ETV Bharat / sitara

ರಿಲೀಸ್​ಗೆ ರೆಡಿಯಾದ 'ಆಪರೇಷನ್ ನಕ್ಷತ್ರ'.. ಚಂದನವನದಲ್ಲಿ ಸದ್ದು ಮಾಡುವರೇ ಹೊಸಬರು!

author img

By

Published : Jun 11, 2019, 10:18 AM IST

ಚಿತ್ರ ತಂಡ

ಫೈವ್ ಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್ ಎನ್.ಅರವಿಂದಮೂರ್ತಿ, ಟಿ ಎಸ್ ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳಮನೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಚಿತ್ರ ಸೆನ್ಸಾರ್ ಬೋರ್ಡ್​​ನ ಕದ ತಟ್ಟಿದ್ದು, ಜುಲೈನಲ್ಲಿ 'ಆಪರೇಷನ್ ನಕ್ಷತ್ರ' ಬಿಡುಗಡೆಯಾಗುವ ‌ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.

80ರ ದಶಕದಲ್ಲಿ ಅಣ್ಣಾವ್ರ 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಅಯಾಮ ನೀಡಿದ ಬಾಂಡ್ ಸಿನಿಮಾ. ನಂತರ ನಿರ್ದೇಶಕ ಸಿಂಪಲ್ ಸುನಿ ಹಾಗೂ ರಿಷಿ ಕಾಂಬಿನೇಷನ್​ನ‌ ಆಪರೇಷನ್ ಅಲಮೇಲಮ್ಮ ಕೂಡ ಬಂದು ಚಂದನವನದಲ್ಲಿ ಹೊಸದೊಂದು ಟ್ರೆಂಡ್​ ಸೆಟ್ ಮಾಡಿತ್ತು. ಮತ್ತೆ ಅದೇ ಹೆಸರಿನಲ್ಲಿ 'ಆಪರೇಷನ್ ನಕ್ಷತ್ರ' ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಈ ಮೂಲಕ ಚಿತ್ರರಂಗದಲ್ಲಿ ಮತ್ತೊಂದು ಆಪರೇಷನ್ ಸದ್ದು ಮಾಡುತ್ತದೆಯೇ, ಇಲ್ಲವೇ ಎಂಬುದನ್ನು ಬಿಡುಗಡೆವರೆಗೂ ಕಾಯಬೇಕಿದೆ.

ಸುದ್ದಿಗಾರರರೊಂದಿಗೆ ಮಾತನಾಡಿದ ಚಿತ್ರ ತಂಡ

ಈಗಾಗಲೇ ಚಿತ್ರದ ಟ್ರೇಲರ್‌ನ ಬಿಡುಗಡೆ ಮಾಡಲಾಗಿದೆ. ಇದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಎಂದು ಚಿತ್ರತಂಡ ಹೇಳುತ್ತಿದೆ. ಟ್ರೇಲರ್​ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ನಡೆದಿರುವ ಒಂದು ಕೊಲೆಯ ಸುತ್ತಲೂ ಇರುವ ಸತ್ಯಾಂಶಗಳನ್ನು ನಾಯಕ ಹೇಗೆ ಭೇದಿಸುತ್ತಾನೆ ಎಂಬುದೇ ಚಿತ್ರದ ಒನ್​ಲೈನ್​ ಸ್ಟೋರಿ. ಚಿತ್ರದಲ್ಲಿ ನಾಲ್ಕು ಪಾತ್ರಗಳಿದ್ದು, ಹಲವು ದಿನಗಳ ನಂತರ ಯಜ್ಞಾಶೆಟ್ಟಿ‌ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಲಿಖಿತ್ ಸೂರ್ಯ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೀಪಕ್‍ ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ, ಟಿ ಎಸ್ ಭರತ್ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ 'ಆಪರೇಷನ್ ನಕ್ಷತ್ರ' ಚಿತ್ರದ ಸೂತ್ರದಾರಿ ಮಧುಸೂಧನ್. ಅಷ್ಟೇ ಅಲ್ಲದೆ, ಕಥೆ, ಚಿತ್ರ ಕಥೆಯೂ ಅವರದ್ದೇ ಆಗಿದೆ.

ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್ ವರ್ಕ್​​ನಲ್ಲಿ ಚಿತ್ರತಂಡ ನಿರತವಾಗಿದೆ. ಚಿತ್ರದಲ್ಲಿ ಸುಮಧುರವಾದ ಎರಡು ಹಾಡುಗಳಿದ್ದು, ವೀರ್ ಸಮರ್ಥ್ ಅವುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸಂಜಿತ್ ಹೆಗಡೆ ಹಾಡಿರುವ 'ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ, ಹೇಗೆ ಹೇಳಲಿ ನನ್ನೀ ತಳಮಳ ಬಂಧಿಯಾಗಲೆ, ಆಸೆ ಮೂಡಿದೆ ಪ್ರೀತಿಯೊಂದಕೆ ಅತಿಥಿಯಾಗಲೇ...' ಎಂಬ ಹಾಡು ಈಗಾಗಲೇ ಸಖತ್ ವೈರಲ್ ಆಗಿದೆ. ಅಲ್ಲದೆ ಈ ಹಾಡು ಮೆಲೊಡಿಯಾಗಿ ಮೂಡಿ ಬಂದಿದೆ.

 ರಿಲೀಸ್ ಗೆ ರೆಡಿಯಾದ "ಆಪರೇಷನ್ ನಕ್ಷತ್ರ " ಸಕ್ಸಸ್ ಆಗುತ್ತ ಹೊಸಬರ ‌ಸ್ಯಾಂಡಲ್ ವುಡ್ಆಪರೇಷನ್???...


೮೦ ದಶಕದಲ್ಲಿ ಅಣ್ಣಾವ್ರ "ಆಪರೇಷನ್ ಡೈಮಂಡ್ ರಾಕೇಟ್" ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಅಯಾಮ ನೀಡಿದ ಬಾಂಡ್ ಸಿನಿಮಾ. ನಂತ್ರ ನಿರ್ದೇಶಕ ಸಿಂಪಲ್ ಸುನಿ ಹಾಗೂ ರಿಷಿ ಕಾಂಬಿನೇಷನ್ ನ‌ ಆಪರೇಷನ್ ಅಲಮೇಲಮ್ಮ ನೂ ಬಂದು ಸ್ಯಾಂಡಲ್ ವುಡ್ ನಲ್ಲಿ ನ್ಯೂ ಡ್ರೆಂಡ್ ಸೆಟ್ ಮಾಡಿತ್ತು. ಈಗ ಮತ್ತೆ ಈ ಎರಡು ಟೈಟಲ್ ಒಂದು ಸ್ಮಾಲ್ ಆಪರೇಷನ್ ಆಗಿ ಈ ಮತ್ತೆ " ಆಪರೇಷನ್ ನಕ್ಷತ್ರ" ಎಂಬ ಟೈಟಲ್ ನಲ್ಲಿ ಹೊಸಬರ ತಂಡವೊಂದು ಒಂದು ಸ್ಪೆನ್ಸರ್ ಡ್ರಿಲ್ಲರ್ ಚಿತ್ರಮಾಡುವ ಮೂಲಕಮತ್ತೆಚಿತ್ರರಂಗದಲ್ಲಿಮತ್ತೊಂದು
ಆಪರೇಷನ್ ಮಾಡಲು ಮುಂದಾಗಿದ್ದು ಇಂದು ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಲಾಂಚ್ ಮಾಡಿದೆ. ಇನ್ನೂ
ಟ್ರೈಲರ್ ಸಖತ್ ಕ್ಯಾರಿಯ ಸಿಟಿಯಾಗಿದದ್ದು ಒಂದು ಕೊಲೆಯ ಸುತ್ತಾ ಸುತ್ತವ ಮರ್ಡರ್ ಮಿಸ್ಟ್ರಿ ಯನ್ನು ನಾಯಕ ಹೇಗೆ ಭೇದಿಸುತ್ತಾನೆ ಎಂಬುದೆ ಚಿತ್ರದ ಒನ್ ಲೈನ್ ಸ್ಟೋರಿಯಾಗಿದ್ದು.ಚಿತ್ರದಲ್ಲಿ ಪ್ರಮುಖ ನಾಲ್ಕು ಪಾತ್ರಗಳಿದ್ದು. ತುಂಭಾ ದಿನಗಳ ನಂತ್ರ ಯಜ್ಞಾಶೆಟ್ಟಿ‌
ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿದ್ದಾರೆ.ಜೊತೆಗೆ ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, , ಲಿಖಿತ್ ಸೂರ್ಯ ಲೀಡ್ ರೋಲ್ ಪ್ಲೇ ಮಾಡಿದ್ದು ಉಳಿದಂತೆ ದೀಪಕ್‍ ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ,
ವಿಜಯಲಕ್ಷ್ಮಿ,ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್. ಭರತ್ ಇನ್ನು ಮುಂತಾದವರ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಇನ್ನೂ ಈ "ಆಪರೇಷನ್ ನಕ್ಷತ್ರ" ಚಿತ್ರದ ಸೂತ್ರದಾರಿ ಮಧುಸೂಧನ್. ಇನ್ನೂ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಮಧುಸೂಧನ್ ನಿರ್ದೇಶನ ಮಾಡಿದ್ದಾರೆ.ಇನ್ನೂ ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದಿ ಪೋಸ್ಟ್‌ ಪ್ರೊಡಕ್ಷನ್ ವರ್ಕ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.ಇನ್ನೂ ಚಿತ್ರಕ್ಕೆ ವೀರ್ ಸಮರ್ಥ್ ರಾಗ ಸಂಯೋಜಿಸಿದ್ದು, ಚಿತ್ರದಲ್ಲಿ ಎರಡು ಹಾಡುಗಳಿದ್ದು .'ಸಂಜಿತ್ ಹೆಗಡೆ ಹಾಡಿರುವ ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ, ಹೇಗೆ ಹೇಳಲಿ ನನ್ನೀ ತಳಮಳಬಂಧಿಯಾಗಲೆ, ಆಸೆ ಮೂಡಿದೆ ಪ್ರೀತಿಯೊಂದಕೆ ಅತಿಥಿಯಾಗಲೇ...' ಎಂಬ ಹಾಡು ಈಗಾಗಲೇ ಸಖತ್ ವೈರಲ್ ಆಗಿದೆ.ಅಲ್ಲದೆ‌ಈ ಹಾಡಿನಲ್ಲಿ ಒಂದು ವಿಶೇಷವಿದ್ದು, ಯುವ ಗಾಯಕ ಸಂಚಿತ್ ಹೆಗ್ಡೆ ಜಾಜ್ ಸ್ಟೈಲ್ ನಲ್ಲಿ ಸ್ವಲ್ಲ ವಾಯ್ಸ್ ನಲ್ಲಿ ಕ್ರಾಕ್ ಮೆಂಟೇನ್ ಮಾಡಿ ಹಾಡಿದ್ದು . ತುಂಭಾ ಮೇಲೇಡಿಯಾಗಿ ಈ ಹಾಡು ಮೂಡಿ ಬಂದಿದೆ. ಇನ್ನೂ ಈ ಚಿತ್ರವನ್ನು ಫೈವ್ ಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್ ಎನ್.,ಅರವಿಂದ್ ಮೂರ್ತಿ ಟಿ.ಎಸ್.,ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳ ಮನೆ ನಿರ್ಮಿಸಿದ್ದು .ಸದ್ಯ ಚಿತ್ರ ಸೆನ್ಸಾರ್ ಬೋರ್ಡ್ ಕದ ತಟ್ಟಿದ್ದು ಜುಲೈ ನಲ್ಲಿ " ಆಪರೇಷನ್ ನಕ್ಷತ್ರ" ರಿಲೀಸ್ ಆಗುವ ‌ಸಾಧ್ಯತೆ ಇದೆ.


ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.