ETV Bharat / state

ಆರೋಗ್ಯ ಕ್ಷೇತ್ರಕ್ಕಿರುವ ಇತಿಮಿತಿಯಲ್ಲಿ ಬಜೆಟ್​ನಲ್ಲಿ ಅನುದಾನದ ನಿರೀಕ್ಷೆ: ಸಚಿವ ಸುಧಾಕರ್ ‌

author img

By

Published : Mar 7, 2021, 5:01 PM IST

k sudhakar
ಸಚಿವ ಸುಧಾಕರ್ ‌

ಆರೋಗ್ಯ ಕ್ಷೇತ್ರಕ್ಕಿರುವ ಇತಿಮಿತಿಯಲ್ಲಿ ಬಜೆಟ್​ನಲ್ಲಿ ಅನುದಾನ ನಿರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರು: ಜನೌಷಧಿ ದಿವಸ ಅಂಗವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿ ನೂತನ ಜನೌಷಧ ಮಳಿಗೆ ಉದ್ಘಾಟಿಸಿದರು.

ಇದೇ ವೇಳೆ ನಾಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮಾತನಾಡಿ, ಈಗಾಗಲೇ ಪ್ರಧಾನ ಮಂತ್ರಿಗಳು, ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಗೆ ದೊಡ್ಡ ಪುಷ್ಠಿ ಕೊಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 137 ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಆರ್ಥಿಕ ಬಿಕ್ಕಟ್ಟು ಹೊರತಾಗಿಯೂ ಸಿಎಂ ಆರೋಗ್ಯ ಇಲಾಖೆಗೆ ಹೆಚ್ಚು ಒತ್ತು ನೀಡಬೇಕು.

ಈಗಾಗಲೇ ಪೂರ್ವಭಾವಿ ಚರ್ಚೆ ಮಾಡಿದ್ದೇವೆ. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತಗಳ ಆರೋಗ್ಯ ಸೇವೆ ಉತ್ತಮಗೊಳಿಸುವ ಪರಿಕಲ್ಪನೆ ಇದೆ. ಇರುವ ಇತಿಮಿತಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದ್ದು, ಸಮುದಾಯದ ಆರೋಗ್ಯ ಉತ್ತಮ ಕಡೆ ಹೋಗಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.