ETV Bharat / state

ಆನ್​ಲೈನ್ ಜೂಜು ಗೀಳು: ಸಾಲದ ಹೊರೆಗೆ ಹೆದರಿ ಯುವಕ ಆತ್ಮಹತ್ಯೆ

author img

By

Published : Dec 28, 2022, 5:45 PM IST

Updated : Jan 1, 2023, 9:20 AM IST

ಯುವಕ ಆತ್ಮಹತ್ಯೆ
ಯುವಕ ಆತ್ಮಹತ್ಯೆ

ಆನ್​ಲೈನ್ ಜೂಜಾಟದ ಗೀಳು ಇಲ್ಲೊಬ್ಬ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ.

ನೆಲಮಂಗಲ: ಆನ್​ಲೈನ್ ಜೂಜಾಟಕ್ಕಾಗಿ ಯುವಕನೊಬ್ಬ ಸಾಕಷ್ಟು ಸಾಲ ಮಾಡಿ, ವಾಪಸ್‌ ನೀಡುವ ಬಗ್ಗೆ ಆತಂಕಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಮಾಗಡಿ ರಸ್ತೆಯ ಸೀಗೇಹಳ್ಳಿ ಗೇಟ್​ನ ನಿವಾಸಿ ನಾಗರಾಜ್ (19) ಸಾವಿಗೀಡಾದ ವ್ಯಕ್ತಿ.

ನಾಗರಾಜ್ ರಿಯಲ್ ಎಸ್ಟೇಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಬಳದ ಹಣವನ್ನು ಆನ್​ಲೈನ್ ಗೇಮ್‌ಗೆ ಹಾಕುತ್ತಿದ್ದ. ಇದಕ್ಕಾಗಿ ಸ್ನೇಹಿತರ ಬಳಿಯೂ ಕೈ ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಯುವಕನನ್ನು ತಾಯಿ ಬೆಳೆಸಿದ್ದರು ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಭಟ್ಕಳ: ಬಾಲಕನ ಕಿಡ್ನಾಪ್ ಪ್ರಕರಣದ ಮಾಸ್ಟರ್ ಮೈಂಡ್ ಬಂಧನ

Last Updated :Jan 1, 2023, 9:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.