ETV Bharat / sports

ಗಾಯಕ್ವಾಡ್ ಕಣ್ಣುಗಳು ಆತ ಒತ್ತಡದಲ್ಲಿಲ್ಲ ಎಂಬುದನ್ನ ಬಹಿರಂಗ ಪಡಿಸಿದವು: ಎಂ. ಎಸ್.​ ಧೋನಿ

author img

By

Published : Apr 22, 2021, 4:11 PM IST

Updated : Apr 22, 2021, 4:40 PM IST

ರುತುರಾಜ್ ಗಾಯಕವಾಡ
ರುತುರಾಜ್ ಗಾಯಕವಾಡ

ಮೊದಲ ಮೂರು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್​ ಬುಧವಾರ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ 62 ರನ್​ ಬಾರಿಸಿ ಸಿಎಸ್​ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರ ಕುರಿತು ಸಿಎಸ್​ಕೆ ತಂಡದ ನಾಯಕ ಧೋನಿ ಪ್ರತಿಕ್ರಿಯಿಸಿದ್ದಾರೆ.

ಮುಂಬೈ: ಕಳಪೆ ಆಟದ ಹೊರತಾಗಿಯೂ ರುತುರಾಜ್ ಗಾಯಕ್ವಾಡ್​ ಅವರನ್ನು ಮತ್ತೆ ತಂಡದಲ್ಲಿ ಆಡಿಸುವ ತೀರ್ಮಾನ ತೆಗೆದುಕೊಳ್ಳಲು ತಾವೂ ಹಿಂದಿನಿಂದಲೂ ಅನುಸರಿಸುವ ಸೈಕಾಲಜಿ ಅಭ್ಯಾಸವು ನೆರವಾಯಿತು ಎಂದು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ಹೇಳಿದ್ದಾರೆ.

ಮೊದಲ ಮೂರು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್​ ಬುಧವಾರ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ 62 ರನ್​ ಬಾರಿಸಿ ಸಿಎಸ್​ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

" ರುತು ಕಳೆದ ಐಪಿಎಲ್​ನಲ್ಲಿ ತಮ್ಮ ಅತ್ಯುತ್ತಮ ಆಟವನ್ನು ತೋರಿದ್ದಾರೆ. ಹಾಗಾಗಿ ಅವರ ಮಾನಸಿಕ ಸ್ಥಿತಿ ಎಲ್ಲಿದೆ ಎನ್ನುವುದನ್ನು ನಿರ್ಣಯಿಸಬೇಕಾಗುತ್ತದೆ. ಅವರನ್ನು ಈ ದಿನ ಹೇಗಿದ್ದೀರಾ ಎಂದು ನಾನು ಕೇಳಿದೆ. ಆ ಪ್ರಶ್ನೆಯನ್ನು ನೀವು ಕೇಳಿದ ನಂತರ ಅವರ ಪ್ರತಿಕ್ರಿಯೆಗೆ ಕಾಯುತ್ತಿರಿತ್ತೀರಾ, ಆಗ ಆತನ ಕಣ್ಣಲ್ಲಿ ಏನಿದೆ ಎಂಬುದು ನಿಮಗೆ ತಿಳಿಯುತ್ತದೆ" ಎಂದು ಧೋನಿ ಪಂದ್ಯದ ನಂತರ ತಿಳಿಸಿದ್ದಾರೆ.

" ನನ್ನ ಪ್ರಶ್ನೆಗೆ ಅವರ ಪ್ರತಿಕ್ರಿಯೆ ನೀಡುವಾಗ ನನಗೆ ಅವರ ಮನಸಿನಲ್ಲಿ ಯಾವುದೇ ಒತ್ತಡವಿಲ್ಲ ಎನ್ನುವುದು ನನ್ನ ಅರಿವಿಗೆ ಬಂದಿತು. ಏಕೆಂದರೆ ನನ್ನ ವೃತ್ತಿ ಜೀವನದುದ್ದಕ್ಕೂ ಇಂತಹದನ್ನೇ ಸಾಕಷ್ಟು ಮಾಡಿದ್ದೇನೆ, ಈ ಪಂದ್ಯದಲ್ಲಿ ಅವರ ಸಾಮರ್ಥ್ಯ ತೋರಿಸಿಕೊಂಡಿದ್ದಾರೆ" ಎಂದು ಧೋನಿ ಹೇಳಿದ್ದಾರೆ.

ಸಿಎಸ್​ಕೆ ನಿನ್ನೆಯ ಪಂದ್ಯದಲ್ಲಿ ಡುಪ್ಲೆಸಿಸ್ ಮತ್ತು ಗಾಯಕ್ವಾಡ್​ ಅವರ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು 220 ರನ್​ ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 31ಕ್ಕೆ 5 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದಿಂದ ಸೋಲುವ ಹಂತದಲ್ಲಿತ್ತು. ಆದರೆ ಆ್ಯಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್ ಅರ್ಧಶತಕ ಮತ್ತು ದಿನೇಶ್ ಕಾರ್ತಿಕ್​ 42 ರನ್​ಗಳ ನೆರವಿನಿಂದ 202 ರನ್​ ಗಳಿಸಿ 18 ರನ್​ಗಳ ವಿರೋಚಿತ ಸೋಲು ಕಂಡಿತು.

ಇದನ್ನು ಓದಿ: ಡುಪ್ಲೆಸಿ, ಗಾಯಕವಾಡ್‌ ಸ್ಫೋಟಕ ಆಟಕ್ಕೆ ಒಲಿದ ಗೆಲುವು; ಅಗ್ರಸ್ಥಾನಕ್ಕೆ ಏರಿದ ಸಿಎಸ್‌ಕೆ

Last Updated :Apr 22, 2021, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.