ETV Bharat / sitara

ದಿವ್ಯಾಗೆ ಊಟ ಕಳುಹಿಸಿ, ಸ್ವಲ್ಪ ಹೊತ್ತಾದ್ರೂ ಅರವಿಂದ್‌ ಮೇಲಿನ ನೋಟ ಬಿಡಿ ಎಂದ ಕಿಚ್ಚ

author img

By

Published : Aug 4, 2021, 4:50 AM IST

sudeep-sent-lunch-for-bigg-boss-contestants
ದಿವ್ಯಾಗೆ ಊಟ ಕಳುಹಿಸಿ, ಸ್ವಲ್ಪ ಹೊತ್ತಾದ್ರೂ ಅರವಿಂದ್‌ ಮೇಲಿನ ನೋಟ ಬಿಡಿ ಎಂದ ಕಿಚ್ಚ

'ಡಿಯು ಅವರೇ ಕೇಳಿದ್ರಿ ನೀವು ಊಟ.. ಪ್ರೀತಿಯಿಂದ ತಿನ್ನುತ್ತ ಸ್ವಲ್ಪ ಹೊತ್ತಾದ್ರೂ ಬಿಡಿ ಅರವಿಂದ್‌ ಮೇಲಿನ ನೋಟ' ಎಂದು ಸುದೀಪ್​ ಕಳುಹಿಸಿದ್ದ ಪತ್ರದಲ್ಲಿತ್ತು.

ಬಿಗ್​ ಮನೆಯ ಸ್ಪರ್ಧಿಗಳಿಗೆ ಮನೆಯಲ್ಲಿ ಈಡೇರದ ಆಸೆಗಳನ್ನು ಒಂದೊಂದಾಗಿ ಬಿಗ್​ಬಾಸ್ ಈಡೇರಿಸುತ್ತಿದ್ದಾರೆ. ದಿವ್ಯಾ ಉರುಡುಗ ಕೇಳಿಕೊಂಡಿದ್ದ ಆಸೆಯನ್ನು ಬಿಗ್​​ಬಾಸ್ ನೆರವೇರಿಸಿದ್ದು, ಮನೆಯ ಸದಸ್ಯರು ಫುಲ್ ಖುಷಿಯಾಗಿದ್ದಾರೆ.

ಕಿವಿ ಆಕಾರದ ಆಕೃತಿಯಲ್ಲಿ ಬಿಗ್​​ಬಾಸ್ ಬಳಿ ಸುದೀಪ್ ಅವರು ಮಾಡಿದ ಅಡುಗೆಯನ್ನು ಮನೆಯ ಸದಸ್ಯರೆಲ್ಲರೂ ಸವಿಯಬೇಕು ಎಂದು ಕೇಳಿಕೊಂಡಿದ್ದರು ದಿವ್ಯಾ. ದಿವ್ಯಾ ಕೋರಿಕೆಯನ್ನು ಶೀಘ್ರವೇ ಈಡೇರಿಸಿರುವ ಸುದೀಪ್, ವಿಶೇಷ ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅದರ ಜೊತೆಗೆ ದಿವ್ಯಾ ಉರುಡುಗಗೆ ಒಂದು ಕಿವಿಮಾತು ಕೂಡ ಹೇಳಿದ್ದಾರೆ.

ನೀವು ಇಷ್ಟಪಟ್ಟ ಹಾಗೆಯೇ ಅಡುಗೆ ಜೊತೆಗೆ ಸುದೀಪ್​, ಒಂದು ಪತ್ರವನ್ನೂ ಜೊತೆಯಲ್ಲಿ ಕಳುಹಿಸಿದ್ದರು. ಅದರಲ್ಲಿ 'ಡಿಯು ಅವರೇ ಕೇಳಿದ್ರಿ ನೀವು ಊಟ.. ಪ್ರೀತಿಯಿಂದ ತಿನ್ನುತ್ತ ಸ್ವಲ್ಪ ಹೊತ್ತಾದ್ರೂ ಬಿಡಿ ಅರವಿಂದ್‌ ಮೇಲಿನ ನೋಟ' ಎಂದು ಬರೆಯಲಾಗಿತ್ತು.

ಪತ್ರ ಓದಿ ಮತ್ತಷ್ಟು ಖುಷ್​ ಆದ ದಿವ್ಯಾ, ಹಾಗೂ ಇಡೀ ಮನೆಯ ಸ್ಪರ್ಧಿಗಳು ಅಡುಗೆ ಮಾಡಿ ಕಳುಹಿಸಿದ್ದಕ್ಕಾಗಿ ಕಿಚ್ಚ ಸುದೀಪ್‌ಗೆ ಧನ್ಯವಾದ ತಿಳಿಸಿದ್ರು.

ಇದನ್ನೂ ಓದಿ: Bigg Boss-8: ವೈಷ್ಣವಿ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಹೇಗಿದೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.