ETV Bharat / sitara

ದುನಿಯಾ ರಶ್ಮಿ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್​

author img

By

Published : Jul 24, 2019, 8:42 AM IST

ದುನಿಯಾ ರಶ್ಮಿ

ಓಂ ಸಾಯಿ ಪ್ರಕಾಶ್​ ನಿರ್ದೇಶನದ ಹೊಸ ಸಿನಿಮಾಗೆ ಜಗ್ಗಿ ಜಗನ್ನಾಥ್ ಶಿರ್ಷಿಕೆ ಅಂತಿಮಗೊಂಡಿದೆ. ಈ ಚಿತ್ರದಲ್ಲಿ ದುನಿಯಾ ಖ್ಯಾತಿಯ ರಶ್ಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.

2007ರಲ್ಲಿ ತೆರೆಕಂಡ 'ದುನಿಯಾ' ಸಿನಿಮಾದಿಂದ ಮಿಂಚಿದವರು ನಟಿ ರಶ್ಮಿ. ಇಂದಿಗೂ ಆ ಸಿನಿಮಾದ ಇಮೇಜ್ ಅವರ ವೃತ್ತಿ ಜೀವನವನ್ನು ತೂಗುತ್ತ ಬಂದಿದೆ. ಕಳೆದ ವರ್ಷ ಇವರು ಅಭಿನಯಿಸಿದ್ದ 'ಪ್ರೀತಿ ಕಿತಾಬು' ಹಾಗೂ 'ಅಸ್ತಿತ್ವ' ಸಿನಿಮಾಗಳು ಬಿಡುಗಡೆ ಆಗಿದ್ವು. ನಂತರ ಅರುಂಧತಿ, ನಮಗಾಗಿ ಹಾಗೂ ಸ್ವರ್ಣಾಂಜಲಿ ಸಿನಿಮಾಗಳನ್ನು ಒಪ್ಪಿದರೂ ಎಂಬ ಸುದ್ದಿ ಸಹ ಇತ್ತು. ಆದರೆ, ಅವರ ಸದ್ಯದ ಸಿನಿಮಾದ ಶಿರ್ಷಿಕ ‘ಜಗ್ಗಿ ಜಗನ್ನಾಥ್’ ಎಂದು ನಾಮಕರಣ ಆಗಿದೆ.

ಕನ್ನಡದಲ್ಲಿ 100 ಸಿನಿಮಾಗಳ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಶ್​ ಈ ಚಿತ್ರವನ್ನು ಪಕ್ಕಾ ಆ್ಯಕ್ಷನ್, ಲವ್, ಕಮರ್ಷಿಯಲ್ ದಾಟಿಯಲ್ಲಿ, ಭೂಗತಲೋಕದ ವಿಷಯ ಸಹ ಅಡಗಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಿಂದ ಲಿಖಿತ್ ರಾಜ್ ಎಂಬ ಯುವಕನನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ. ಪೇಪರ್ ಆಯುವ ಸಾಮಾನ್ಯ ಹುಡುಗ ಅಘೋರಿ ಆಗುವ ಕಥಾ ವಸ್ತು ಈ ಚಿತ್ರದ ಒಂದು ಎಳೆ.

‘ಜಗ್ಗಿ ಜಗನ್ನಾಥ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೂರು ಹಾಡುಗಳನ್ನು ರಾಜಸ್ಥಾನದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಶ್ರೀ ಮೈಲಾರ ಲಿಂಗೇಶ್ವರ ಮೂವಿ ಅಡಿಯಲ್ಲಿ ಹೆಚ್ ಜಯರಾಜು, ಜಿ ಶಾರದ ಚಿತ್ರಕ್ಕೆ ಹಣ ಹೂಡಿದ್ದಾರೆ. ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ, ಸಾಯಿ ಸರ್ವೇಶ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಶ್ರೀನಿವಾಸ್.ಪಿ.ಬಾಬು ಸಂಕಲನ, ಅರವಿಂದ್ ಡಿಸ್ಕೋ ಡಿ ಸಿಲ್ವ ನೃತ್ಯ, ಜಾನಿ, ಕೌರವ ವೆಂಕಟೇಶ್ ಅವರ ಸಾಹಸವಿದೆ.

ಪೋಷಕ ಪಾತ್ರಗಳಲ್ಲಿ ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ, ಪವನ್, ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಹಾಗೂ ಇತರರಿದ್ದಾರೆ.

ಧುನಿಯ ರಶ್ಮಿ ಚಿತ್ರಕ್ಕೆ ಜಗ್ಗಿ ಜಗನ್ನಾಥ್ ಶೀರ್ಷಿಕೆ

ಧುನಿಯ ಸಿನಿಮಾ ಇಂದ 2007 ರಲ್ಲಿ ಮಿಂಚಿದ ರಶ್ಮಿ ಇಂದಿಗೂ ಆ ಸಿನಿಮಾದ ಇಮೇಜ್ ಅವರ ವೃತ್ತಿ ಜೀವನವನ್ನು ತೂಗುತ್ತ ಬಂದಿದೆ. ಕಳೆದ ವರ್ಷ ಪ್ರೀತಿ ಕಿತಾಬು ಹಾಗೂ ಅಸ್ತಿತ್ವ ಸಿನಿಮಾಗಳಲ್ಲಿ ಧುನಿಯ ರಶ್ಮಿ ಅಭಿನಯಿಸಿದ್ದು ಬಿಡುಗಡೆ ಆಗಿತ್ತು. ಆರಂಧತಿ, ನಮಗಾಗಿ ಹಾಗೂ ಸ್ವರ್ಣಾಂಜಲಿ ಸಿನಿಮಗಳು ಧುನಿಯ ರಶ್ಮಿ ಒಪ್ಪಿದರೂ ಎಂಬ ಸುದ್ದಿ ಸಹ ಇತ್ತು.

ಆದರೆ ಅವರ ಸಧ್ಯದ ಸಿನಿಮಾದ ಶೀರ್ಷಿಕ ಜಗ್ಗಿ ಜಗನ್ನಾಥ್ ಎಂದು ನಾಮಕರಣ ಆಗಿದೆ. ಕನ್ನಡದಲ್ಲಿ 100 ಸಿನಿಮಾಗಳ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಷ್ ಈ ಚಿತ್ರವನ್ನೂ ಪಕ್ಕ ಆಕ್ಷನ್, ಲವ್, ಕಮರ್ಷಿಯಲ್ ದಾಟಿಯಲ್ಲಿ, ಭೂಗತ ಲೋಕದ ವಿಷಯ ಸಹ ಅಡಗಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಿಂದ ಲಿಖಿತ್ ರಾಜ್ ಎಂಬ ಯುವಕ ಪರಿಚಯ ಮಾಡುತ್ತಿದ್ದಾರೆ ಸಾಯಿಪ್ರಕಾಶ್. ಪೇಪರ್ ಆಯುವ ಸಾಮಾನ್ಯ ಹುಡುಗ ಅಘೋರಿ ಆಗುವ ಕಥಾ ವಸ್ತು ಈ ಚಿತ್ರದ ಒಂದು ಎಳೆ.

ಜಗ್ಗಿ ಜಗನ್ನಾಥ್ ಚಿತ್ರದ ಮೊದಲ ಪ್ರತಿ ಸಿದ್ದವಾಗಿದೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೂರು ಹಾಡುಗಳನ್ನು ರಾಜಸ್ಥಾನದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಶ್ರೀ ಮೈಲಾರ ಲಿಂಗೇಶ್ವರ ಮೂವಿ ಅಡಿಯಲ್ಲಿ ಎಚ್ ಜಯರಾಜು, ಜಿ ಶಾರದ ಚಿತ್ರಕ್ಕೆ ಹಣ ಹೂಡಿದ್ದಾರೆ. ಎ ಎಂ ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ, ಸಾಯಿ ಸರ್ವೇಶ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಶ್ರೀನಿವಾಸ್ ಪಿ ಬಾಬು ಸಂಕಲನ, ಅರವಿಂದ್ ದಿಸ್ಕೋ ಡಿ ಸಿಲ್ವ ನೃತ್ಯ, ಜಾನಿ, ಕೌರವ ವೆಂಕಟೇಶ್ ಸಾಹಸವಿದೆ.

ಪೋಷಕ ಪಾತ್ರಗಳಲ್ಲಿ ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ, ಪವನ್, ಮೋಹನ್ ಜುನೇಜ, ಗುರುರಾಜ್ ಹೊಸ್ಕೋತೆ, ವಾಣಿಶ್ರೀ, ನಾಗರಾಜ್ ಕೋಟೆ ಹಾಗೂ ಇತರರು ಇದ್ದಾರೆ. 

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.