ETV Bharat / sports

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ: ಕರುಣ್ ನಾಯ(ಕ)ರ್

author img

By

Published : Dec 27, 2020, 4:36 PM IST

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸಾಧನೆಯ ತುಡಿತ ಹೊಂದಿರುವ ಕರ್ನಾಟಕ 2021 ಆವೃತ್ತಿಗಾಗಿ 20 ಸದಸ್ಯರ ತಂಡ ಘೋಷಿಸಿದೆ. ಈ ಹಿಂದೆ ರಾಜ್ಯ ತಂಡ 2018/19 ಮತ್ತು 2019/20ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಜಯಿಸಿದೆ.

ಬೆಂಗಳೂರು: 2021ರ ಜನವರಿಯಿಂದ ನಡೆಯುವ ಸಯ್ಯದ್ ಮುಷ್ತಾಕ್ ಅಲಿ ಟಿ-20ಗಾಗಿ ಕೆಎಸ್​ಸಿಎ ಕರ್ನಾಟಕ ತಂಡವನ್ನು ಪ್ರಕಟಿಸಿದೆ. ಮನೀಷ್​ ಪಾಂಡೆ ಅನುಪಸ್ಥಿತಿಯಲ್ಲಿ ಕರುಣ್ ನಾಯರ್ ಅವ​ರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಸತತ ಎರಡು ಬಾರಿ ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದಿರುವ ಕರ್ನಾಟಕ ತಂಡ ಈ ಬಾರಿ ಸ್ಟಾರ್​ ಆಟಗಾರರಾದ ಮಯಾಂಕ್ ಅಗರ್​ವಾಲ್​, ಕೆ.ಎಲ್.ರಾಹುಲ್ ಮತ್ತು ಮನೀಶ್​ ಪಾಂಡೆ ಸೇವೆಯನ್ನು ತಪ್ಪಿಸಿಕೊಳ್ಳಲಿದೆ. ಮಯಾಂಕ್ ಮತ್ತು ರಾಹುಲ್ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದರೆ, ಮನೀಶ್ ಪಾಂಡೆ ಭುಜದ ನೋವಿಗೆ ತುತ್ತಾಗಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಕರ್ನಾಟಕ ತಂಡ ಮತ್ತು ಸಿಬ್ಬಂದಿ
ಕರ್ನಾಟಕ ತಂಡ ಮತ್ತು ಸಿಬ್ಬಂದಿ

ಓದಿ: ಐಸಿಸಿ ದಶಕದ ಟೆಸ್ಟ್​ ತಂಡಕ್ಕೆ ಕೊಹ್ಲಿ ಕ್ಯಾಪ್ಟನ್‌: ತಂಡ ಹೀಗಿದೆ ನೋಡಿ..

ಐಪಿಎಲ್ ಸ್ಟಾರ್​ ಆಟಗಾರರಾದ ದೇವದತ್​ ಪಡಿಕ್ಕಲ್​, ಶ್ರೇಯಸ್ ಗೋಪಾಲ್, ಕೆ. ಗೌತಮ್​, ​ಪವನ್​ ದೇಶಪಾಂಡೆ, ಪ್ರಸಿದ್ಧ ಕೃಷ್ಣ ಕೂಡ ಅವಕಾಶ ಪಡೆದಿದ್ದಾರೆ. ಪವನ್ ದೇಶಪಾಂಡೆಗೆ ಉಪನಾಯಕ ಪಟ್ಟ ನೀಡಲಾಗಿದೆ.

ಕರ್ನಾಟಕ ತಂಡ 2018/19 ಮತ್ತು 2019/20ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಜಯಿಸಿದೆ.

20 ಸದಸ್ಯರ ಕರ್ನಾಟಕ ತಂಡ:

ಕರುಣ್ ನಾಯರ್​ (ನಾಯಕ), ಪವನ್​ ದೇಶಪಾಂಡೆ, ದೇವದತ್​ ಪಡಿಕ್ಕಲ್​, ರೋಹನ್ ಕದಂ, ಸಿದ್ಧಾರ್ಥ್​ ಕೆ.ವಿ, ಶ್ರೀಜಿತ್​ ಕೆ.ಎಲ್ ​(ವಿಕೆಟ್ ಕೀಪರ್​), ಶರತ್​ ಬಿ.ಆರ್​(ವಿಕೆಟ್​ ಕೀಪರ್​), ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಕೆ. ಗೌತಮ್​, ​ಜಗದೀಶ್​ ಸುಚಿತ್, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ಪ್ರಸಿದ್ಧ ​ ಕೃಷ್ಣ, ಪ್ರತೀಕ್ ಜೈನ್, ವಿ. ಕೌಶಿಕ್​, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಬಾಂಡಗೆ ಹಾಗು ಶುಭಾಂಗ್ ಹೆಗ್ಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.