ETV Bharat / state

ಬೆಂಗಳೂರಿನಲ್ಲಿ ರಾತ್ರಿ ಮನೆಗೆ ನುಗ್ಗಿ ಡಬಲ್ ಮರ್ಡರ್: ನಗ,ನಾಣ್ಯ ದೋಚಿ ಹಂತಕ ಪರಾರಿ

author img

By

Published : Apr 8, 2021, 11:28 AM IST

Double murder, Double murder in Bangalore, Bangalore Double murder, Bangalore Double murder news, Bangalore crime news, ಡಬಲ್​ ಮರ್ಡರ್​, ಬೆಂಗಳೂರಿನಲ್ಲಿ ಡಬಲ್​ ಮರ್ಡರ್​, ಬೆಂಗಳೂರು ಡಬಲ್​ ಮರ್ಡರ್​, ಬೆಂಗಳೂರು ಡಬಲ್​ ಮರ್ಡರ್​ ಸುದ್ದಿ, ಬೆಂಗಳೂರು ಕೊಲೆ ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,
ರಾತ್ರೊ ರಾತ್ರಿ ಮನೆ ನುಗ್ಗಿ ಡಬಲ್ ಮರ್ಡರ್ ಮಾಡಿ ನಗ-ನಾಣ್ಯ ದೋಚಿ ಪರಾರಿಯಾದ ಹಂತಕ!

ಹಂತಕನೊಬ್ಬ ರಾತ್ರೋರಾತ್ರಿ ಮನೆಗೆ ನುಗ್ಗಿ ಜೋಡಿ ಕೊಲೆ ಮಾಡಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇಬ್ಬರನ್ನು ಕೊಲೆಗೈದ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಸಂತೃಪ್ತಿ ನಗರದಲ್ಲಿ ಕಳೆದ ರಾತ್ರಿ ನಡೆದಿದೆ‌.

Double murder, Double murder in Bangalore, Bangalore Double murder, Bangalore Double murder news, Bangalore crime news, ಡಬಲ್​ ಮರ್ಡರ್​, ಬೆಂಗಳೂರಿನಲ್ಲಿ ಡಬಲ್​ ಮರ್ಡರ್​, ಬೆಂಗಳೂರು ಡಬಲ್​ ಮರ್ಡರ್​, ಬೆಂಗಳೂರು ಡಬಲ್​ ಮರ್ಡರ್​ ಸುದ್ದಿ, ಬೆಂಗಳೂರು ಕೊಲೆ ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,
ಕೊಲೆಯಾದ ದೇವಬ್ರತಾ

ಮಮತಾ ಬಸು (75), ಈಕೆಯ ಪುತ್ರನ ಸ್ನೇಹಿತ ದೇವಬ್ರತಾ (41) ಕೊಲೆಯಾದವರೆಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ‌ ಆಧರಿಸಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ಅಧಿಕಾರಿಗಳು ಕೂಡಾ ಪರಿಶೀಲನೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮಮತಾ ಬಸು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಸಂತೃಪ್ತಿ ನಗರದಲ್ಲಿ ಸ್ವಂತ ಮನೆ ಹೊಂದಿದ್ದರು. ಮಗ ಸಹ ಪಕ್ಕದ ಬೀದಿಯಲ್ಲಿ ಪ್ರತ್ಯೇಕ ಮನೆಯೊಂದರಲ್ಲಿ ವಾಸವಾಗಿದ್ದನು.

Double murder, Double murder in Bangalore, Bangalore Double murder, Bangalore Double murder news, Bangalore crime news, ಡಬಲ್​ ಮರ್ಡರ್​, ಬೆಂಗಳೂರಿನಲ್ಲಿ ಡಬಲ್​ ಮರ್ಡರ್​, ಬೆಂಗಳೂರು ಡಬಲ್​ ಮರ್ಡರ್​, ಬೆಂಗಳೂರು ಡಬಲ್​ ಮರ್ಡರ್​ ಸುದ್ದಿ, ಬೆಂಗಳೂರು ಕೊಲೆ ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,
ಕೊಲೆಯಾದ ಮಮತಾ ಬಸು

ಈ ನಡುವೆ ಮಮತಾ ಪುತ್ರನ ಸ್ನೇಹಿತನಾಗಿದ್ದ ಒಡಿಶಾ ಮೂಲದ ದೇವಬ್ರತಾ ಎಂಬುವರಿಗೆ ನಗರದಲ್ಲಿ ಲೆಕ್ಚರಲ್ ಆಗಿ ಕೆಲಸ ದೊರಕಿತ್ತು. ಈ ನಿಟ್ಟಿನಲ್ಲಿ 20 ದಿನಗಳ ಹಿಂದೆ ನಗರಕ್ಕೆ ಬಂದು‌ ಸ್ನೇಹಿತನ ಸಲಹೆಯಂತೆ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದ. ಆದರೆ ನಿನ್ನೆ ರಾತ್ರಿ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿದ್ದಾನೆ‌. ಈ ವೇಳೆ ಚಾಕುವಿನಿಂದ ಮನೆಯಲ್ಲಿದ್ದ ಇಬ್ಬರನ್ನು ಕೊಲೆ ಮಾಡಿದ್ದಾನೆ‌‌. ಬಳಿಕ ಅಲ್ಲಿದ್ದ ಲ್ಯಾಪ್‌ಟಾಪ್, ಮೊಬೈಲ್, ಚಿನ್ನಾಭರಣ, ಎಟಿಎಂ ಕಾರ್ಡ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ‌.

ಪುಟ್ಟೇನಹಳ್ಳಿ ಪೊಲೀಸರು ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.