ETV Bharat / state

ಈದ್ಗಾ ಮೈದಾನ ವಿವಾದ : ಶಾಸಕ ಜಮೀರ್ ಅಹ್ಮದ್ ಖಾನ್ ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ

author img

By

Published : Jun 17, 2022, 9:09 PM IST

Updated : Jun 17, 2022, 10:02 PM IST

ಈದ್ಗಾ ಮೈದಾನ ವಿವಾದ
ಈದ್ಗಾ ಮೈದಾನ ವಿವಾದ

ಈದ್ಗಾ ಮೈದಾನ ವಿವಾದ ಕೇಸ್​​ನಲ್ಲಿ ಕಾಂಗ್ರೆಸ್ ಹಾಗೂ ಈ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ..

ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕೇಸ್​​ನಲ್ಲಿ ಕಾಂಗ್ರೆಸ್ ಹಾಗೂ ಈ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಹಿಂದೂ ಸಂಘಟನೆಗಳು, ವಕ್ಫ್ ಬೋರ್ಡ್, ಬಿಬಿಎಂಪಿ ನಡುವೆ ವಾದ-ಪ್ರತಿವಾದಗಳು ನಡೆಯುತ್ತಿದ್ದವು.

ತಮ್ಮ ಆಸ್ತಿ ಎಂದು ಹೇಳುತ್ತಿರುವ ವಕ್ಫ್ ಬೋರ್ಡ್​ಗೆ ದಾಖಲೆ ಸಲ್ಲಿಸುವಂತೆ ಬಿಬಿಎಂಪಿ ನೋಟಿಸ್ ನೀಡಿತ್ತು. ಮೂರು ದಿನದೊಳಗೆ ದಾಖಲೆ ಸಲ್ಲಿಸುವಂತೆ ಪಾಲಿಕೆ ನೀಡಿದ್ದ ಗಡುವು ಇಂದಿಗೆ ಕೊನೆ ಆಗಿದೆ.

ಈದ್ಗಾ ಮೈದಾನ ವಿವಾದ : ಶಾಸಕ ಜಮೀರ್ ಅಹ್ಮದ್ ಖಾನ್ ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ

ಈ ಹಿನ್ನೆಲೆ ಇಂದು ಬಿಬಿಎಂಪಿ ಕೇಂದ್ರ ಕಚೇರಿಗೆ ಬಂದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಜತೆ ಕೆಲ ಸಮಯ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಈ ವರ್ಷದ ಅಂತ್ಯಕ್ಕೆ ಜಮ್ಮು-ಕಾಶ್ಮೀರದ ಚುನಾವಣೆ ಸಾಧ್ಯತೆ : ರಕ್ಷಣಾ ಸಚಿವ ರಾಜನಾಥ್​ ಸಿಂಗ್​

Last Updated :Jun 17, 2022, 10:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.