ETV Bharat / state

ಕಾಂಗ್ರೆಸ್‌ಗೆ ಲಸಿಕೆ ವಿತರಿಸಲು‌ ಅನುಮತಿ‌ ನೀಡಬೇಕು: ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ

author img

By

Published : May 31, 2021, 10:38 AM IST

DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕಾಂಗ್ರೆಸ್‌ಗೆ ಲಸಿಕೆ ವಿತರಿಸಲು‌ ಅನುಮತಿ‌ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು: ಕೋವಿಡ್ ಲಸಿಕೆ ನೀಡಿಕೆಯಲ್ಲಿ ವಿಳಂಬವಾಗುತ್ತಿದ್ದು ಸಾಕಷ್ಟು ಮಂದಿ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆಗೆ ಕಾಂಗ್ರೆಸ್ ಪಕ್ಷಕ್ಕೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

  • ಜನರೆಡೆಗೆ ಸರ್ಕಾರದ ನಿರಾಸಕ್ತಿಯ ಕಾರಣದಿಂದಾಗಿ ನಿನ್ನೆ 382 ಕೋವಿಡ್ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.‌ ದುಃಖತಪ್ತ ಕುಟುಂಬಗಳ ಪರಿಸ್ಥಿತಿ ನೋಡಿದರೆ ಹೃದಯ ಭಾರವಾಗುತ್ತದೆ.

    ಜೀವಗಳನ್ನು ಉಳಿಸಲು ಸಮಯ ಅತ್ಯಂತ ಮಹತ್ವದ್ದು ಮತ್ತು ಸರ್ಕಾರ ತಡಮಾಡದೇ ಕಾಂಗ್ರೆಸ್‌ಗೆ ಲಸಿಕೆ ವಿತರಿಸಲು‌ ಅನುಮತಿ‌ ನೀಡಬೇಕು.‌
    #LetCongressVaccinate

    — DK Shivakumar (@DKShivakumar) May 31, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜನರೆಡೆಗೆ ಸರ್ಕಾರದ ನಿರಾಸಕ್ತಿಯ ಕಾರಣದಿಂದಾಗಿ ನಿನ್ನೆ 382 ಕೋವಿಡ್ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ದುಃಖತಪ್ತ ಕುಟುಂಬಗಳ ಪರಿಸ್ಥಿತಿ ನೋಡಿದರೆ ಹೃದಯ ಭಾರವಾಗುತ್ತದೆ. ಜೀವಗಳನ್ನು ಉಳಿಸಲು ಸಮಯ ಅತ್ಯಂತ ಮಹತ್ವದ್ದು ಮತ್ತು ಸರ್ಕಾರ ತಡಮಾಡದೆ ಕಾಂಗ್ರೆಸ್​ಗೆ ಲಸಿಕೆ ವಿತರಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ 100 ಕೋಟಿ ರೂ. ವೆಚ್ಚದಲ್ಲಿ ಲಸಿಕೆ ಖರೀದಿಸಿ ಜನರಿಗೆ ವಿತರಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಪ್ರತಿಯೊಬ್ಬ ಶಾಸಕರ ನಿಧಿಯಿಂದ 1 ಕೋಟಿ ರೂ. ಸಂಗ್ರಹಿಸಿ, ಕಾಂಗ್ರೆಸ್ ನಾಯಕರು, ಪಕ್ಷದಿಂದಲೂ ಧನ ಸಂಗ್ರಹಿಸಿ ಕೋವಿಡ್ ಲಸಿಕೆ ತರುವುದಾಗಿ ಹೇಳಿರುವ ಕಾಂಗ್ರೆಸ್ ಪಕ್ಷ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಬೇಕೆಂದು ಕೇಳುತ್ತಿದೆ. ಆದರೆ ಸರ್ಕಾರ ಇದುವರೆಗೂ ತನ್ನ ನಿರ್ಧಾರ ತಿಳಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಸರ್ಕಾರದ ಮೇಲೆ ಮೇಲಿಂದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.

ಇದನ್ನೂ ಓದಿ: 50 ದಿನಗಳ ಬಳಿಕ ದೇಶದಲ್ಲಿ ಕಡಿಮೆ ಕೋವಿಡ್​​ ಪತ್ತೆ​: ಗುಣಮುಖರ ಪ್ರಮಾಣ ಶೇ.91ಕ್ಕೇರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.