ETV Bharat / state

ಪರ್ಸ್​​​ನಲ್ಲಿ ಜೀವಂತ ಗುಂಡು ಪತ್ತೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನನ್ನು ವಶಕ್ಕೆ ಪಡೆದ ಪೊಲೀಸರು

author img

By

Published : Mar 19, 2021, 10:42 AM IST

Updated : Mar 19, 2021, 10:48 PM IST

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್​ ಠಾಣೆ
Kempegowda International Airport Police Station

ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುವ ವೇಳೆ ಪ್ರಯಾಣಿಕನೊಬ್ಬನ ಪರ್ಸ್​​ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. ಈ ಸಂಬಂಧ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇವನಹಳ್ಳಿ( ಬೆಂಗಳೂರು): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬನ ಪರ್ಸ್​ನಲ್ಲಿ ಜೀವಂತ ಗುಂಡು ಪತ್ತೆಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾರ್ಥ್​​ವೆಸ್ಟ್ ದೆಹಲಿ ಮೂಲದ ಕಾರ್ತಿಕೇಯ ಭಾರಧ್ವಜ್​ ಎಂಬ ಪ್ರಯಾಣಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ಸಮಯದಲ್ಲಿ ಸಿಐಎಸ್​​​ಎಫ್ ಅಧಿಕಾರಿಗಳು ಲಗೇಜುಗಳ ತಪಾಸಣೆ ನಡೆಸಿದ್ದು, ಈ ವೇಳೆ ಆತನ ಪರ್ಸ್​​ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. 7.65 (ಕೆಎಫ್) ಎಂಎಂನ ಜೀವಂತ ಗುಂಡು ಇದಾಗಿದೆ ಎಂದು ಹೇಳಲಾಗಿದೆ.

ಓದಿ: ಬೆಂಗಳೂರು ನನಗೆ ಮನೆ ಇದ್ದಂತೆ, ನಗರ ಬಿಟ್ಟು ಎಲ್ಲೂ ಹೋಗಿಲ್ಲ: ಉಹಾಪೋಹಗಳಿಗೆ ಹಿತೇಶಾ ಚಂದ್ರಾಣಿ ಸ್ಪಷ್ಟನೆ

ಪರ್ಸ್​​ನಲ್ಲಿ ಜೀವಂತ ಗುಂಡು ಪತ್ತೆ ಮತ್ತು ಪರವಾನಗಿ ಇಲ್ಲದೆ ಪಿಸ್ತೂಲ್ ಹೊಂದಿದ್ದ ಹಿನ್ನೆಲೆಯಲ್ಲಿ ಸಿಐಎಸ್​​​ಎಫ್ ಅಧಿಕಾರಿಗಳು ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಾರ್ತಿಕೇಯ ಭಾರಧ್ವಜ್ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮದ ನಂತರ ದೆಹಲಿಗೆ ಹಿಂದಿರುಗುವಾಗ ಘಟನೆ ನಡೆದಿದೆ.

Last Updated :Mar 19, 2021, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.