ETV Bharat / sports

ಮುಂದಿನ ಪಂದ್ಯಕ್ಕೆ ಕರುಣ್​ ಅಲಭ್ಯ.. ಕರ್ನಾಟಕ ರಣಜಿ ತಂಡಕ್ಕೆ ಶ್ರೇಯಸ್​ ಗೋಪಾಲ್​​ ನಾಯಕ..

author img

By

Published : Jan 7, 2020, 3:38 PM IST

Shreyas Gopal to lead Karnataka
Shreyas Gopal to lead Karnataka

ಮುಂಬೈ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ಮುಂದಿನ ಪಂದ್ಯದಲ್ಲಿ ಸೌರಾಷ್ಟ್ರ ಟೀಂ ವಿರುದ್ಧ ಸೆಣಸಲಿದೆ. ನಾಯಕ ಕರುಣ್​ ನಾಯರ್​ ವಿವಾಹದ ಕಾರಣದಿಂದ ತಂಡದಿಂದ ಹೊರಗುಳಿದರೆ, ತಂಡದಿಂದ ಅಭಿಷೇಕ್​ ರೆಡ್ಡಿ ಕೈಬಿಡಲಾಗಿದೆ.

ಬೆಂಗಳೂರು:ಕರ್ನಾಟಕ ರಣಜಿ ತಂಡದ ನಾಯಕ ಕರುಣ್​ ನಾಯರ್​ ಜನವರಿ 16ರಂದು ಗೃಹಸ್ಥಾಶ್ರಮಕ್ಕೆ ಕಾಲಿಡಲಿರುವುದರಿಂದ ಸೌರಾಷ್ಟ್ರದ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಮುಂಬೈ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೆಣಸಲಿದೆ. ನಾಯಕ ಕರುಣ್​ ನಾಯರ್​ ವಿವಾಹದ ಕಾರಣದಿಂದ ತಂಡದಿಂದ ಹೊರಗುಳಿದರೆ, ತಂಡದಿಂದ ಅಭಿಷೇಕ್​ ರೆಡ್ಡಿ ಕೈಬಿಡಲಾಗಿದೆ.

ಇವರಿಬ್ಬರ ಜಾಗಕ್ಕೆ ಬದಲಿ ಆಟಗಾರರನ್ನು ಈಗಾಗಲೇ ಕೆಎಸ್​ಸಿಎ ಘೋಷಣೆ ಮಾಡಿದ್ದು, ಕೆ ವಿ ಸಿದ್ದಾರ್ಥ್​ ಹಾಗೂ ಗಾಯದಿಂದ ಚೇತರಿಸಿರುವ ಪವನ್​ ದೇಶಪಾಂಡೆ ಸೌರಾಷ್ಟ್ರ ವಿರುದ್ಧ ಕಣಕ್ಕಿಳಿಯಲಿದ್ದಾರೆ.

Shreyas Gopal to lead Karnataka
ತಂಡದಲ್ಲಿರುವ 15 ಆಟಗಾರರು

ಈಗಾಗಲೇ ಮನೀಷ್​ ಪಾಂಡೆ, ರಾಹುಲ್​ ರಾಷ್ಟ್ರೀಯ ತಂಡದ ಪರ ಆಯ್ಕೆಯಾಗಿರುವುದುರಿಂದ ರಣಜಿ ತಂಡದಿಂದ ಹೊರಗುಳಿದಿದ್ದಾರೆ. ಮಯಾಂಕ್​ ಇಂಡಿಯಾ ಎ ತಂಡದ ಪ್ರವಾಸಕ್ಕಾಗಿ ವಿಶ್ರಾಂತಿಯಲ್ಲಿದ್ದಾರೆ. ಇದೀಗ ಕರುಣ್​ ಕೂಡ ಹೊರಗುಳಿಯಲಿರುವುದು ತಂಡಕ್ಕೆ ಹಿನ್ನಡೆಯಾಗಿದೆ.

ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ಶ್ರೇಯಸ್​ ಗೋಪಾಲ್​ ತಂಡವನ್ನು ಮುನ್ನಡೆಸಲಿದ್ದಾರೆ. ಯುವ ಸ್ಫೋಟಕ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​​, ಕಳೆದ ಪಂದ್ಯದ ಹೀರೋ ಸಮರ್ಥ್​ ಕರ್ನಾಟಕದ ಟ್ರಂಪ್​ ಕಾರ್ಡ್​ ಆಗಲಿದ್ದಾರೆ.

ಸೌರಾಷ್ಟ್ರ ವಿರುದ್ಧದ ಪಂದ್ಯ ಜನವರಿ 11ರಿಂದ 14ರವರೆಗೆ ರಾಜ್​ಕೋಟ್​ನಲ್ಲಿ ನಡೆಯಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.