ದೊಡ್ಡಬಳ್ಳಾಪುರ: ಜಾಲಪ್ಪನವರ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಐಟಿ ಇಲಾಖೆ ಜಾಲಾಡುತ್ತಿದೆ. ಇದೇ ವಿಚಾರವಾಗಿ ಜಾಲಪ್ಪರವರ ದ್ವಿತೀಯ ಪುತ್ರ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಜಾಲಪ್ಪನ ಶಿಕ್ಷಣ ಸಂಸ್ಥೆಗಳ ಮೇಲಿನ ಐಟಿ ದಾಳಿಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.
ಇಂದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಐಟಿ ದಾಳಿ ಕಾಲೇಜಿನ ಮೇಲೆ ಆಗಿದೆ. ಈ ಬಗ್ಗೆ ಟಿವಿಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದುದನ್ನು ನೋಡಿದೆ. ನನ್ನ ತಮ್ಮ ರಾಜೇಂದ್ರ ಕಾಲೇಜುಗಳಿಗೆ ಹಣಕಾಸು ನಿರ್ದೇಶಕನಾಗಿದ್ದಾನೆ. ಚಿಕ್ಕಬಳ್ಳಾಪುರ ನಾಗರಾಜು ಕಾಲೇಜಿನ ಕಾರ್ಯದರ್ಶಿಯಾಗಿದ್ದಾರೆ, ನಮ್ಮ ತಂದೆ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಆ ಸಂಸ್ಥೆಗಳಲ್ಲಿ ನನ್ನದೂ ಯಾವುದೇ ಪಾತ್ರವಿಲ್ಲ. ಐಟಿ ದಾಳಿ ಅವರಿಗೆ ಸಂಬಂಧಪಟ್ಟಿದ್ದು, ದಾಳಿಗೂ ನನಗೂ ಸಂಬಂಧವಿಲ್ಲ ಎಂದು ನರಸಿಂಹಸ್ವಾಮಿ ಹೇಳಿದ್ದಾರೆ. ಜತೆಗೆ ಕಾಲೇಜಿನಲ್ಲಿ ನನಗೆ ಯಾವುದೇ ಅಧಿಕಾರ ಕೊಟ್ಟಿಲ್ಲ, ಐಟಿ ದಾಳಿಯಾಗಿದೆ ಇದು ಸರ್ವೆ ಸಾಮಾನ್ಯವಲ್ಲವೇ ಎಂದು ಅವರು ಹೇಳಿದ್ರು.
ಇನ್ನೂ ಐಟಿಗೆ ಎಲ್ಲಿ ಸಂಶಯವಿರುತ್ತೋ ಅಲ್ಲಿ ದಾಳಿ ಮಾಡ್ತಾರೇ, ಅದನ್ನು ಅವರು ಮಾಡಿಕೊಂಡು ಹೋಗಲಿ. ಕಾಂಗ್ರೆಸ್ನವರು ರಾಜಕೀಯ ದಾಳಿ ಅಂತಾರೇ, ಇದು ರಾಜಕೀಯ ದಾಳಿಯಲ್ಲ ಎಂದರು.