ETV Bharat / sitara

'ಗರುಡ ಗಮನ ವೃಷಭ ವಾಹನ' ನೋಡಿ ಮೆಚ್ಚಿಕೊಂಡ ಅನುರಾಗ್ ಕಶ್ಯಪ್

author img

By

Published : Jan 28, 2022, 8:32 AM IST

ಅನುರಾಗ್ ಕಶ್ಯಪ್
ಅನುರಾಗ್ ಕಶ್ಯಪ್

'ಗರುಡು ಗಮನ ವೃಷಭ ವಾಹನ' ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ರಾಜ್ ಬಿ ಶೆಟ್ಟಿ ನನ್ನ ನೆಚ್ಚಿನ‌ ನಿರ್ದೇಶಕ ಎಂದು ಬಾಲಿವುಡ್ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜುಗಲ್‌ ಬಂಧಿಯಲ್ಲಿ ಮೂಡಿ ಬಂದಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ 5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ, ಮೂರೇ ದಿನದಲ್ಲಿ ದಾಖಲೆ ಬರೆದಿತ್ತು. ಮೊದಲು ಮೂರು ದಿನಗಳಲ್ಲಿಗಲ್ಲೇ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು. ಇದೀಗ ಈ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಮೆಚ್ಚಿಕೊಂಡಿದ್ದಾರೆ.

'ಗರುಡ ಗಮನ ವೃಷಭ ವಾಹನ' ಸಿನಿಮಾ ಚಿತ್ರಪ್ರೇಮಿಗಳು ಮಾತ್ರ ಸಿನಿಮಾರಂಗದ ಸೆಲೆಬ್ರಿಟಿಗಳಿಗೆ ಇಷ್ಟವಾಗಿದೆ. ಈ ಸಿನಿಮಾವನ್ನು‌ ಅನುರಾಗ್ ಕಶ್ಯಪ್ ಮನಸಾರೆ ಮೆಚ್ಚಿಕೊಂಡು ಹಾಡಿ ಹೊಗಳಿದ್ದಾರೆ. ರಾಜ್ ಬಿ ಶೆಟ್ಟಿ ನನ್ನ ನೆಚ್ಚಿನ‌ ನಿರ್ದೇಶಕ. ನ್ಯೂ ಫೇವರಿಟ್ ಫಿಲ್ಮ್ ಮೇಕರ್ ಎಂದಿರುವ ಅನುರಾಗ್ ಕಶ್ಯಪ್, ಅಂಗಮಲಿ ಡೈರೀಸ್, ಪರುತಿವೀರನ್ ಈ ಜಾನರ್​ನಲ್ಲಿ 'ಗರುಡು ಗಮನ ವೃಷಭ ವಾಹನ' ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದಿದ್ದಾರೆ.

ಕನ್ನಡದ ಒಟಿಟಿ‌ ಫ್ಲಾರ್ಟ್ ಫಾರಂ ಜೀ 5ನಲ್ಲಿರುವ ಜಿಜಿವಿವಿ ಸಿನಿಮಾವನ್ನು ಪ್ರತಿಯೊಬ್ಬರು ನೋಡಿ. ಗ್ಯಾಂಗ್ ಕಥೆಯಾಧಾರಿತ ಸಿನಿಮಾವಾಗಿರುವ 'ಗರುಡ ಗಮನ ವೃಷಭ ವಾಹನ' ಬಗ್ಗೆ ಇನ್ ಸ್ಟಾಗ್ರಾಮ್​ನಲ್ಲಿ ಹೇಳಿದ್ದೆ. ಪ್ರತಿಯೊಬ್ಬರಿಗೂ ಸಿನಿಮಾ ನೋಡುವಂತೆ ತಿಳಿಸಿದ್ದೆ ಎಂದಿದ್ದಾರೆ.

ಅನುರಾಗ್ ಕಶ್ಯಪ್ ಅವರಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಈ ಸಿನಿಮಾವನ್ನು ಇಷ್ಟ ಪಟ್ಟಿದ್ದರು. ಕಳೆದ ನವೆಂಬರ್ 19ರಂದು ಥಿಯೇಟರ್​ಗೆ ಎಂಟ್ರಿ ಕೊಟ್ಟಿದ್ದ ಗರುಡ ಗಮನ ವೃಷಭ ವಾಹನ ಸಿನಿಮಾ ಥಿಯೇಟರ್​ನಲ್ಲೂ ಧೂಳ್ ಎಬ್ಬಿಸಿತ್ತು. ಈಗ ಜೀ5 ಒಟಿಟಿಯಲ್ಲಿ ಕಮಾಲ್​​ ಮಾಡ್ತಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.