಯಂತರ ಹಣ ದೋಚಿ ಪರಾರಿ

author img

By

Published : Jul 22, 2023, 2:46 PM IST

Updated : Jul 22, 2023, 3:48 PM IST

fraud by Grameen Bank manager
ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್​ನಿಂದಲೇ ಕನ್ನ

ಗ್ರಾಮೀಣ ಬ್ಯಾಂಕ್​ ಮ್ಯಾನೇಜರ್ ಹಾಗೂ ಕಚೇರಿ ಸಹಾಯಕ ಸೇರಿಕೊಂಡು 6 ಜನ ಗ್ರಾಹಕರ 1 ಕೋಟಿ 88 ಲಕ್ಷ 75 ಸಾವಿರ ರೂ. ಹಣ ದೋಚಿ ಪರಾರಿಯಾದ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್​ನಿಂದಲೇ ಕನ್ನ ಆರೋಪ..

ದೇವನಹಳ್ಳಿ(ಬೆಂಗಳೂರು ಗ್ರಾ.): ಗ್ರಾಮೀಣ ಬ್ಯಾಂಕ್​ವೊಂದರಲ್ಲಿ ಗ್ರಾಹಕರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು. ತಮ್ಮ ಜಮೀನು ಮಾರಿ ಅದರಿಂದ ಬಂದ ಹಣವನ್ನ ಬ್ಯಾಂಕ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ನಮ್ಮ ಹಣ ಸೇಫ್​ ಎಂದುಕೊಂಡಿದ್ದ ಗ್ರಾಹಕರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಬ್ಯಾಂಕ್​ ಮ್ಯಾನೇಜರ್ ಬ್ಯಾಂಕ್​ಗೆ ಕನ್ನ ಹಾಕಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣೇಶ್ ಬಾಬು ಹೀಗೆ ಹಣ ಆರ್​​ಟಿಜಿಎಸ್​ ಮಾಡಿ ಪರಾರಿಯಾದ ಆರೋಪಿ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.​ ಹಲವಾರು ವರ್ಷಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ಕರ್ನಾಟಕ ಬ್ಯಾಂಕ್ ಸ್ಥಾಪನೆಯಾಗಿದೆ. ಈ ಭಾಗದ ಗ್ರಾಮೀಣ ಬ್ಯಾಂಕ್​ಗೆ ಸಾಕಷ್ಟು ಹಳ್ಳಿಗಳ ಜನರು ಹಾಲು ಮಾರಾಟದ ಹಣದಿಂದ ಹಿಡಿದು, ಕೃಷಿ ಹಣ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ದರೋಡೆ, ಅಡವಿಟ್ಟ ಗ್ರಾಹಕರ ಚಿನ್ನಾಭರಣ ಕಳ್ಳರ ಪಾಲು: ಬ್ಯಾಂಕ್​ಗೆ ಮುತ್ತಿಗೆ ಹಾಕಿದ ಗ್ರಾಹಕರು

ಈ ಭಾಗದ ಗ್ರಾಮಗಳ ಕೆಲವರ ಜಮೀನು ಈಗಾಗಲೇ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇದರಿಂದ ಬಂದ ಕೋಟ್ಯಂತರ ರೂ. ಹಣವನ್ನ ಇದೇ ಬ್ಯಾಂಕ್​ನಲ್ಲಿ ಜನ ಸ್ಥಿರ ಠೇವಣಿ ಇಟ್ಟಿದ್ದರು. ಈ ಠೇವಣಿಯಲ್ಲಿ ಹಣ ಹೆಚ್ಚು ಇರುವ 6 ಜನರ (ಇಂದ್ರಮ್ಮ, ರಾಮಕ್ಕ, ಪಾಪಮ್ಮ, ಚೈತ್ರಾ ಯಾದವ್ , ಕಿಶೋರ್, ವೆಂಕಟಪ್ಪ) ಖಾತೆಯಲ್ಲಿ ಗ್ರಾಹಕರಿಗೆ ಗೊತ್ತಿಲ್ಲದಂತೆ ಬ್ಯಾಂಕ್ ಮ್ಯಾನೇಜರ್ ಗಣೇಶ್ ಬಾಬು 1 ಕೋಟಿ 88 ಲಕ್ಷದ 75 ಸಾವಿರ ಹಣವನ್ನ ಆರ್​ಟಿಜಿಎಸ್(ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್) ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣ: ಉತ್ತರ ಪ್ರದೇಶದಲ್ಲಿ ಇಬ್ಬರು ಕಳ್ಳರನ್ನು ಸೆರೆಹಿಡಿದ ಪೊಲೀಸರು

ಬ್ಯಾಂಕ್​ ಮ್ಯಾನೇಜರ್ ಗಣೇಶ್ ಬಾಬು ಹಾಗೂ ಕಚೇರಿ ಸಹಾಯಕ ಜಿತೇಂದ್ರಕುಮಾರ್ ಶರ್ಮಾ ಇಬ್ಬರು ಸೇರಿಕೊಂಡು ಜೂನ್​ 3ರಿಂದ ಜುಲೈ 13 ರವರೆಗೂ ಆರ್​ಟಿಜಿಎಸ್ ಮೂಲಕ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಿರುವುದು ಬಯಲಾಗಿದೆ. ಯಾವಾಗ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಕೋಟ್ಯಂತರ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ ಎಂದು ಮುಖ್ಯ ಕೇಂದ್ರ ಕಚೇರಿಯ ಅಧಿಕಾರಿ ಆನಂದ್ ಎಂಬುವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಅನ್ವಯ ಬ್ಯಾಂಕ್​ ಮ್ಯಾನೇಜರ್ ಹಾಗೂ ಕಚೇರಿ ಸಹಾಯಕನನ್ನ ಕೆಲಸದಿಂದ ಅಮಾನತು ಮಾಡಲಾಗಿದೆ. ಗ್ರಾಹಕರಾದ ಇಂದ್ರಮ್ಮ, ರಾಮಕ್ಕ, ಪಾಪಮ್ಮ, ಚೈತ್ರಾ ಯಾದವ್ , ಕಿಶೋರ್, ವೆಂಕಟಪ್ಪ ಈ 6 ಜನ ಗ್ರಾಹಕರ 1 ಕೋಟಿ 88 ಲಕ್ಷದ 75 ಸಾವಿರ ಹಣವನ್ನ ಬ್ಯಾಂಕ್ ಯಾವುದೇ ಮೋಸ ಆಗದಂತೆ ಅವರಿಗೆ ಜಮಾ ಮಾಡಲಾಗುತ್ತದೆ ಎಂದು ಬ್ಯಾಂಕ್​ನ ನೂತನ ಮ್ಯಾನೇಜರ್ ನವೀನ್​ ಕುಮಾರ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಕನ್ನ ಹಾಕಲು ವಿಫಲಯತ್ನ!

Last Updated :Jul 22, 2023, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.