ETV Bharat / state

ರಾಜ್ಯದಲ್ಲಿ ನಾಳೆಯಿಂದ 3 ದಿನ ಜಿ20 ಶೃಂಗಸಭೆ

author img

By

Published : Dec 12, 2022, 5:31 PM IST

Updated : Dec 12, 2022, 7:31 PM IST

G20 Summit
ಜಿ20 ಶೃಂಗ ಸಭೆ

ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಜಿ20 ಶೃಂಗಸಭೆ ನಡೆಯಲಿದೆ.

ಜಿ20 ಶೃಂಗಸಭೆಗೆ ಭದ್ರತೆ

ದೇವನಹಳ್ಳಿ (ಬೆಂಗಳೂರು): ಹಲವು ದೇಶಗಳ ಗಣ್ಯರು ಪಾಲ್ಗೊಳ್ಳುವ ಮಹತ್ವದ ಜಿ20 ಶೃಂಗಸಭೆ ನಾಳೆಯಿಂದ ರಾಜ್ಯದಲ್ಲಿ ನಡೆಯುತ್ತಿದೆ. ದೇವನಹಳ್ಳಿಯ ಕೊಡಗುರ್ಕಿ ಪ್ರೆಸ್ಟಿಜ್ ಗಾಲ್ಪ್ ಶೈರ್ ಜೆಡಬ್ಯ್ಲೂ ಮೆರೆಯೆಟ್ ಹೋಟೆಲ್​ನಲ್ಲಿ ಸಕಲ ತಯಾರಿ ನಡೆದಿದೆ. ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ‌.

ಯೂರೋಪಿಯನ್ ಯೂನಿಯನ್‌ನ 40 ದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ. ಹಲವು ದೇಶಗಳ ಹಣಕಾಸು ಕಾರ್ಯದರ್ಶಿಗಳು, ಗಣ್ಯರು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಡಿಲಿಗೇಟ್ಸ್ ಭದ್ರತೆಗೆ 6 ಚೆಕ್‌ಪೋಸ್ಟ್​ಗಳನ್ನು ನಿರ್ಮಿಸಿದ್ದು ಸುಮಾರು 700 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.

ನಾಳೆಯಿಂದ ಮೂರು ದಿನ ಜಾಗತಿಕ ಮಟ್ಟದ ಸವಾಲುಗಳು, ಅಂತಾರಾಷ್ಟ್ರೀಯ ಹಣಕಾಸು ಪುನರುಜ್ಜೀವನ ಬಗ್ಗೆ ಸಂವಾದ, ಚರ್ಚೆಗಳು ಏರ್ಪಡಲಿವೆ. 15 ತಾರೀಖಿನ ವರೆಗೆ ಕೇಂದ್ರ ಹಣಕಾಸು ಹಾಗೂ ಬ್ಯಾಂಕ್​ಗಳ ಪ್ರತಿನಿಧಿಗಳ ಸಭೆ ಜರುಗಲಿದೆ. 16 ಹಾಗೂ 17 ರಂದು ನಿಯಮಾವಳಿ ರೂಪಿಸುವ ಕಾರ್ಯಕಾರಿ ಸಭೆ ಇದೆ. ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರದ ಬಗ್ಗೆ ವಿಚಾರ ಸಂಕಿರಣವೂ ನಡೆಯಲಿದೆ.

ಇದನ್ನೂ ಓದಿ: ಭಾರತದ ಆತಿಥ್ಯದ ಜಿ20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಭಾಗಿ ಸಾಧ್ಯತೆ

Last Updated :Dec 12, 2022, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.