ETV Bharat / sports

ಇಂಗ್ಲೆಂಡ್ 2 ಆಟಗಾರರ​ ತಂಡ, ಭಾರತ 4- 0ದಿಂದ ಸರಣಿ ಗೆಲ್ಲುತ್ತದೆ ಎಂಬ ನಂಬಿಕೆಯಿದೆ: ಗವಾಸ್ಕರ್

author img

By

Published : Aug 17, 2021, 7:49 PM IST

ಇಂಗ್ಲೆಂಡ್ ಇಬ್ಬರು ಆಟಗಾರರ ತಂಡ, ಜೋ ರೂಟ್ ಮತ್ತು ಜೇಮ್ಸ್‌ ಆಂಡರ್ಸನ್ ಅವರನ್ನು ಒಳಗೊಂಡಿರುವ ತಂಡವಷ್ಟೇ. ಈ ಪಂದ್ಯದಲ್ಲಿ ಆಡಿರುವ ಎಲ್ಲ ಆಟಗಾರರನ್ನು ಗೌರವಿಸುತ್ತಿದ್ದೇನೆ, ಆದರೆ ಈ ಇದು ಸರಿಯಾದ ಟೆಸ್ಟ್ ತಂಡದ ರೀತಿ ಕಾಣಿಸುತ್ತಿಲ್ಲ ಎಂದು ಸೋನಿ ಸ್ಪೋರ್ಟ್ಸ್​ನಲ್ಲಿ ಪಂದ್ಯದ ನಂತರ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

india tour of england
ಇಂಗ್ಲೆಂಡ್ ಭಾರತ ಲಾರ್ಡ್ಸ್ ಟೆಸ್ಟ್

ಲಂಡನ್: ಲಾರ್ಡ್ಸ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೀಷರ ಪ್ರದರ್ಶನವನ್ನು ಟೀಕಿಸಿರುವ ಭಾರತ ತಂಡದ ಲೆಜೆಂಡರಿ ಕ್ರಿಕೆಟಿಗ ಸುನೀಲ್ ಗವಾಸ್ಕರ್​, ಇಬ್ಬರು ಆಟಗಾರರನ್ನು ಒಳಗೊಂಡಿರುವ ಈ ತಂಡದ ಎದುರು ಟೀಮ್ ಇಂಡಿಯಾ 4-0ಯಲ್ಲಿ ಸರಣಿಯನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ.

ಸೋಮವಾರ ಭಾರತ ತಂಡ ಇಂಗ್ಲೆಂಡ್ ವಿರುದ್ಧ 151 ರನ್​ಗಳಿಂದ ಗೆಲುವು ದಾಖಲಿಸಿದ ನಂತರ ಗವಾಸ್ಕರ್​ ಪಂದ್ಯ ವಿಶ್ಲೇಷಣೆ ವೇಳೆ ಈ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ಇಬ್ಬರು ಆಟಗಾರರ ತಂಡ, ಜೋ ರೂಟ್ ಮತ್ತು ಜೇಮ್ಸ್‌ ಆಂಡರ್ಸನ್ ಅವರನ್ನು ಒಳಗೊಂಡಿರುವ ತಂಡವಷ್ಟೇ. ಈ ಪಂದ್ಯದಲ್ಲಿ ಆಡಿರುವ ಎಲ್ಲ ಆಟಗಾರರನ್ನು ಗೌರವಿಸುತ್ತಿದ್ದೇನೆ, ಆದರೆ ಈ ಇದು ಸರಿಯಾದ ಟೆಸ್ಟ್ ತಂಡದ ರೀತಿ ಕಾಣಿಸುತ್ತಿಲ್ಲ ಎಂದು ಸೋನಿ ಸ್ಪೋರ್ಟ್ಸ್​ನಲ್ಲಿ ಪಂದ್ಯದ ನಂತರ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಅವರ ತಂತ್ರಗಾರಿಕೆಗಳು ಕೆಟ್ಟದಾಗಿವೆ. ಅವರ ಆರಂಭಿಕ ಬ್ಯಾಟ್ಸ್​ಮನ್​ಗಳು ಹಾಸ್ಯಸ್ಪದ ರೀತಿಯಲ್ಲಿ ಔಟಾಗಿದ್ದಾರೆ. 3ನೇ ಕ್ರಮಾಂಕದ ಬ್ಯಾಟ್ಸ್​ಮನ್ ಹಸೀಬ್ ಹಮೀದ್​ ಒತ್ತಡಕ್ಕೆ ಒಳಗಾಗಿದ್ದಾರೆ ಮತ್ತು ಅವರು ತಾತ್ಕಾಲಿಕ ಬ್ಯಾಟ್ಸ್​ಮನ್, ಹಾಗಾಗಿ ಜೋ ರೂಟ್​ ಮಾತ್ರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಇನ್ನು ಜಾನಿ ಬೈರ್​ಸ್ಟೋವ್ ಸ್ಥಿರತೆಯಿಲ್ಲ ಒಮ್ಮೆ ಆಡುತ್ತಾರೆ, ಮತ್ತೊಮ್ಮೆ ಏನೂ ಇಲ್ಲ, ಬಟ್ಲರ್ ಒಬ್ಬ ಉತ್ತಮ ವೈಟ್​ ಬಾಲ್ ಆಟಗಾರ. ಆದರೆ, ಕೆಂಪು ಚೆಂಡಿನ ಕ್ರಿಕೆಟ್​ಗೆ ಸೂಕ್ತ ಎಂದು ನನಗನಿಸುವುದಿಲ್ಲ ಎಂದು ಗವಾಸ್ಕರ್​ ಹೇಳಿದ್ದಾರೆ.

ಎರಡೂವರೆ ಆಟಗಾರರ ತಂಡದಂತಿದೆ

ಇನ್ನು ಬೌಲಿಂಗ್​ ಕೇವಲ ಜೇಮ್ಸ್‌ ಆಂಡರ್ಸನ್‌ ಮಾತ್ರ ಉತ್ತಮವಾಗಿ ಕಾಣಿಸುತ್ತಾರೆ. ಬೇರೆ ಯಾರೂ ಪರಿಣಾಮಕಾರಿಯಾಗಿಲ್ಲ. ಆಲ್ಲಿ ರಾಬಿನ್ಸನ್‌ ಟ್ರೆಂಟ್​ಬ್ರಿಡ್ಜ್​ನಲ್ಲಿ 5 ವಿಕೆಟ್‌ ಪಡೆದರು. ಆದರೂ ಇದು ಎರಡೂವರೆ ಆಟಗಾರರ ತಂಡದಂತಿದೆ ಎಂದು ಲಿಟ್ಲ್​ ಮಾಸ್ಟರ್ ಹೇಳಿದ್ದಾರೆ.

ಈ ಕಾರಣದಿಂದಲೇ ನಾನು ಭಾರತ ತಂಡ ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕು ಎಂದು ಭಾವಿಸುತ್ತಿರುವೆ. ಹಿಂದೆಯೇ ನಾನು 4-0 ಅಥವಾ 3-1ರಲ್ಲಿ ಭಾರತ ಗೆಲ್ಲುತ್ತದೆ ಎಂಬು ಹೇಳಿದ್ದೇನೆ, ಈಗಲೂ ಮಳೆ ಅಡಚಣೆ ಮಾಡದಿದ್ದರೆ ಆ ಫಲಿತಾಂಶ ಸಿಗಲಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಇದನ್ನು ಓದಿ:ಬುಮ್ರಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ಆಂಗ್ಲರ ಈ ಮೂರ್ಖತನವೇ ಸೋಲಿಗೆ ಕಾರಣ : ಬಾಯ್ಕಾಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.