ETV Bharat / sitara

ಕೊರೊನಾ ಜಾಗೃತಿಗೆ ಮುಂದಾದ ರಾಕಿಭಾಯ್!

author img

By

Published : May 12, 2021, 10:42 PM IST

Actor Yash is an ambassador of Kerala Police
ನಟ ಯಶ್​

ದೇಶದಲ್ಲಿ ಕೊರೊನಾ ಮಟ್ಟ ಹಾಕಿದ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನದಲ್ಲಿದೆ. ಅಲ್ಲಿನ ರಾಜ್ಯ ಸರ್ಕಾರ ಈ ಕೊರೊನಾವನ್ನ ಹೆಚ್ಚು ಹರಡದಂತೆ ಎಚ್ಚರಿಕೆ ವಹಿಸಿದೆ. ಸದ್ಯ ಕೊರೊನಾ ಎರಡನೇ ಅಲೆಯಿಂದ ಕೇರಳದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ‌. ಈ ಹಿನ್ನೆಲೆ ಅದರ ಕಡಿವಾಣಕ್ಕೆ ಮುಂದಾಗಿರುವ ಅಲ್ಲಿನ ಪೊಲೀಸ್​ ಇಲಾಖೆ ಸ್ಯಾಂಡಲ್​ವುಡ್​ನ ನಟನ ಮೊರೆ ಹೋಗಿದೆ.

ವಿಶ್ವದಾದ್ಯಂತ ಕೊರೊನಾ ಎಂಬ ಹೆಮ್ಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಸಾಂಕ್ರಾಮಿಕ ರೋಗವು ಸಾವಿರಾರು ಜನರ ಉಸಿರು ನಿಲ್ಲಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕೇರಳದ ಪೊಲೀಸ್​ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ.

Actor Yash is an ambassador of Kerala Police
ರಾಕಿಂಗ್ ಸ್ಟಾರ್ ಯಶ್

ಕೆಜಿಎಫ್ ಸಿನಿಮಾ ಮೂಲಕ ಸೌತ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯಾನ್ನಾಗಿ ಮಾಡಲು ನಿರ್ಧರಿಸಿದೆ. ಯಾಕೆಂದರೆ ಯಶ್ ಯೂತ್ ಐಕಾನ್ ಆಗಿದ್ದು, ಕೇರಳದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಮುಖಕ್ಕೆ ಮಾಸ್ಕ್ ಹಾಕುವ ಮೂಲಕ ಕೇರಳ ಜನರಲ್ಲಿ ಕೊರೊನಾ ಕುರಿತು ಯಶ್ ಜಾಗೃತಿ ಮೂಡಿಸಲಿದ್ದಾರಂತೆ.

Actor Yash is an ambassador of Kerala Police
ರಾಕಿಂಗ್ ಸ್ಟಾರ್ ಯಶ್

ಮಾಸ್ಕ್ ಹಾಕಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಲ್ಲಿನ ಪೊಲೀಸ್​ ಇಲಾಖೆ, ಯಶ್​ ಅವರು ಕೊರೊನಾ ಜಾಗೃತಿಗಾಗಿ ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ಮಾಹಿತಿ ನೀಡಿದ್ದಾರೆ. ಸದ್ಯ ರಾಕಿಭಾಯ್ ಕೇರಳ ಪೊಲೀಸರ ರಾಯಭಾರಿ ಆಗಿದ್ದು ಕೊರೊನಾ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

Actor Yash is an ambassador of Kerala Police
ರಾಕಿಂಗ್ ಸ್ಟಾರ್ ಯಶ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.