ಬೆಂಗಳೂರು: ಇನ್ನೊಂದು ವಾರದಲ್ಲಿ ವಿಧಾನಸೌಧಕ್ಕೆ ಬಾಂಬ್ ಇಡುತ್ತೇವೆ ಎಂದು ದುಷ್ಕರ್ಮಿಯೊಬ್ಬ ಕರೆ ಮಾಡಿ ಬೆದರಿಸಿರುವ ಘಟನೆ ಬುಧವಾರ ನಡೆದಿದೆ.
ವಿಠ್ಠಲ್ ಕುಂಬಾರ್ ಎಂಬಾತನ ಹೆಸರಿನಲ್ಲಿ ಕರೆ ಮಾಡಿದ್ದು, ಬಾಂಬ್ ಇಡುವುದಾಗಿ ಬೆದರಿಕೆವೊಡ್ಡಲಾಗಿದೆ. ಟಕ್ಲಾ ಚಾಟ್ ಎಂಬ ಖಾತೆಯಿಂದಲೂ ಇನ್ನೊಂದು ವಾರದಲ್ಲಿ ವಿಧಾನಸೌಧಕ್ಕೆ ಬಾಂಬ್ ಇಡುತ್ತೇವೆ. ತಾಕತ್ ಇದ್ದರೆ ತಡೆಯಿರಿ ಎಂದು ಸಂದೇಶ ರವಾನಿಸಲಾಗಿದೆ.
ಸಂದೇಶ ರವಾನಿಸಿದ್ದ ಫೇಸ್ಬುಕ್ ಖಾತೆ ಹೊಂದಿರುವವನ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.