ETV Bharat / state

ತನ್ನ ಸಂಸಾರ ನೆಟ್ಟಗೆ ಇಟ್ಕೊಳ್ಳದ ಪಾಪಿ ನಾದಿನಿಯ ಕತ್ತು ಕೊಯ್ದುಬಿಟ್ಟ

author img

By

Published : Nov 15, 2020, 8:29 PM IST

bengaluru reletive murder case news ramamurthy nagara
ಸಂಸಾರ ಸರಿಪಡಿಸಿ ಎಂದು ಮಾತುಕತೆ ಹೋದ... ನಾದಿನಿ ಕತ್ತು ಕೊಯ್ದ

ಕೈಯಲ್ಲಿದ್ದ ಚಾಕುವಿನಿಂದ ಮೈ-ಕೈಗಳಿಗೆ ಚುಚ್ಚಿಕೊಂಡು ಸಾಯಲು ಮುಂದಾಗಿದ್ದಾನೆ. ಈ ವೇಳೆ ರಕ್ತಸ್ರಾವಗೊಂಡು ಕೆಳಬಿದ್ದಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ವಿಜಯ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ..

ಬೆಂಗಳೂರು : ಕೌಟುಂಬಿಕ ಕಲಹಕ್ಕಾಗಿ ನಾದಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ತಾನು‌ ಸಹ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಾವಣ್ಯ ಕೊಲೆಯಾದ ಮಹಿಳೆಯಾಗಿದ್ದು, ಈಕೆಯ ತಂಗಿ ಗಂಡ ವಿಜಯ್ ಕುಮಾರ್ ಕೃತ್ಯವೆಸಗಿದ ಆರೋಪಿ. ವಿವಾಹಿತನಾಗಿದ್ದ ವಿಜಯ್ ಕುಮಾರ್ ಪ್ರತಿದಿನ‌ ಕುಡಿದು ಹೆಂಡತಿಗೆ ಕಿರುಕುಳ ನೀಡುತ್ತಿದ್ದನಂತೆ. ಕಿರುಕುಳಕ್ಕೆ ಬೇಸತ್ತು ಈತನ ಪತ್ನಿ ಇತ್ತೀಚೆಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೌರ್ಜನ್ಯ ಆರೋಪದಡಿ ದೂರು ನೀಡಿದ್ದಳು.

ಇದಾದ ಕೆಲ ದಿನಗಳ ಬಳಿಕ ಹೆಂಡತಿಯೊಂದಿಗೆ ರಾಜಿ ಮಾಡಿ ಕೊಡುವಂತೆ ನಾದಿನಿ ಲಾವಣ್ಯಳನ್ನು‌ ಒತ್ತಾಯಿಸಿದ್ದ.‌‌ ಇದಕ್ಕೆ ಲಾವಣ್ಯ ಸಮ್ಮತಿ ನೀಡಿರಲಿಲ್ಲ. ಇದಕ್ಕೆ‌ ಅಸಮಾಧಾನಗೊಂಡ ಆರೋಪಿ ವಿಜಯ್‌, ರಾಮಮೂರ್ತಿನಗರದ ಮುತ್ತುಮಾರಿಯಮ್ಮ ದೇವಸ್ಥಾನದ ಬಳಿಯಿರುವ ಲಾವಣ್ಯ ಮನೆಗೆ ಮಾತುಕತೆಗೆ ಅಂತಾ ಬಂದಿದ್ದಾನೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ವಿಜಯ್ ನೇಣುಬಿಗಿದುಕೊಳ್ಳುವ ಪ್ರಯತ್ನ ವಿಫಲವಾಗಿದೆ.

ಕೈಯಲ್ಲಿದ್ದ ಚಾಕುವಿನಿಂದ ಮೈ-ಕೈಗಳಿಗೆ ಚುಚ್ಚಿಕೊಂಡು ಸಾಯಲು ಮುಂದಾಗಿದ್ದಾನೆ. ಈ ವೇಳೆ ರಕ್ತಸ್ರಾವಗೊಂಡು ಕೆಳಗೆ ಬಿದ್ದಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ವಿಜಯ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.