ETV Bharat / state

ಅಭಿನಯ ಚಕ್ರವರ್ತಿಗೊಲಿದ 'ಶಿವಗಂಗಾ ಶ್ರೀ ಪ್ರಶಸ್ತಿ'

author img

By

Published : Apr 5, 2021, 11:39 AM IST

shivaganga-shri-award-winning-kichcha-sudeep
ಅಭಿನಯ ಚಕ್ರವರ್ತಿಗೆ ಶಿವಗಂಗಾ ಶ್ರೀ ಪ್ರಶಸ್ತಿ

ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರರಂಗದಲ್ಲಿ 25 ಪೂರೈಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ 'ಶಿವಗಂಗಾ ಶ್ರೀ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

ನೆಲಮಂಗಲ : ದಕ್ಷಿಣಕಾಶಿ ಶಿವಗಂಗೆಯ ಮೇಲಣ ಗವಿಮಠದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳ ಸಮ್ಮುಖದಲ್ಲಿ ನಟ ಸುದೀಪ್‌ ಅವರಿಗೆ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಭಿನಯ ಚಕ್ರವರ್ತಿಗೆ ಶಿವಗಂಗಾ ಶ್ರೀ ಪ್ರಶಸ್ತಿ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುದೀಪ್, ಕೊರೊನಾ ಬಗ್ಗೆ ಅಸಡ್ಡೆ ಬೇಡ ಜಾಗೃತರಾಗಿ. ಮಾರಣಾಂತಿಕ ರೋಗದ ಬಗ್ಗೆ ಅರಿವಿರಲಿ. ಈ ವೈರಸ್ ಭಯಾನಕವಾಗಿದೆ ಜಾಗೃತಿ ವಹಿಸಿ, ಮಾಸ್ಕ್ ಹಾಕಿಕೊಳ್ಳಿ ಅಣ್ಣ ತಮ್ಮಂದಿರೇ ಎಂದು ಕರೆ ನೀಡಿದರು. ಇದೇ ವೇಳೆ, ಈ ಪ್ರಶಸ್ತಿ ಬಹಳ ತೂಕವಾಗಿದೆ, ಇದನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದೇನೆ ಎಂದರು.

ಸಮಾರಂಭದಲ್ಲಿ ಹಲವಾರು ಗಣ್ಯರು ಸೇರಿದಂತೆ ಮಠಾಧೀಶರು ಹಾಗೂ ಮೇಲಣ ಗವಿಮಠದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಇದನ್ನೂ ಓದಿ: ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ 'ತೋತಾಪುರಿ' ಚಿತ್ರತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.