ETV Bharat / state

ಬಾಗಲಕೋಟೆ ನಗರದ ರೈಲು ನಿಲ್ದಾಣಕ್ಕೆ ಶಾಸಕ ವೀರಣ್ಣ ಚರಂತಿಮಠ ಭೇಟಿ, ಪರಿಶೀಲನೆ

author img

By

Published : Feb 24, 2020, 10:05 AM IST

mla veeranna charanthi matt has visits to bagalkote railway station
ಶಾಸಕ ವೀರಣ್ಣ ಚರಂತಿಮಠ

ಬಾಗಲಕೋಟೆ ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಶಾಸಕ ವೀರಣ್ಣ ಚರಂತಿಮಠ ಸ್ವಚ್ಛತೆ ಹಾಗೂ ರೈಲು ನಿಲ್ದಾಣದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ರು.

ಬಾಗಲಕೋಟೆ:ನಗರದ ರೈಲು ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಶಾಸಕ ವೀರಣ್ಣ ಚರಂತಿಮಠ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ರು.

ಶಾಸಕ ವೀರಣ್ಣ ಚರಂತಿಮಠ

ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ರೈಲ್ವೆ ನಿಲ್ದಾಣದಲ್ಲಿ ಇರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವ ಮೂಲಕ ಇಲ್ಲಿ ಆಗಬೇಕಾದ ಕೆಲಸಗಳನ್ನು ಶೀಘ್ರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇತ್ತೀಚಿಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ಸುರೇಶ ಅಂಗಡಿಯವರು ನಗರಕ್ಕೆ ಭೇಟಿ ನೀಡಿದಾಗ ಗೂಡ್ಸ್ ಶೆಡ್ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ಆದರೂ ಸ್ಥಳಾಂತರ ಮಾಡಿಲ್ಲ. ಗೂಡ್ಸ್ ಶೆಡ್‍ನಲ್ಲಿ ಪ್ರತಿದಿನ ಸಾಕಷ್ಟು ವಾಹನಗಳು ವಿವಿಧ ವಸ್ತುಗಳನ್ನು ತೆಗೆದುಕೊಳ್ಳಲು ಬರುವ ಲಾರಿಗಳಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಧೂಳಿನಿಂದ ಆರೋಗ್ಯಕ್ಕೆ ದುಷ್ಟರಿಣಾಮ ಬೀರುತ್ತಿದೆ .ಹೀಗಾಗಿ ಇದನ್ನು ನವನಗರಕ್ಕೆ ಸ್ಥಳಾಂತರಿಸಲು ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು

ಸ್ವಚ್ಛತೆಗೆ ಆದ್ಯತೆ ನೀಡುವತ್ತ ಅಧಿಕಾರಿಗಳು,ಸಿಬ್ಬಂದಿ ಗಮನಹರಿಸಿ ಎಂದರು.ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ನಿರ್ಮಾಣ ಮಾಡುವ ನಿವಾಸಗಳು ಗುಣಮಟ್ಟದಿಂದ ಕಟ್ಟಬೇಕು. ರೈಲ್ವೆ ನಿಲ್ದಾಣದಲ್ಲಿರುವ ಪೊಲೀಸ್ ಕೊಠಡಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು.ರಾತ್ರಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅನುಕೂಲವಾಗುವ ರೀತಿ ಕೊಠಡಿಯೊಳಗೆ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಾದ ವಿನಾಯಕ ಪಾಟೀಲ,ಲಕ್ಷ್ಮಣ ಸಿಂಗ್,ರಾಮಕೃಷ್ಣಾ ಸೇರಿದಂತೆ ಮತ್ತಿತರರು ಶಾಸಕ ವೀರಣ್ಣ ಚರಂತಿಮಠವರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಆಗಬೇಕಾದ ಕೆಲಸಗಳ ಕುರಿತು ಪರಿಶೀಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.