ETV Bharat / sports

'Shane Warne Is Smiling On You'.. ಚೆನ್ನಾಗಿ ಆಡಿದ್ದೀರಿ, ಫೈನಲ್​​​ಗೆ ಶುಭವಾಗಲಿ.. ಹೃದಯ ಗೆದ್ದ ಆರ್​ಸಿಬಿ ಟ್ವೀಟ್

author img

By

Published : May 28, 2022, 3:10 PM IST

Updated : May 28, 2022, 9:09 PM IST

RCB Win Hearts With Tweet For Rajasthan Royals
RCB Win Hearts With Tweet For Rajasthan Royals

ನಿನ್ನೆಯ ಪಂದ್ಯದಲ್ಲಿ ಬೆಂಗಳೂರು ನೀಡಿದ್ದ 157ರನ್​​ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ 18.1 ಓವರ್​ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ತಂಡದ ಪರ ಜೋಸ್ ಬಟ್ಲರ್​ ಅಜೇಯ 106 ರನ್​ ​ಗಳಿಕೆ ಮಾಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು..

ಅಹಮದಾಬಾದ್​​ : ಇಂಡಿಯನ್​ ಪ್ರೀಮಿಯರ್ ಲೀಗ್​ನ ಕ್ವಾಲಿಫೈಯರ್​ 2 ಪಂದ್ಯದಲ್ಲಿ ಸೋಲು ಕಾಣುವ ಮೂಲಕ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್​​ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್​ ಫೈನಲ್​ಗೆ ಲಗ್ಗೆ ಹಾಕಿದೆ. ಇದೀಗ ಗುಜರಾತ್​ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಮಹತ್ವದ ಪಂದ್ಯದಲ್ಲಿ ಸೋತ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮಾಡಿರುವ ಟ್ವೀಟ್​ವೊಂದು ಎಲ್ಲರ ಮನಗೆದ್ದಿದೆ. ಆರ್​ಸಿಬಿ ನಡೆಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗಲು ಶುರುವಾಗಿದೆ.

ಆರ್​ಸಿಬಿ ಟ್ವೀಟ್ ​: ನಿಮ್ಮ ಪ್ರದರ್ಶನದಿಂದ ಶೇನ್​ ವಾರ್ನ್ ಸಂತಸಗೊಂಡಿದ್ದಾರೆ. ಇಂದು ರಾತ್ರಿ ಚೆನ್ನಾಗಿ ಆಡಿದ್ದೀರಿ. ಫೈನಲ್​ ಪಂದ್ಯಕ್ಕೆ ನಿಮಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದೆ. ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋತ ಬೆನ್ನಲ್ಲೇ ಬೆಂಗಳೂರು ತಂಡ ಈ ರೀತಿಯಾಗಿ ಟ್ವೀಟ್ ಮಾಡಿದೆ. ಅದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರು ತಂಡದ ಟ್ವೀಟ್​ಗೆ ರಾಜಸ್ಥಾನ ರಾಯಲ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ಹೃದಯದ ಎಮೋಜಿ ಹಾಕಿಕೊಂಡಿದೆ.

ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಶೇನ್​ ವಾರ್ನ್ ತಂಡವನ್ನ ಚಾಂಪಿಯನ್​​​​​ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್​​ ಶೇನ್​ ವಾರ್ನ್​​ಗೋಸ್ಕರ ಕಪ್​ ಗೆಲ್ಲುತ್ತೇವೆ ಎಂದು ಹೇಳಿಕೊಂಡಿತ್ತು. ಇದೀಗ ಕ್ವಾಲಿಫೈಯರ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ,ಫೈನಲ್​​ಗೆ ಲಗ್ಗೆ ಹಾಕಿದೆ. ನಾಳೆ ಗುಜರಾತ್ ತಂಡದ ವಿರುದ್ಧ ಅಂತಿಮ ಹೋರಾಟ ನಡೆಸಲಿದೆ.

ಇದನ್ನೂ ಓದಿ: RCB ಗೆಲುವಿಗೆ ಕಂಟಕವಾದ ಕನ್ನಡಿಗ ಪ್ರಸಿದ್ಧ್... ಬೆಂಗಳೂರು ತಂಡದ ಚೊಚ್ಚಲ ಕಪ್ ಗೆಲುವ ಕನಸು ಭಗ್ನ, ಅಭಿಮಾನಿಗಳಿಗೆ ನಿರಾಸೆ!

ನಿನ್ನೆಯ ಪಂದ್ಯದಲ್ಲಿ ಬೆಂಗಳೂರು ನೀಡಿದ್ದ 157ರನ್​​ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ 18.1 ಓವರ್​ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ತಂಡದ ಪರ ಜೋಸ್ ಬಟ್ಲರ್​ ಅಜೇಯ 106 ರನ್​ ​ಗಳಿಕೆ ಮಾಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಇವರಿಗೆ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಹಾಗೂ ಮೆಕಾಯ್​ ಅತ್ಯುತ್ತಮ ಸಾಥ್ ನೀಡಿ, ಎದುರಾಳಿ ತಂಡದ ಪ್ರಮುಖ ವಿಕೆಟ್ ಪಡೆದಿದ್ದರು. ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ, ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ವೈಫಲ್ಯ ಅನುಭವಿಸಿ ಸೋಲುವಂತಾಯಿತು.

Last Updated :May 28, 2022, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.