ETV Bharat / state

ಬಿಜೆಪಿ - ಕಾಂಗ್ರೆಸ್ ಪಕ್ಷವನ್ನು ಪುಟ್ಬಾಲ್​​​​ ತರಹ ಹೊಡೆದು ಹಾಕಿ: ಗಾಲಿ ಜನಾರ್ದನ ರೆಡ್ಡಿ

author img

By

Published : Apr 3, 2023, 7:15 PM IST

Updated : Apr 3, 2023, 7:54 PM IST

KRPP Founder President Gali Janardhana Reddy
ಕೆಆರ್​ಪಿಪಿ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ ರೆಡ್ಡಿ

20 ರಿಂದ 28 ಕ್ಷೇತ್ರ ಆಯ್ಕೆಯಾದರೆ ಸಾಕು ಜನಾರ್ದನ ರೆಡ್ಡಿ ಇಲ್ಲದೇ ಸರ್ಕಾರ ರಚನೆ ಆಗಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದರು.

ಬಿಜೆಪಿ ಪಕ್ಷದ ವಿರುದ್ಧ ಗಾಲಿ ಜನಾರ್ದನ ರೆಡ್ಡಿ ಕಿಡಿಕಾರಿದ್ದಾರೆ.

ಬಾಗಲಕೋಟೆ : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಪುಟ್ಬಾಲ್​​ ತರಹ ಹೊಡೆದು ಹಾಕಿ ಕಲ್ಯಾಣ ರಾಜ್ಯ ಪ್ರಗತಿ (ಕೆಆರ್​ಪಿಪಿ) ಪಕ್ಷಕ್ಕೆ ಬೆಂಬಲಿಸಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೆಡ್ಡಿ, ನಾನು ಹೆಲಿಕಾಪ್ಟರ್ ಚಿಹ್ನೆ ಕೇಳಿದ್ದೆ, ಆದರೆ ಕೊಡಲಿಲ್ಲ ಹಾಗಾಗಿ ಪುಟ್​ಬಾಲ್​ ಚಿಹ್ನೆ ಆಯ್ಕೆ ಮಾಡಿದ್ದೇನೆ. ಏಕೆಂದರೆ ನಾನು ಸಚಿವರಾಗಿದ್ದ ಸಮಯದಲ್ಲಿ ಬೆಂಗಳೂರಿಗೆ ಹೋಗುವುದಕ್ಕೆ ಹಾಗೂ ವಾಪಸ್​ ಬರುವುದಕ್ಕೆ ಸಮಯ ಉಳಿತಾಯ ಆಗುತ್ತಿದ್ದು, ಕ್ಷೇತ್ರದ ಜನತೆ ಸಮಸ್ಯೆ ಆಲಿಸುವುದಕ್ಕೆ ಅನುಕೂಲವಾಗುತ್ತಿತ್ತು.

ಆದರೆ ಹೆಲಿಕಾಪ್ಟರ್​ದಲ್ಲಿ ತಿರುಗಾಡಿರುವುದೇ ವಿಲನ್ ತರಹ ಬಿಂಬಿಸಿ, ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ. ಎಲ್ಲ ಪಕ್ಷದವರು ಒಗ್ಗಟ್ಟಾಗಿ ಸೇರಿಕೊಂಡು ಇನ್ನು ಬೆಳೆಯಲು ಬಿಡಬಾರದು ಎಂಬ ಉದ್ದೇಶದಿಂದ ಮೀನಿಗೆ ಗಾಳ ಹಾಕಿದಂತೆ ನನಗೆ ಗಾಳ ಹಾಕಿ ಬಳ್ಳಾರಿಯಿಂದ ನನ್ನನ್ನು ದೂರವಿಟ್ಟರು. ಇದೀಗ ಅವರನ್ನು ಪುಟ್ಬಾಲ್​​​ ತರಹ ಆಡುವ ಅವಕಾಶ ನಮಗೆ ಸಿಕ್ಕಿದೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷದ ವಿರುದ್ಧ ಗಾಲಿ ಜನಾರ್ದನ ರೆಡ್ಡಿ ಹರಿಹಾಯ್ದರು.

ಜನಾರ್ದನ ರೆಡ್ಡಿ ಇಲ್ಲದೆ ಸರ್ಕಾರ ರಚನೆ ಆಗಲ್ಲ : ಪಕ್ಷವನ್ನು ರಚನೆ ಮಾಡಿ ಕೇವಲ 3 ತಿಂಗಳ ಆಗಿದ್ದು, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಬೀದರ ‌ಸೇರಿದಂತೆ ಇತರ ಕ್ಷೇತ್ರದಲ್ಲಿ ಕೇವಲ 20 ರಿಂದ 28 ಕ್ಷೇತ್ರದಲ್ಲಿ ಪಕ್ಷದ ಆಭ್ಯರ್ಥಿ ಆಯ್ಕೆಯಾದರೆ ಸಾಕು ಜನಾರ್ದನ ರೆಡ್ಡಿ ಇಲ್ಲದೆ ಸರ್ಕಾರ ರಚನೆ ಆಗಲ್ಲ ಎಂದು ಹೇಳಿದರು. ಈ ಭಾಗದಲ್ಲಿ ಪಕ್ಷದ ಸಂಘಟನೆ ಮಾಡಲು ನದೀಮ್ ಅವರು ಮುಂದೆ ಬಂದಿರುವುದು ಪಕ್ಷದಿಂದ ಸ್ವಾಗತವಾಗಿದೆ. ಇಡೀ ರಾಜ್ಯದಲ್ಲಿಯೇ ಬಳ್ಳಾರಿಯಲ್ಲಿ ಹಿಂದೂ, ಮುಸ್ಲಿಂ ಎಲ್ಲರೂ ಒಂದಾಗಿ ಇದ್ದಾರೆ. ಆದರೆ ಕೆಲವರು ರಾಜಕಾರಣಕ್ಕಾಗಿ ಜಾತಿ ವೈಷಮ್ಯ ಮೂಡಿಸುತ್ತಾರೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನಾನೇ ಕಾರಣ : ಒಬ್ಬ ರಾಜಕಾರಣಿ ಎಷ್ಟು ವರ್ಷ ಬದುಕುತ್ತಾನೆ ಎಂಬುದು ಗೊತ್ತಿಲ್ಲ. ಆದರೆ ಇರುವಷ್ಟು ದಿನ ಸಮಾಜದ ಅಭಿವೃದ್ಧಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು. ಇದರಿಂದ ದ್ವೇಷದ ರಾಜಕಾರಣಿ ಮಾಡುವ ಯಾವುದೇ ಪಕ್ಷ ರಾಜ್ಯದಲ್ಲಿ ಉಳಿಯುವುದಿಲ್ಲ ಎಂದರು. ಪೊಲೀಸ್ ಮಗನಾಗಿ ಹುಟ್ಟಿ ಇಡೀ ರಾಜ್ಯದಲ್ಲಿ ಟೀಕೆ ಟಿಪ್ಪಣಿ ಮಾಡಿದರೂ ಸಹ ಕೆಆರ್​ಪಿಪಿ ಪಕ್ಷಕ್ಕ ಮತ್ತು ನನಗೆ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಗೆಳೆಯ ಶ್ರೀರಾಮಲುಗೋಸ್ಕರ ರಾಜಕೀಯ ಕ್ಕೆ ನಾನು ಬಂದಿದ್ದೇನೆ. ಸೋನಿಯಾ ಗಾಂಧಿ ವಿರುದ್ಧ ತಾಯಿ ಸುಷ್ಮಾ ಸ್ವರಾಜ ಸ್ಪರ್ಧೆ ಮಾಡಲು ಬಂದಾಗ ನಾನು ಅವರಿಗೆ ಸಾಕಷ್ಟು ಕೆಲಸ ಮಾಡಿದೆ. ಯಡಿಯೂರಪ್ಪ ನವರು ಮುಖ್ಯಮಂತ್ರಿ ಮಾಡಿದ್ದು, ಜನಾರ್ದನ ರೆಡ್ಡಿ ಎಂದು ಜನರು ಮಾತನಾಡುವಂತೆ ಮಾಡಿದ್ದೇನೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನಾನೇ ಕಾರಣ ಎಂದು ರೆಡ್ಡಿ ತಿಳಿಸಿದರು.

ವಿಜಯಪುರ ವಿಮಾನ ನಿಲ್ದಾಣ ನನ್ನಿಂದಲ್ಲೇ ಉದ್ಘಾಟನೆ : ನಾನು ಪ್ರವಾಸ್ಯೋದಮಿ ಸಚಿವರಾದ ಬಳಿಕ, ಹೆಲಿ ಟೋರಿಸಂ ಎಂದು ಬಾಗಲಕೋಟೆ, ವಿಜಯಪುರ ಜಿಲ್ಲೆಯ ಐತಿಹಾಸಿಕ ಕೇಂದ್ರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದೆ. ಅಲ್ಲದೇ ಗುಲಬರ್ಗಾದಲ್ಲಿ ಘಟಾನು ಘಟಿಗಳು ಇದ್ದರೂ ಸಹ ವಿಮಾನ ನಿಲ್ದಾಣ ಆಗಲಿಲ್ಲ. ನಾನು ಸಚಿವರಾದ ಬಳಿಕ ವಿಜಯಪುರದಲ್ಲಿ ವಿಮಾನ ನಿಲ್ದಾಣ ಪ್ರಾರಂಭ ಮಾಡಿದ್ದೆ, ಆದರೆ ಇನ್ನೂ ಉದ್ಘಾಟನೆ ಮಾಡಲು ಸಾಧ್ಯವಾಗಿಲ್ಲ ಅಂದರೆ ಆ ದೇವರು ನನ್ನಿಂದ ಉದ್ಘಾಟನೆ ಮಾಡಿಸಲಿಕ್ಕೆ ತಡಮಾಡಿದ್ದಾನೆ ಎಂದು ಹೇಳುವ ಮೂಲಕ ಮುಂದೆ ನಾನೇ ಮುಖ್ಯಮಂತ್ರಿಯಾಗಿ ಉದ್ಘಾಟನೆ ಮಾಡುತ್ತೇನೆ ಎಂದು ಪರೋಕ್ಷವಾಗಿ ಜನಾರ್ದನ ರೆಡ್ಡಿ ಹೇಳಿದರು.

ಅಧಿಕಾರಕ್ಕೆ ಬಂದರೇ ಬಸವೇಶ್ವರ ಆರೋಗ್ಯ ಯೋಜನೆ, ಬಟ್ಟೆ ಕಾರ್ಖಾನೆ ಸ್ಥಾಪನೆ : ಬಿಜೆಪಿ ಪಕ್ಷದ ಅಧಿಕಾರದಲ್ಲಿ ವಾಜಪೇಯಿ ಆರೋಗ್ಯ ಯೋಜನೆ ಮಾಡಲಾಗಿತ್ತು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಸವೇಶ್ವರ ಆರೋಗ್ಯ ಯೋಜನೆ ಎಂದು ಮಾಡಿ, ಚಿಕ್ಕ ಪುಟ್ಟ ಕಾಯಿಲೆ ಹಾಗು ದೊಡ್ಡ ಕಾಯಿಲೆಗಳು ಬಂದಾಗ ಹಣದ ತೊಂದರೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರಿಗೆ, ಬಡ ವರ್ಗದವರಿಗೆ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಜೊತಗೆ ಜಮಖಂಡಿ ಕ್ಷೇತ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, 5 ಕೋಟಿ ವೆಚ್ಚದಲ್ಲಿ ಸ್ವಂತ ವೆಚ್ಚದಲ್ಲಿ ಬಟ್ಟೆ ತಯಾರು ಮಾಡುವ ಕಾರ್ಖಾನೆಯನ್ನು ಜಮಖಂಡಿ ಪಟ್ಟಣದಲ್ಲಿ ಸ್ಥಾಪನೆ ಮಾಡುತ್ತೇನೆ. ಜೊತೆಗೆ ತರಬೇತಿ ನೀಡಿ ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಲಾಗುವುದು. ಇಂತಹ ವಿಚಾರವನ್ನು ಯಾವುದೇ ರಾಜಕೀಯ ಪಕ್ಷಗಳು ಮಾಡಲ್ಲ‌ ಎಂದು ರೆಡ್ಡಿ ಕಿಡಿ‌ಕಾರಿದರು.

ಸಂಗಮನಾಥನಿಗೆ ಪೂಜೆ : ಇದಕ್ಕೂ ಮುಂಚೆ ಕೂಡಲಸಂಗಮಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ ಅಣ್ಣ ಬಸವಣ್ಣ ಐಕ್ಯ ಸ್ಥಳ ಹಾಗೂ ಧಾರ್ಮಿಕ ಕೇಂದ್ರ ಆಗಿರುವುದರಿಂದ ಸಂಗಮನಾಥ ದೇವಾಲಯ ಭೇಟಿ‌ ನೀಡಿ ಪೂಜೆ ಪುರಸ್ಕಾರ ಸಲ್ಲಿಸಿದರು. ತಮ್ಮ ಪ್ರಣಾಳಿಕೆಯನ್ನು ದೇವರ ಸನ್ನಿಧಿಯಲ್ಲಿ ಮುಂದೆ ಇಟ್ಟು ಪೂಜೆ ಸಲ್ಲಿಸಿದರು. ಈ‌ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಬಳಿಕ ಜಮಖಂಡಿ, ಬೆಳಗಾವಿ ಜಿಲ್ಲೆಯ ಹಾರೋಗೇರಿ, ಅಥಣಿಗೆ ತೆರಳಿ ಕಾರ್ಯಕರ್ತ ಸಭೆ ನಡೆಸಿದರು.

ಇದನ್ನೂ ಓದಿ : ಬಾದಾಮಿಯಲ್ಲಿ ಸೋಲುವ ಮಾಹಿತಿ ಸಿದ್ದರಾಮಯ್ಯಗೆ ಸಿಕ್ಕಿದೆ, ಹೀಗಾಗಿ ಕ್ಷೇತ್ರ ಬದಲಿಸಿದ್ದಾರೆ: ಸಚಿವ ಮುರುಗೇಶ ನಿರಾಣಿ

Last Updated :Apr 3, 2023, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.