ETV Bharat / state

ಹೆಡ್ ಕಾನ್​ಸ್ಟೇಬಲ್​ ಮಗನಿಂದ ರೌಡಿಶೀಟರ್​ಗೆ ಚಾಕು ಇರಿತ

author img

By

Published : Jul 30, 2020, 5:49 AM IST

Knife stabbing from head constable son at Doddaballapura
ಹೆಡ್ ಕಾನ್​ಸ್ಟೇಬಲ್​ ಮಗ

ನಗರದ ತುಮಕೂರು ರಸ್ತೆಯ ಪಿಳ್ಳಿ ಡಾಬಾದಲ್ಲಿ ಹೆಡ್​ ಕಾನ್​ಸ್ಟೇಬಲ್​ ಮಗ ಹಾಗೂ ರೌಡಿಶೀಟರ್​ ಇಬ್ಬರು ಮದ್ಯ ಸೇವಿಸುವ ವೇಳೆ ಗಲಾಟೆ ನಡೆದಿದೆ. ಈ ಗಲಾಟೆ ತಾರಕಕ್ಕೆ ಏರಿ ಈ ಅನಾಹುತ ಸಂಭವಿಸಿದೆ.

ದೊಡ್ಡಬಳ್ಳಾಪುರ: ರೌಡಿಶೀಟರ್​ಗೆ ಹೆಡ್​ ಕಾನ್​ಸ್ಟೇಬಲ್​ ಮಗ ಚಾಕುವಿನಿಂದ ಇರಿದಿದ್ದು, ರೌಡಿಶೀಟರ್ ಪ್ರಾಣಪಾಯದಿಂದ ಪಾರಾಗಿದ್ದಾನೆ.

ನಗರದ ತುಮಕೂರು ರಸ್ತೆಯ ಪಿಳ್ಳಿ ಡಾಬಾದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ರೌಡಿಶೀಟರ್​ ಬುಲೆಟ್ ರಘು ಚೂರಿ ಇರಿತಕ್ಕೆ ಒಳಗಾಗಿದ್ದಾನೆ.ಹೊಸಹಳ್ಳಿ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್ ರವರ ಮಗ ಗೌತಮ್ ಮತ್ತು ರೌಡಿಶೀಟರ್ ಬುಲೆಟ್ ರಘು ಸ್ನೇಹಿತರಾಗಿದ್ದು, ತುಮಕೂರು ರಸ್ತೆಯ ಪಿಳ್ಳಿ ಡಾಬಾದಲ್ಲಿ ಮದ್ಯ ಸೇವಿಸಲು ಜೊತೆ ಸೇರಿದ್ದಾರೆ.

ಚೂರಿ ಇರಿತ
ಚೂರಿ ಇರಿತ

ಈ ಸಮಯದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದ್ದು ಬುಲೆಟ್ ರಘು ಮೇಲೆ ಕಾರದ ಪುಡಿ ಎರಚಿದ ಗೌತಮ್ , ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ. ಚೂರಿ ಇರಿತಕ್ಕೆ ಒಳಗಾದ ಬುಲೆಟ್ ರವಿಯನ್ನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕಳಿಸಲಾಗಿದೆ. ಗೌತಮ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.