ETV Bharat / sports

IND vs WI 3rd T20: ಕಿಶನ್​ಗೆ ವಿಶ್ರಾಂತಿ ಕೊಟ್ಟು ಜೈಸ್ವಾಲ್​ಗೆ ಅವಕಾಶ ನೀಡಿ: ವಾಸಿಂ ಜಾಫರ್

author img

By

Published : Aug 8, 2023, 2:29 PM IST

Ishan Kishan
ಇಶಾನ್ ಕಿಶನ್‌

ಗಯಾನಾದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಟಿ-20 ಪಂದ್ಯಗಳ ಸರಣಿಯ ಮೂರನೇ ಮ್ಯಾಚ್​​​ಗೆ ಆರಂಭಿಕ ಆಟಗಾರ ಇಶಾನ್ ಕಿಶನ್‌ಗೆ ವಿರಾಮ ನೀಡಬೇಕು ಎಂದು ಮಾಜಿ ಬ್ಯಾಟರ್ ವಾಸಿಂ ಜಾಫರ್ ಹೇಳಿದ್ದಾರೆ.

ನವದೆಹಲಿ: ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಇಶಾನ್​ ಕಿಶನ್​ಗೆ ವಿಶ್ರಾಂತಿ ನೀಡಬೇಕು ಎಂದು ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್​ ಹೇಳಿದ್ದಾರೆ.

ವಿಂಡೀಸ್​ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ಎರಡರಲ್ಲಿ ಸೋಲು ಕಂಡಿದ್ದು, ಇಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟಿ20ಗೆ ವಿಶ್ರಾಂತಿ ನೀಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಪಂದ್ಯದಲ್ಲಿ ಕಿಶನ್​ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದ್ದಾರೆ. ಮೊದಲ ಟಿ-20ಯಲ್ಲಿ 9 ಬಾಲ್​ಗೆ 6 ರನ್​ ಗಳಿಸಿ ಔಟ್​ ಆದರೆ, ಎರಡನೇ ಪಂದ್ಯದಲ್ಲಿ 23 ಎಸೆತದಲ್ಲಿ 27 ರನ್​ ಗಳಿಸಿದ್ದರು.

"ಪ್ರಸ್ತುತ ಆಡುತ್ತಿರುವ ಟಿ20 ಪಂದ್ಯದಲ್ಲಿ ಇಶಾನ್​ ಕಿಶನ್ ರನ್​ ಗಳಿಸಲು​ ಕಷ್ಟಪಡುತ್ತಿರುವುದನ್ನು ಕಾಣಬಹುದು. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಿ. ನಂತರ ಅವರು ಆಡಿದಾಗ ಉತ್ತಮ ಪ್ರದರ್ಶನ ನೀಡುತ್ತಾರೆ" ಎಂದಿದ್ದಾರೆ. ಕಿಶನ್​ ಅವರಿಗೆ ವಿಶ್ರಾಂತಿ ನೀಡುವ ಮೂಲಕ ಇತ್ತೀಚೆಗೆ ಟೀಮ್​ ಇಂಡಿಯಾದ ಟೆಸ್ಟ್​ಗೆ ಪದಾರ್ಪಣೆ ಮಾಡಿದ ಆರಂಭಿಕ ಬ್ಯಾಟರ್​ ಜೈಸ್ವಾಲ್​ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಟೆಸ್ಟ್​ನ ಎರಡು ಪಂದ್ಯದ ಮೂರು ಇನ್ನಿಂಗ್ಸ್​ನಿಂದ ಜೈಸ್ವಾಲ್​ 1 ಶತಕ ಮತ್ತು ಅರ್ಧಶತಕದಿಂದ 88.67ರ ಸರಾಸರಿಯಲ್ಲಿ 266 ರನ್​ ಗಳಿಸಿದ್ದಾರೆ. ಉತ್ತಮ ಲಯದಲ್ಲಿರುವ ಆಟಗಾರನಿಗೆ ಅವಕಾಶ ನೀಡಬೇಕು ಎಂದು ಜೈಸ್ವಾಲ್​ ಹೆಸರನ್ನು ಉಲ್ಲೇಖಿಸಿದ್ದಾರೆ.

"ನಿರ್ಭೀತಿಯಿಂದ ಯಶಸ್ವಿ ಜೈಸ್ವಾಲ್ ಬ್ಯಾಟ್​ ಬೀಸುತ್ತಾರೆ ಹೀಗಾಗಿ ನಾನು ಸ್ಸಂದೇಹವಾಗಿ ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಸ್ಪಿನ್ ಮತ್ತು ವೇಗದ ಬೌಲಿಂಗ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ಜೈಸ್ವಾಲ್​ ಫಾರ್ಮ್​ನ ಉತ್ತುಂಗದಲ್ಲಿದ್ದಾರೆ, ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡಲು ತಂಡದಲ್ಲಿ ಆಡಿಸಬೇಕಾಗಿದೆ. ಟೆಸ್ಟ್​ಗೆ ಪದಾರ್ಪಣೆ ಆಗಿರುವ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಿರುವಾಗ ಅವರು ಏಕೆ ತಂಡ ಆಯ್ಕೆ ಆಗಿರಬಾರದು" ಎಂದು ಪ್ರಶ್ನಿಸಿದ್ದಾರೆ.

ಅಕ್ಷರ್​ ಪಟೇಲ್​ ಅವರಿಗೆ ಎರಡನೇ ಪಂದ್ಯದಲ್ಲಿ ಓವರ್​ ಕೊಡದಿರುವ ಬಗ್ಗೆಯೂ ಜಾಫರ್​ ಬೇಸರ ವ್ಯಕ್ತಪಡಿಸಿದ್ದಾರೆ. ಪಿಚ್ ನಿಧಾನಗತಿಯಲ್ಲಿದ್ದರೂ 2 ನೇ ಟಿ-20ಯಲ್ಲಿ ಅಕ್ಷರ್ ಒಂದೇ ಒಂದು ಓವರ್‌ ಬಾಲ್​ ಮಾಡಲಿಲ್ಲ. "ಐಪಿಎಲ್​ ನಂತರ ಅಕ್ಷರ್ ಪಟೇಲ್ ಎಡಗೈ ಬ್ಯಾಟರ್​ಗಳು ಕ್ರೀಸ್​ಗೆ ಬಂದಾಗ ಬೌಲಿಂಗ್​ಗೆ ಬರುವುದಿಲ್ಲ. ಆದರೆ, ನಿಕೋಲಸ್ ಪೂರನ್​ ಮತ್ತು ಶಿಮ್ರಾನ್ ಹೆಟ್ಮೆಯರ್ ಔಟಾದ ನಂತರವಾದರೂ ಬೌಲಿಂಗ್​ ಮಾಡಿಸಬಹುದಿತ್ತು. ಕೊನೆಯ ಓವರ್​ ಅನ್ನು ಚಹಾಲ್​ಗಾಗಿ ಉಳಿಸಿಕೊಂಡ ಲೆಕ್ಕಾಚಾರ ಸರಿ ಆದರೂ ಅಕ್ಷರ್​ಗೆ ಬೌಲಿಂಗ್​ ಕೊನೆಯ ಸಂದರ್ಭದಲ್ಲಿ ಕೊಡದಿರುವುದು ಆಶ್ಚರ್ಯವಾಯಿತು"ಎಂದು ಅವರು ಹೇಳಿದರು.

ಮೊದಲ ಪಂದ್ಯವನ್ನು ನಾಲ್ಕು ರನ್​ನಿಂದ ಮತ್ತು ಎರಡನೇ ಪಂದ್ಯವನ್ನು ಎರಡು ವಿಕೆಟ್​ಗಳಿಂದ ಸೋತಿರು ಭಾರತ ಇಂದು ನಡೆಯುವ ಮೂರನೇ ಮ್ಯಾಚ್​ನಲ್ಲಿ ಕಮ್​ ಬ್ಯಾಕ್​ ಮಾಡುವ ಅಗತ್ಯ ಇದೆ.

ಇದನ್ನೂ ಓದಿ: IND vs WI, 3rd T20: 3 ಪಂದ್ಯದಲ್ಲಿ ಹಾರ್ದಿಕ್​ ಪಡೆಗೆ ಗೆಲುವು ಅನಿವಾರ್ಯ; ನಿರ್ಣಾಯಕ ಕದನದಲ್ಲಿ ಮಿಂಚುವರೇ IPL​ ಸ್ಟಾರ್ಸ್?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.