ETV Bharat / state

ಸೆಸ್ ದರ ಇಳಿಸಿ ಎಪಿಎಂಸಿ ಉಳಿಸಿ: ಕಾಂಗ್ರೆಸ್ ಆಗ್ರಹ

author img

By

Published : Dec 25, 2020, 4:42 PM IST

ತಿದ್ದುಪಡಿಯಾದ ಕಾಯ್ದೆಗಳು ಎಪಿಎಂಸಿ ವ್ಯವಸ್ಥೆಯನ್ನು ಮುಗಿಸುವ ಹುನ್ನಾರವಾಗಿದೆ. ಅದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿ ಸರ್ಕಾರ ಸೆಸ್ ದರ ಏರಿಸಿ ಎಪಿಎಂಸಿ ವ್ಯವಸ್ಥೆಯನ್ನ ಶಿಥಿಲಗೊಳಿಸಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್​ ಆರೋಪಿಸಿದೆ.

congress
ಕಾಂಗ್ರೆಸ್

ಬೆಂಗಳೂರು: ಸೆಸ್ ದರ ಏರಿಕೆ ಮೂಲಕ ರಾಜ್ಯ ಸರ್ಕಾರ ಎಪಿಎಂಸಿ ಮುಗಿಸುವ ಮೊದಲ ಹೆಜ್ಜೆ ಇರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

  • ಎಪಿಎಂಸಿ ಮಾರುಕಟ್ಟೆ ಮುಗಿಸುವ ಸಂಚಿನ ಬಾಗವೇ ಸೆಸ್ ದರ ಏರಿಕೆ.

    ▪️ಹಮಾಲರು
    ▪️ಧಾನ್ಯಗಳನ್ನು ತುಂಬಿಸುವ ಕೂಲಿಗಳು
    ▪️ಧಾನ್ಯಗಳನ್ನು ವಿಂಗಡಿಸುವವರು
    ▪️ಚೀಲ ಮಾರಾಟ ಮಾಡುವವರು#APMC ಗಳಿಂದ ಜೀವನ ಕಟ್ಟಿಕೊಂಡ ಇವರೆಲ್ಲರ ಬದುಕನ್ನು @BJP4Karnataka ಸರ್ಕಾರ ಮುಗಿಸಲು ಹೊರಟಿದೆ@BSYBJPಅವರೆ ಕೂಡಲೇ ಸೆಸ್ ಹೊರೆ ಇಳಿಸಿ, ಎಪಿಎಂಸಿ ಉಳಿಸಿ.

    — Karnataka Congress (@INCKarnataka) December 25, 2020 " class="align-text-top noRightClick twitterSection" data=" ">

ಟ್ವೀಟ್ ಮೂಲಕ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ, ಎಪಿಎಂಸಿ ಮಾರುಕಟ್ಟೆ ಮುಗಿಸುವ ಸಂಚಿನ ಭಾಗವೇ ಸೆಸ್ ದರ ಏರಿಕೆ. ಹಮಾಲರು, ಧಾನ್ಯಗಳನ್ನು ತುಂಬಿಸುವ ಕೂಲಿಗಳು, ಧಾನ್ಯಗಳನ್ನು ವಿಂಗಡಿಸುವವರು, ಚೀಲ ಮಾರಾಟ ಮಾಡುವವರು ಎಪಿಎಂಸಿಗಳಿಂದ ಜೀವನ ಕಟ್ಟಿಕೊಂಡ ಇವರೆಲ್ಲರ ಬದುಕನ್ನು ಬಿಜೆಪಿ ಸರ್ಕಾರ ಮುಗಿಸಲು ಹೊರಟಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಕೂಡಲೇ ಸೆಸ್ ಹೊರೆ ಇಳಿಸಿ, ಎಪಿಎಂಸಿ ಉಳಿಸಿ ಎಂದು ಒತ್ತಾಯಿಸಿದೆ.

ಓದಿ: ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕಾರಿಣಿ: ನಗರ ಸ್ವಚ್ಛವಾಗಿಡಲು ಪೌರ ಕಾರ್ಮಿಕರಿಗೆ ಮನವಿ

ತಿದ್ದುಪಡಿಯಾದ ಕಾಯ್ದೆಗಳು ಎಪಿಎಂಸಿ ವ್ಯವಸ್ಥೆಯನ್ನು ಮುಗಿಸುವ ಹುನ್ನಾರವಾಗಿದೆ. ಅದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿ ಸರ್ಕಾರ ಸೆಸ್ ದರ ಏರಿಸಿ ಎಪಿಎಂಸಿ ವ್ಯವಸ್ಥೆಯನ್ನ ಶಿಥಿಲಗೊಳಿಸಲು ಮುಂದಾಗಿದೆ. ತೆರಿಗೆ ಮುಕ್ತವಾದ ಬಾಹ್ಯ ಮಾರುಕಟ್ಟೆಗೆ ಅವಕಾಶ ಮಾಡಿಕೊಡುವ ಸಂಚು ಮಾಡಿದೆ. ಸಿಎಂ ಬಿಎಸ್​ವೈ ಅವರೇ ಕೂಡಲೇ ಶುಲ್ಕ ಇಳಿಸಿ, ಎಪಿಎಂಸಿ ಮಾರುಕಟ್ಟೆ ಉಳಿಸಿ ಎಂದು ಆಗ್ರಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.