ETV Bharat / sports

ಯುವಕರಿಗೆ ಸೂರ್ಯಕುಮಾರ್ ಯಾದವ್ ರೋಲ್ ಮಾಡೆಲ್: ವಿವಿಎಸ್ ಲಕ್ಷ್ಮಣ್​

author img

By

Published : Mar 9, 2021, 6:59 PM IST

ಸೂರ್ಯಕುಮಾರ್ ಯಾದವ್​
ಸೂರ್ಯಕುಮಾರ್ ಯಾದವ್​

ಈ ಬಲಗೈ ಆಟಗಾರ ಇಂಗ್ಲೆಂಡ್ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಘೋಷಿಸಿರುವ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ತಾಳ್ಮೆಯಿಂದ ಕಾದರೆ ಜೀವನದಲ್ಲಿ ಯಶಸ್ಸು ತುಂಬಾ ದೂರವಿರುವುದಿಲ್ಲ ಎನ್ನುವುದಕ್ಕೆ ಸೂರ್ಯ ಕುಮಾರ್​ ಉದಾಹರಣೆ ಎಂದು ಲಕ್ಷ್ಮಣ್ ಪ್ರಶಂಸಿದ್ದಾರೆ.

ಮುಂಬೈ: ದೀರ್ಘಕಾಲದ ನಂತರ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿರುವ ಮುಂಬೈನ ಸೂರ್ಯಕುಮಾರ್ ಯಾದವ್​ ಅವರು ಯುವಕರಿಗೆ ಮಾದರಿ ಎಂದು ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್​ ಅಭಿಪ್ರಾಯಪಟ್ಟಿದ್ದಾರೆ.

"ನನ್ನ ಪ್ರಕಾರ ಅವರು ಯುವಕರಿಗೆ ಉತ್ತಮ ಮಾದರಿಯಾಗಿದ್ದಾರೆ. ಭಾರತದಲ್ಲಿ ಯುವಜನತೆ ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ರನ್​ಗಳಿಸುವ ಪ್ರತಿಯೊಬ್ಬರೂ ಭಾರತ ತಂಡದಲ್ಲಿ ಆಡಲು ಬಯಸುತ್ತಾರೆ. ಅದು ತುಂಬಾ ಕಷ್ಟ. ಅಲ್ಲಿ ತುಂಬಾ ಗುಣಮಟ್ಟವಿದೆ, ತುಂಬಾ ಸಾಮರ್ಥ್ಯವಿರುತ್ತದೆ, ಮೇಲಾಗಿ ಪ್ರಬಲ ಸ್ಪರ್ಧೆಯಿರುತ್ತದೆ" ಎಂದು ಲಕ್ಷ್ಮಣ್ ಸ್ಟಾರ್ ಸ್ಪೋರ್ಟ್ಸ್​ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಆದರೆ ಸೂರ್ಯಕುಮಾರ್​ ಏನು ಮಾಡಿದ್ರು? ಮತ್ತೆ ಪ್ರಥಮ ದರ್ಜೆ ಕ್ರಿಕೆಟ್​ಗೆ ಹಿಂತಿರುಗಿ, ಮುಂಬೈ ತಂಡದಲ್ಲಿ ಸಾಕಷ್ಟು ಸ್ಕೋರ್​ ಮಾಡಿದರು. ಮುಂಬೈ ಇಂಡಿಯನ್ಸ್​ ತಂಡದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಸಕಾರಾತ್ಮಕ ರನ್​ಗಳಿಸಿದರು. ಸಾಕಷ್ಟು ಕಠಿಣ ಪರಿಸ್ಥಿತಿಯಲ್ಲಿ ತಂಡಕ್ಕಾಗಿ ಆಡಿ ಗೆಲುವು ತಂದುಕೊಟ್ಟರು. ಒಬ್ಬ ಆಟಗಾರನಿಂದ ನೀವು ನಿರೀಕ್ಷಿಸುವುದು ಕೂಡ ಅದನ್ನೇ. ಕೊನೆಯಲ್ಲಿ ನಮ್ಮ ಕೋಚ್​ ನನಗೆ ಹೇಳಿದಂತೆ,"ಆಯ್ಕೆಗಾರರು ಬಾಗಿಲನ್ನು ತೆಗೆಯಲಿಲ್ಲ ಎಂದರೆ, ನೀವೇ ಬಾಗಿಲನ್ನು ಮುರಿದು ಹೋಗಬೇಕು". ಅದಕ್ಕಾಗಿ ನಿಮಗೆ ಉತ್ತಮ ಪ್ರದರ್ಶನ ತೋರುವುದೊಂದೇ ಮಾರ್ಗ. ಅದನ್ನೇ ಯಾದವ್​ ಅನುಸರಿಸಿದರು. ಅವರು ಖಂಡಿತ ಭಾರತ ಟಿ20 ತಂಡದಲ್ಲಿ ಆಡುವುದಕ್ಕೆ ಅರ್ಹ ಆಟಗಾರ ಎಂದು ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೆಹಲಿ ವಿರುದ್ಧ ಗೆದ್ದ ಯುಪಿಗೆ ಗುಜರಾತ್ ಸವಾಲು, ಕರ್ನಾಟಕಕ್ಕೆ ಮುಂಬೈ ಎದುರಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.