ETV Bharat / state

ಬೆಂಗಳೂರಲ್ಲಿ ಯುವಕರ ನಡುವೆ ಮಾರಾಮಾರಿ.. ಓರ್ವನ ಕೈ ಕತ್ತರಿಸಿದ ದುಷ್ಕರ್ಮಿಗಳು

author img

By

Published : Sep 28, 2022, 6:38 AM IST

bangalore
ಬೆಂಗಳೂರು

ಬ್ಯಾಟರಾಯನಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಬಾಪೂಜಿನಗರದ ಶೋಭಾ ಟೆಂಟ್ ಬಳಿ ಐವರು ಯುವಕರ ತಂಡ ಓರ್ವನ ಕೈ ಕತ್ತರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಬೆಂಗಳೂರು: ಬ್ಯಾಟರಾಯನಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಬಾಪೂಜಿ ನಗರದಲ್ಲಿ ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಓರ್ವನ ಬಲಭಾಗದ ಕೈ ಕಟ್ ಮಾಡಿರುವ ಪ್ರಕರಣ ನಿನ್ನೆ ರಾತ್ರಿ ನಡೆದಿದೆ‌.

ಶೇಬ್ (20) ಹಲ್ಲೆಗೊಳಗಾದ ಯುವಕ. ರಾತ್ರಿ 8 ಗಂಟೆ ಸುಮಾರಿಗೆ ಬಾಪೂಜಿ ನಗರದ ಶೋಭಾ ಟೆಂಟ್ ಬಳಿ ಪ್ರಕರಣ ನಡೆದಿದೆ. ಮುಬಾರಕ್, ಸಮೀರ್ ಸೇರಿದಂತೆ ಐವರು ಯುವಕರು ಶೇಬ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.‌ ಹಲ್ಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: ಕೋಳಿ‌ ಕದಿಯಲು ಬಂದಿದ್ದೀಯಾ? ಎಂದು ಮಾರಣಾಂತಿಕ ಹಲ್ಲೆ: ಶಿವಮೊಗ್ಗದಲ್ಲಿ ವ್ಯಕ್ತಿ ಸಾವು

ಇನ್ನು, ಹಲ್ಲೆಗೊಳಗಾದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬ್ಯಾಟರಾಯನಪುರ ಪೊಲೀಸರು, ಗಾಯಾಳು ಹೇಳಿಕೆ ದಾಖಲಿಸಿಕೊಂಡು ಹಲ್ಲೆಕೋರರ‌ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.