ದೇವನಹಳ್ಳಿ : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ಹೊರಟಿದ್ದ ಪ್ರಯಾಣಿಕನ ಬ್ಯಾಗ್ನಲ್ಲಿ 13 ಜೀವಂತ ಗುಂಡುಗಳು ಪತ್ತೆಯಾಗಿವೆ.
ವ್ಯಕ್ತಿಯನ್ನ ಸಿಐಎಸ್ಎಫ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶದಲ್ಲಿರುವ ವ್ಯಕ್ತಿಯನ್ನ ಚೆನ್ನೈ ಮೂಲದ ಎಲ್. ನಂದೇಶ್ವರ್ ಎಂದು ಗುರುತಿಸಲಾಗಿದ್ದು, ಇವನನ್ನ ಏರ್ ಪೋರ್ಟ್ನಲ್ಲಿ ಸಿಐಎಸ್ ಎಫ್ ಅಧಿಕಾರಿಗಳು ವಶಕ್ಕೆ ಪಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಚೆನೈಗೆ ಹೊರಟಿದ್ದರು. ಸಿಐಎಸ್ ಎಫ್ ಅಧಿಕಾರಿಗಳು ಪ್ರಯಾಣಿಕರನ್ನ ತಪಾಸಣೆ ನಡೆಸುವಾಗ ಎಲ್. ನಂದೇಶ್ವರ್ ಲಗೇಜ್ ಬ್ಯಾಗ್ ಸ್ಕ್ಯಾನ್ ನಲ್ಲಿ 13 ಜೀವಂತ ಗುಂಡು ಮತ್ತು ಪಿಸ್ತೂಲ್ ಪತ್ತೆಯಾಗಿವೆ.
ಓದಿ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಇಡಿ ಕಚೇರಿಗೆ ಮುತ್ತಿಗೆ: ಸ್ಥಳದಲ್ಲಿ ಬಿಗಿ ಭದ್ರತೆ
ಪಾಯಿಂಟ್ 32 ಎಂಎಂ ಪಿಸ್ತೂಲ್ಗೆ ಸಂಬಂಧಿಸಿದ ಗುಂಡುಗಳಾಗಿದ್ದು ಎಲ್, ನಂದೇಶ್ವರ್ ನನ್ನು ವಶಕ್ಕೆ ಪಡೆದ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಪೊಲೀಸರಿಗೆ ನೀಡಿದ್ದಾರೆ. ವಿಚಾರಣೆ ಸಮಯದಲ್ಲಿ ಪಿಸ್ತೂಲ್ಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನ ತೋರಿಸಿದ ಹಿನ್ನೆಲೆ ವ್ಯಕ್ತಿಯನ್ನ ಬಿಟ್ಟುಕಳುಹಿಸಿದ್ದಾರೆ.