ದೊಡ್ಡಬಳ್ಳಾಪುರ: ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್ವೊಂದು ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದುಹೋಗುವ ಮೂಲಕ ರೈತರ ತೋಟಕ್ಕೂ ನುಗ್ಗಿದೆ.
ತಾಲೂಕಿನ ಗುಂಗೀರ್ಲಹಳ್ಳಿ ಬಳಿ ಡಾಂಬರ್ ರಸ್ತೆಯನ್ನು ಸೀಳಿಕೊಂಡು ನೀರು ಕಾರಂಜಿಯಂತೆ ಹೊರ ಚಿಮ್ಮಿದೆ. ಭೂಮಿಯೊಳಗೆ ಹಾದು ಹೋಗಿರುವ ಪೈಪ್ನ ವೆಲ್ಡಿಂಗ್ ಮಾಡದ ಕಾರಣ ಡಾಂಬರ್ ರಸ್ತೆಯನ್ನು ಸೀಳಿ ನೀರು ಕಾರಂಜಿಯಂತೆ ಚಿಮ್ಮಿದೆ.
ಹೊರಚಿಮ್ಮಿದ ನೀರು ಅಕ್ಕಪಕ್ಕದ ತೋಟಗಳಗೂ ನುಗ್ಗಿದೆ. ಕಾರಂಜಿಯಂತೆ ಚಿಮ್ಮುತ್ತಿದ್ದ ನೀರು ನೋಡಿ ದಾರಿಹೋಕರು ಖುಷಿ ಪಟ್ಟರು. ವಿಷಯ ತಿಳಿದ ಕೂಡಲೇ ಸರಬರಾಜು ಆಗುತ್ತಿದ್ದ ನೀರನ್ನು ನಿಲ್ಲಿಸಲಾಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಲ್ಲಿನ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.