ETV Bharat / state

ಕರ್ನಾಟಕ ಚುನಾವಣೆ 2023: ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯ ವರುಣ, ಡಿಕೆಶಿಗೆ ಕನಕಪುರ

author img

By

Published : Mar 25, 2023, 8:42 AM IST

Updated : Mar 27, 2023, 6:25 PM IST

ಶೀಘ್ರದಲ್ಲೇ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ವಿಧಾನಸಭೆ ಚುನಾವಣೆ
ವಿಧಾನಸಭೆ ಚುನಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಪ್ರಕಟವಾಗಿದೆ. ಒಟ್ಟು 124 ಅಭ್ಯರ್ಥಿಗಳನ್ನ ಒಳಗೊಂಡ ಮೊದಲ ಪಟ್ಟಿಯನ್ನು ಇಂದು ಬೆಳಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ತಿಂಗಳ ಹಿಂದೆಯೇ ಸಿದ್ಧಪಡಿಸಿ ಕಳುಹಿಸಿದ್ದ ಪಟ್ಟಿಯನ್ನು ಪರಿಶೀಲನೆ ನಡೆಸಿ ಇಂದು ಅಂತಿಮಗೊಳಿಸಿದ್ದಾರೆ. ನಿನ್ನೆ ಸಂಜೆ ಕಾಂಗ್ರೆಸ್​​ನ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇತ್ತು. ಆದರೆ, ಕೊಂಚ ವಿಳಂಬವಾಗಿ ಇಂದು ಪಟ್ಟಿ ಬಿಡುಗಡೆ ಆಗಿದ್ದು, 124 ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಉಳಿದಂತೆ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ, ಕೊರಟಗೆರೆಯಿಂದ ಡಾ ಜಿ ಪರಮೇಶ್ವರ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಪಟ್ಟಿಯಲ್ಲಿ ಗಮನಿಸಿದರೆ.. ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ, ಕಾಗವಾಡಕ್ಕೆ ಭರಮ ಗೌಡ ಆಲಗೌಡ ಕಾಗೆ, ಕುಡಚಿ ಎಸ್‌ಸಿ ಕ್ಷೇತ್ರಕ್ಕೆ ಮಹೇಂದ್ರ ತಮ್ಮಣ್ಣನವರ್, ಹುಕ್ಕೇರಿಗೆ ಎಬಿ ಪಾಟೀಲ್, ಯಮಕನಮರಡಿ ಎಸ್​ಟಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರಕ್ಕೆ ಅಂಜಲಿ ನಿಂಬಾಳ್ಕರ್, ಬೈಲಹೊಂಗಲಕ್ಕೆ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗದಿಂದ ಅಶೋಕ್ ಎಂ ಪಟ್ಟಣ್, ಜಮಖಂಡಿಗೆ ಆನಂದ ಸಿದ್ದು ನ್ಯಾಮಗೌಡ, ಹುನಗುಂದದಿಂದ ವಿಜಯಾನಂದ ಎಸ್ ಕಾಶಪ್ಪನವರ್, ಮುದ್ದೇಬಿಹಾಳದಿಂದ ಅಪ್ಪಾಜಿ ಅಲಿಯಾಸ್ ಸಿ.ಎಸ್. ನಾಡಗೌಡ, ಬಸವನಬಾಗೇವಾಡಿಯಿಂದ ಶಿವಾನಂದ ಪಾಟೀಲ್.

ಕಾಂಗ್ರೆಸ್​ ಮೊದಲ ಪಟ್ಟಿ
ಕಾಂಗ್ರೆಸ್​ ಮೊದಲ ಪಟ್ಟಿ

ಬಬಲೇಶ್ವರದಿಂದ ಎಂಬಿ ಪಾಟೀಲ್, ಇಂಡಿಯಿಂದ ಯಶವಂತರಾಯ ಗೌಡ ವಿ ಪಾಟೀಲ್, ಜೇವರ್ಗಿಯಿಂದ ಡಾ. ಅಜಯ್ ಸಿಂಗ್, ಸುರಪುರದಿಂದ ರಾಜ ವೆಂಕಟಪ್ಪ ನಾಯಕ್, ಶಹಾಪುರದಿಂದ ಶರಣಬಸಪ್ಪ ಗೌಡ, ಚಿತ್ತಾಪುರ ಎಸ್​ಟಿ ಕ್ಷೇತ್ರದಿಂದ ಪ್ರಿಯಾಂಕ ಖರ್ಗೆ, ಸೇಡಂನಿಂದ ಡಾ ಶರಣಪ್ರಕಾಶ್ ಪಾಟೀಲ್, ಚಿಂಚೋಳಿ ಎಸ್​ಸಿ ಕ್ಷೇತ್ರಕ್ಕೆ ಸುಭಾಷ್ ವಿ ರಾಥೋಡ್, ಕಲಬುರ್ಗಿ ಉತ್ತರ ಕ್ಷೇತ್ರಕ್ಕೆ ಖನಿಜ ಫಾತಿಮಾ, ಆಳಂದ ಕ್ಷೇತ್ರದಿಂದ ಬಿಆರ್ ಪಾಟೀಲ್, ಹುಮ್ನಾಬಾದ್​ನಿಂದ ರಾಜಶೇಖರ್ ವಿ ಪಾಟೀಲ್, ಬೀದರ್ ದಕ್ಷಿಣದಿಂದ ಅಶೋಕ್ ಖೇಣಿ, ಬೀದರ್​ನಿಂದ ರಹೀಮ್ ಖಾನ್, ಭಾಲ್ಕಿಯಿಂದ ಈಶ್ವರ್ ಖಂಡ್ರೆ, ರಾಯಚೂರು ಗ್ರಾಮಾಂತರ ಎಸ್​ಟಿ ಕ್ಷೇತ್ರಕ್ಕೆ ಬಸವನಗೌಡ ದದ್ದಲ್.

ಕಾಂಗ್ರೆಸ್​ ಮೊದಲ ಪಟ್ಟಿ
ಕಾಂಗ್ರೆಸ್​ ಮೊದಲ ಪಟ್ಟಿ

ಮಸ್ಕಿ ಎಸ್‌ಟಿ ಕ್ಷೇತ್ರಕ್ಕೆ ಬಸವನಗೌಡ ತುರುವಿಹಾಳ, ಕುಷ್ಟಗಿ ವಿಧಾನಸಭೆ ಕ್ಷೇತ್ರದಿಂದ ಅಮರೇಗೌಡ ಪಾಟೀಲ್ ಬಯ್ಯಾಪುರ, ಕನಕಗಿರಿ ಎಸ್​ಸಿ ವಿಧಾನಸಭೆ ಕ್ಷೇತ್ರದಿಂದ ಶಿವರಾಜ್ ಸಂಗಪ್ಪ ತಂಗಡಗಿ, ಯಲಬುರ್ಗಾದಿಂದ ಬಸವರಾಜ್ ರಾಯರೆಡ್ಡಿ, ಕೊಪ್ಪಳದಿಂದ ಕೆ ರಾಘವೇಂದ್ರ, ಗದಗ ವಿಧಾನಸಭೆ ಕ್ಷೇತ್ರಕ್ಕೆ ಹೆಚ್ ಕೆ ಪಾಟೀಲ್, ರೋಣದಿಂದ ಬಿಎಸ್ ಪಾಟೀಲ್, ಹುಬ್ಬಳ್ಳಿ ಧಾರವಾಡ ಪೂರ್ವದಿಂದ ಪ್ರಸಾದ್ ಅಬ್ಬಯ್ಯ, ಹಳಿಯಾಳ ಕ್ಷೇತ್ರಕ್ಕೆ ಆರ್ ವಿ ದೇಶಪಾಂಡೆ, ಕಾರವಾರ ಸತೀಶ್ ಸೈಲ್, ಭಟ್ಕಳ ಮಂಕಾಳ ಸುಬ್ಬಾ ವಿದ್ಯಾ, ಹಾನಗಲ್ ಶ್ರೀನಿವಾಸ್ ವಿ ಮಾನೆ, ಹಾವೇರಿ ಎಸ್ ಸಿ ರುದ್ರಪ್ಪ ಲಮಾಣಿ, ಬ್ಯಾಡಗಿ ಬಸವರಾಜ್ ಎಂ ಶಿವಣ್ಣನವರ್, ಹಿರೇಕೆರೂರು ಯು ಬಿ ಬಣಕಾರ್, ರಾಣೆಬೆನ್ನೂರು ಪ್ರಕಾಶ್ ಕೆ ಕೋಳಿವಾಡ, ಹಡಗಲಿ ಎಸ್ ಟಿ ಪಿ ಪರಮೇಶ್ವರ್ ನಾಯಕ್.

ಕಾಂಗ್ರೆಸ್​ ಮೊದಲ ಪಟ್ಟಿ
ಕಾಂಗ್ರೆಸ್​ ಮೊದಲ ಪಟ್ಟಿ

ಹಗರಿಬೊಮ್ಮನಹಳ್ಳಿ ಎಸ್ ಕ್ಷೇತ್ರಕ್ಕೆ ಭೀಮಾ ನಾಯಕ್, ವಿಜಯನಗರಕ್ಕೆ ಎಚ್ ಆರ್ ಗವಿಯಪ್ಪ, ಕಂಪ್ಲಿ ಎಸ್ ಟಿ ಕ್ಷೇತ್ರಕ್ಕೆ ಜೆಎನ್ ಗಣೇಶ್, ಬಳ್ಳಾರಿ ಎಸ್ ಟಿ ಕ್ಷೇತ್ರಕ್ಕೆ ಬಿ ನಾಗೇಂದ್ರ, ಕಡೂರು ಎಸ್ ಟಿ ಕ್ಷೇತ್ರಕ್ಕೆ ಈ ತುಕಾರಾಂ, ಚಳ್ಳಕೆರೆ ಎಸ್ ಟಿ ಕ್ಷೇತ್ರಕ್ಕೆ ಟಿ ರಘುಮೂರ್ತಿ, ಹಿರಿಯೂರು ಕ್ಷೇತ್ರಕ್ಕೆ ಡಿ ಸುಧಾಕರ್, ಹೊಸದುರ್ಗ ಕ್ಷೇತ್ರಕ್ಕೆ ಗೋವಿಂದಪ್ಪ ಬಿಜಿ, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಎಸ್ ಎಸ್ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಎಸಿ ಕ್ಷೇತ್ರಕ್ಕೆ ಕೆಎಸ್ ಬಸವರಾಜ್, ಭದ್ರಾವತಿಯಿಂದ ಸಂಗಮೇಶ್ವರ ಬಿಕೆ, ಸೊರಬ ಕ್ಷೇತ್ರಕ್ಕೆ ಮಧು ಬಂಗಾರಪ್ಪ, ಸಾಗರ ವಿಧಾನಸಭೆ ಕ್ಷೇತ್ರಕ್ಕೆ ಗೋಪಾಲಕೃಷ್ಣ ಬೇಳೂರು, ಬೈಂದೂರು ಕ್ಷೇತ್ರಕ್ಕೆ ಕೆ.ಗೋಪಾಲ್ ಪೂಜಾರಿ, ಕುಂದಾಪುರದಿಂದ ಎಂ.ದಿನೇಶ್ ಹೆಗಡೆ, ಕಾಪು ಕ್ಷೇತ್ರಕ್ಕೆ ವಿನಯ್ ಕುಮಾರ್ ಸೊರಕೆ.

ಶೃಂಗೇರಿಯಿಂದ ಟಿ.ಡಿ.ರಾಜೇಗೌಡ, ಚಿಕ್ಕನಾಯಕನಹಳ್ಳಿಯಿಂದ ಕಿರಣ್ ಕುಮಾರ್, ತಿಪಟೂರು ಕ್ಷೇತ್ರದಿಂದ ಕೆ ಷಡಕ್ಷರಿ, ತುರುವೇಕೆರೆಯಿಂದ ಕಾಂತರಾಜ್ ಬಿ.ಎಂ, ಕುಣಿಗಲ್​ನಿಂದ ಡಾ.ಹೆಚ್​.ಡಿ. ರಂಗನಾಥ್, ಕೊರಟಗೆರೆಯಿಂದ ಎಸ್‌ಸಿ - ಡಾ. ಜಿ. ಪರಮೇಶ್ವರ, ಸಿರಾದಿಂದ ಟಿ.ಬಿ. ಜಯಚಂದ್ರ, ಪಾವಗಡದಿಂದ (ಎಸ್ಸಿ) ಹೆಚ್​.ವಿ. ವೆಂಕಟೇಶ್, ಮಧುಗಿರಿಯಿಂದ ಕೆ.ಎನ್. ರಾಜಣ್ಣ, ಗೌರಿಬಿದನೂರು ಕ್ಷೇತ್ರದಿಂದ ಶಿವಶಂಕರ ರೆಡ್ಡಿ, ಎನ್.ಹೆಚ್​, ಬಾಗೇಪಲ್ಲಿಯಿಂದ ಎಸ್.ಎನ್. ಸುಬ್ಬಾರೆಡ್ಡಿ, ಚಿಂತಾಮಣಿಯಿಂದ ಡಾ. ಎಂ.ಸಿ. ಸುಧಾಕರ್, ಶ್ರೀನಿವಾಸಪುರಯಿಂದ ಕೆ.ಆರ್. ರಮೇಶ್ ಕುಮಾರ್, ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) ಕ್ಷೇತ್ರದಿಂದ (SC) ರೂಪಕಲಾ ಎಂ, ಬಂಗಾರಪೇಟೆಯಿಂದ (ಎಸ್ಸಿ) ಎಸ್.ಎನ್. ನಾರಾಯಣಸ್ವಾಮಿ, ಮಾಲೂರುಯಿಂದ ಕೆ.ವೈ. ನಂಜೇಗೌಡ, ಬ್ಯಾಟರಾಯನಪುರಯಿಂದ ಕೃಷ್ಣ ಬೈರೇಗೌಡ, ರಾಜರಾಜೇಶ್ವರಿನಗರಯಿಂದ ಕುಸುಮಾ ಹೆಚ್​,

ಕಾಂಗ್ರೆಸ್​ ಮೊದಲ ಪಟ್ಟಿ
ಕಾಂಗ್ರೆಸ್​ ಮೊದಲ ಪಟ್ಟಿ

ಮಲ್ಲೇಶ್ವರಂ ಕ್ಷೇತ್ರದಿಂದ ಅನುಪ್ ಅಯ್ಯಂಗಾರ್, ಹೆಬ್ಬಾಳಯಿಂದ ಸುರೇಶ್ ಬಿ.ಎಸ್, ಸರ್ವಜ್ಞನಗರಯಿಂದ ಕೆ.ಜೆ. ಜಾರ್ಜ್, ಶಿವಾಜಿನಗರಯಿಂದ ರಿಜ್ವಾನ್ ಅರ್ಷ, ಶಾಂತಿನಗರಯಿಂದ ಎನ್.ಎ.ಹಾರಿಸ್, ಗಾಂಧಿ ನಗರಯಿಂದ ದಿನೇಶ್ ಗುಂಡೂರಾವ್, ರಾಜಾಜಿನಗರಯಿಂದ ಪುಟ್ಟಣ್ಣ, ಗೋವಿಂದರಾಜ್ ನಗರಯಿಂದ - ಪ್ರಿಯಾಕೃಷ್ಣ, ವಿಜಯನಗರಯಿಂದ ಎಂ. ಕೃಷ್ಣಮಪ್ಪ, ಚಾಮರಾಜಪೇಟೆಯಿಂದ ಜಮೀರ್ ಅಹಮದ್ ಖಾನ್, ಬಸವನಗುಡಿಯಿಂದ ಯು.ಬಿ. ವೆಂಕಟೇಶ್, ಬಿಟಿಎಂ ಲೇಔಟ್ ಕ್ಷೇತ್ರದಿಂದ ರಾಮಲಿಂಗಾ ರೆಡ್ಡಿ, ಜಯನಗರಯಿಂದ - ಸೌಮ್ಯ ಆರ್, ಮಹದೇವಪುರಯಿಂದ (ಎಸ್‌ಸಿ) ಹೆಚ್ ನಾಗೇಶ್, ಆನೇಕಲ್ ಕ್ಷೇತ್ರದಿಂದ (ಎಸ್‌ಸಿ) ಬಿ.ಶಿವಣ್ಣ, ಹೊಸಕೋಟೆಯಿಂದ ಶರತ್ ಕುಮಾರ್ ಬಚ್ಚೇಗೌಡ, ದೇವನಹಳ್ಳಿಯಿಂದ (ಎಸ್‌ಸಿ) ಕೆ.ಹೆಚ್. ಮುನಿಯಪ್ಪ, ದೊಡ್ಡಬಳ್ಳಾಪುರಯಿಂದ ಟಿ. ವೆಂಕಟರಾಮಯ್ಯ, ನೆಲಮಂಗಲಯಿಂದ (ಎಸ್‌ಸಿ) ಶ್ರೀನಿವಾಸಯ್ಯ ಎನ್, ಮಾಗಡಿಯಿಂದ ಹೆಚ್.ಸಿ. ಬಾಲಕೃಷ್ಣ, ರಾಮನಗರಯಿಂದ ಇಕ್ಬಾಲ್ ಹುಸೇನ್ ಹೆಚ್ ಎ, ಕನಕಪುರಯಿಂದ ಡಿ ಕೆ ಶಿವಕುಮಾರ್.

ಮಳವಳ್ಳಿಯಿಂದ (ಎಸ್‌ಸಿ) ಪಿ.ಎಂ. ನರೇಂದ್ರಸ್ವಾಮಿ, ಶ್ರೀರಂಗಪಟ್ಟಣಯಿಂದ AB ರಮೇಶ್ ಬಂಡಿಸಿದ್ದೇಗೌಡ, ನಾಗಮಂಗಲಯಿಂದ ಎನ್.ಚಲುವರಾಯಸ್ವಾಮಿ, ಹೊಳೆನರಸೀಪುರಯಿಂದ ಶ್ರೇಯಸ್ ಎಂ. ಪಟೇಲ್, ಸಕಲೇಶಪುರಯಿಂದ (SC) ಮುರಳಿ ಮೋಹನ್, ಬೆಳ್ತಂಗಡಿಯಿಂದ ರಕ್ಷಿತ್ ಶಿವರಾಮ್, ಮೂಡಬಿದ್ರಿಯಿಂದ ಮಿಥುನ್ ಎಂ.ರೈ, ಮಂಗಳೂರುಯಿಂದ ಯು.ಟಿ. ಖಾದರ್, ಬಂಟ್ವಾಳಯಿಂದ ರಮಾನಾಥ ರೈ ಬಿ, ಸುಳ್ಯಯಿಂದ (ಎಸ್ಸಿ) ಕೃಷ್ಣಪ್ಪ ಜಿ, ವಿರಾಜಪೇಟೆಯಿಂದ ಎ.ಎಸ್. ಪೊನ್ನಣ್ಣ, ಪಿರಿಯಾಪಟ್ಟಣಯಿಂದ ಕೆ. ವೆಂಟಕೇಶ್, ಕೃಷ್ಣರಾಜನಗರಯಿಂದ ಡಿ. ರವಿಶಂಕರ್, ಹುಣಸೂರು ಕ್ಷೇತ್ರದಿಂದ ಹೆಚ್ ಪಿ ಮಂಜುನಾಥ್, ಹೆಚ್​ಡಿ ಕೋಟೆಯಿಂದ (ಎಸ್ಟಿ) ಅನಿಲ್ ಕುಮಾರ್ ಸಿ, ನಂಜನಗೂಡು (SC) ದರ್ಶನ್ ಧ್ರುವನಾರಾಯಣ, ನರಸಿಂಹರಾಜಯಿಂದ ತನ್ವೀರ್ ಸೇಠ್, ವರುಣಯಿಂದ ಸಿದ್ದರಾಮಯ್ಯ, ಟಿ.ನರಸೀಪುರಯಿಂದ (ಎಸ್ಸಿ) ಹೆಚ್​.ಸಿ.ಮಹದೇವಪ್ಪ, ಹನೂರು ಕ್ಷೇತ್ರದಿಂದ ಆರ್. ನರೇಂದ್ರ, ಚಾಮರಾಜನಗರಯಿಂದ ಸಿ.ಪುಟ್ಟರಂಗ ಶೆಟ್ಟಿ, ಗುಂಡ್ಲುಪೇಟೆಯಿಂದ ಹೆಚ್​.ಎಂ. ಗಣೇಶ್ ಪರಸಾದ್ ಅವರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ.

ಸಿದ್ದರಾಮಯ್ಯ ಕ್ಷೇತ್ರ ಗೊಂದಲ ನಿವಾರಣೆ: ಕ್ಷೇತ್ರ ಆಯ್ಕೆಯ ಭಾರಿ ಗೊಂದಲದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಡೆಗೂ ತಮ್ಮ ತವರು ಕ್ಷೇತ್ರವಾದ ವರುಣಕ್ಕೆ ವಾಪಸ್ಸಾಗಿದ್ದಾರೆ. ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದ ಮಾಜಿ ಸಿಎಂ ಹೈಕಮಾಂಡ್​ ಸೂಚನೆಯಂತೆ ಮತ್ತು ಪಕ್ಷದ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಪುತ್ರ ಯತೀಂದ್ರ ಸ್ಪರ್ಧಿಸುವ ಕ್ಷೇತ್ರದಿಂದ ತಾವೇ ಕಣಕ್ಕಿಳಿಯಲಿದ್ದಾರೆ.

ಕೋಲಾರ ಕೈಬಿಟ್ಟ ಮಾಜಿ ಸಿಎಂ: ಕೋಲಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಾವು ಇಲ್ಲಿಂದಲೇ ಸ್ಪರ್ಧಿಸುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಘೋಷಿಸಿಕೊಂಡಿದ್ದರು. ಬಾದಾಮಿಯನ್ನು ತೊರೆದು ಕೋಲಾರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಅಲ್ಲಿನ ಕಾರ್ಯಕರ್ತರು ಮತ್ತು ನಾಯಕರು ಕೂಡ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಒತ್ತಡ ಹೇರಿದ್ದರು. ಆದರೆ, ಆಂತರಿಕ ಸಮೀಕ್ಷೆ ವರದಿಯಲ್ಲಿ ಗೆಲುವು ತುಸು ಕಷ್ಟ ಎಂದೇ ಹೇಳಲಾಗಿತ್ತು.

ಇದರಿಂದ ಕೋಲಾರ ಅಷ್ಟು ಸುರಕ್ಷಿತವಲ್ಲ ಎಂಬುದನ್ನು ಪಕ್ಷದ ನಾಯಕ ರಾಹುಲ್​ ಗಾಂಧಿ ಅವರೇ ಪರ್ಯಾಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಂತೆ ಸೂಚ್ಯವಾಗಿ ಹೇಳಿದ್ದರು. ಇದರಿಂದ ಕೋಲಾರದ ಬದಲಾಗಿ ವರುಣಾದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದರೆ, ದಿನೇಶ್​ ಗುಂಡೂರಾವ್ ಗಾಂಧಿನಗರ, ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್​ ಅವರು ಕೊಟರಗೆರೆಯಿಂದ ಸ್ಪರ್ಧಿಸಲಿದ್ದಾರೆ. ಅವರು ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು.

ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವರಾಗಿರುವ ಕೆಎಚ್ ಮುನಿಯಪ್ಪಗೆ ದೇವನಹಳ್ಳಿ ಇಂದ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದು ವಿಶೇಷ. ಕೆಲವು ಹಾಲಿ ಶಾಸಕರಿಗೆ ಈ ಸಾರಿ ಟಿಕೆಟ್ ಘೋಷಣೆ ಆಗಿಲ್ಲ. ಎರಡನೇ ಪಟ್ಟಿಯಲ್ಲಿ ಹೆಸರು ಬರುವ ಸಾಧ್ಯತೆ ಇದೆ.

ಕೆಲ ಶಾಸಕರ ಹೆಸರನ್ನು ಮೊದಲ ಪಟ್ಟಿಯಲ್ಲಿ ಪರಿಗಣಿಸಿಲ್ಲ. ಅವರ ವಿವರ ಇಂತಿದೆ..: ಅಖಂಡ ಶ್ರೀನಿವಾಸ ಮೂರ್ತಿಗೆ ಪುಲಕೇಶಿ ನಗರದಿಂದ ಟಿಕೆಟ್ ಘೋಷಣೆ ಆಗಿಲ್ಲ. ಹರಿಹರ ಶಾಸಕ ರಾಮಪ್ಪ, ಶಿಡ್ಲಘಟ್ಟದಲ್ಲಿ ಮುನಿಯಪ್ಪ, ಕುಂದುಗೋಳದಿಂದ ಕುಸುಮ ಶಿವಳ್ಳಿ, ಕಲಘಟಗಿಯಿಂದ ಸಂತೋಷ್ ಲಾಡ್ ಹಾಗೂ ವಿನಯ್ ಕುಲಕರ್ಣಿ ಹೆಸರನ್ನು ಸಹ ಪೆಂಡಿಂಗ್​ನಲ್ಲಿ ಇಡಲಾಗಿದೆ. ಇಬ್ಬರು ಪ್ರಬಲ ಆಕಾಂಕ್ಷಿಗಳ ಹೆಸರಿರುವ ಕ್ಷೇತ್ರಗಳನ್ನು ಪೆಂಡಿಂಗ್ ಇಟ್ಟ ಹೈಕಮಾಂಡ್ 124 ಮಂದಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಓದಿ: ಕಾಂಗ್ರೆಸ್​ನ ‘ಗ್ಯಾರಂಟಿ ಸ್ಕೀಂ’' ಪ್ರಣಾಳಿಕೆ ಅಸ್ತ್ರಕ್ಕೆ ಬಿಜೆಪಿಯಿಂದ ‘ಮೀಸಲಾತಿ ಗಿಫ್ಟ್’ ಬ್ರಹ್ಮಾಸ್ತ್ರ ..!?

Last Updated :Mar 27, 2023, 6:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.