ETV Bharat / lifestyle

ಮಳೆಗಾಲದಲ್ಲೂ ಕಾಂತಿಯುತ ತ್ವಚೆ ಕಾಪಾಡಿಕೊಳ್ಳಬೇಕೇ?.. ಹೀಗೆ ಮಾಡಿ..!

author img

By

Published : Aug 16, 2021, 8:37 PM IST

ಮಳೆಗಾಲದಲ್ಲೂ ಕಾಂತಿಯುತ ತ್ವಚೆ ಕಾಪಾಡಿಕೊಳ್ಳಬೇಕೇ
ಮಳೆಗಾಲದಲ್ಲೂ ಕಾಂತಿಯುತ ತ್ವಚೆ ಕಾಪಾಡಿಕೊಳ್ಳಬೇಕೇ

ಮಳೆಗಾಲದಲ್ಲಿ ತುಂಬಾ ಜನರಿಗೆ ತಮ್ಮ ತ್ವಚೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ಇರುತ್ತದೆ. ಅದಕ್ಕಾಗಿಯೇ ಈಟಿವಿ ಭಾರತದ ಸುಖೀಭವ ತಂಡ ವೈದ್ಯರಿಂದ ಕೆಲ ಮಾಹಿತಿ ಸಂಗ್ರಹಿಸಿದೆ.

ಯಾರಿಗೆ ತಾನೇ ತಮ್ಮ ತ್ವಚೆಯ ಬಗ್ಗೆ ಕಾಳಜಿ ಇರುವುದಿಲ್ಲ ಹೇಳಿ. ಅದರಲ್ಲೂ ಮಳೆಗಾಲದಲ್ಲಿ ಚರ್ಮವನ್ನು ಆರೋಗ್ಯವಾಗಿಡಲು ಸ್ವಲ್ಪ ಹೆಚ್ಚಿನ ಕಾಳಜಿಯ ಅವಶ್ಯಕವಿರುತ್ತದೆ. ಮಾನ್ಸೂನ್​​ ಕಾಲದಲ್ಲಿ ಯಾವ್ಯಾವ ಬಟ್ಟೆಗಳನ್ನು ಧರಿಸಬೇಕು, ಯಾವ ಆಹಾರ ಸೇವಿಸಬೇಕು. ಹೀಗೆ ಹಲವಾರು ವಿಚಾರಗಳ ಕುರಿತು ಈ ಟಿವಿ ಭಾರತದ ಸುಖೀಭವ ತಂಡವು ಸೌಂದರ್ಯ ತಜ್ಞೆ ಸವಿತಾ ಕುಲಕರ್ಣಿ ಮತ್ತು ಪೌಷ್ಠಿಕ ಆಹಾರ ತಜ್ಞೆ ಡಾ.ಸಂಗೀತಾ ಜತೆ ಮಾತನಾಡಿದೆ.

ಆಹಾರ ಸೇವನೆಯ ಬಗ್ಗೆ ಜಾಗ್ರತೆಯಿಂದಿರಿ

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವುದರಿಂದ ಈ ಸಮಯದಲ್ಲಿ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ಮಸಾಲೆಯುಕ್ತ, ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು ಎಂದು ಪೌಷ್ಟಿಕ ಆಹಾರ ತಜ್ಞೆ ಡಾ.ಸಂಗೀತಾ ಮಾಲು ಹೇಳಿದ್ದಾರೆ.

ಹಣ್ಣುಗಳ ಸೇವನೆ ಉತ್ತಮ

ಈ ಋತುವಿನಲ್ಲಿ ಜೀರ್ಣವಾಗುವ ಆಹಾರವನ್ನು ಮಾತ್ರ ಸೇವಿಸಬೇಕು. ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಹಸಿ ತರಕಾರಿಗಳು, ಸಲಾಡ್​ಗಳನ್ನು ತಿನ್ನಬಾರದು. ಸಾಕಷ್ಟು ನೀರು ಕುಡಿದರೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆಯಿಲ್​ ಸ್ಕಿನ್​ನವರಿಗೆ ಸಮಸ್ಯೆಗಳು ಹೆಚ್ಚು

ಈ ಋತುವಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಆಯಿಲ್ ಸ್ಕಿನ್​ ಇದ್ದವರಿಗೆ ಸಮಸ್ಯೆಗಳು ಹೆಚ್ಚು ಎಂದು ಸೌಂದರ್ಯ ತಜ್ಞೆ ಸವಿತಾ ಕುಲಕರ್ಣಿ ವಿವರಿಸಿದ್ದಾರೆ.

ಚರ್ಮದ ಆರೈಕೆಗೆ ಜನತೆ ಸಂಬಂಧಿಸಿದಂತೆ ಕೆಲ ಸಲಹೆಗಳು ಇಂತಿವೆ.

ಫೇಸ್​ವಾಶ್ ಬಳಸಿ ದಿನಕ್ಕೆ ಮೂರು ಬಾರಿ ಮುಖವನ್ನು ತೊಳೆಯಿರಿ. (ವಿಶೇಷವಾಗಿ ಬೆಳಗ್ಗೆ ಎದ್ದ ನಂತರ, ರಾತ್ರಿ ಮಲಗುವ ಮುನ್ನ) ಇದರಿಂದಾಗಿ ರಂಧ್ರಗಳಲ್ಲಿ ಸಂಗ್ರಹವಾಗಿರುವ ಬೆವರು, ಬ್ಯಾಕ್ಟೀರಿಯಾ, ಧೂಳಿನ ಕಣಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ದಿನಕ್ಕೆ ಎರಡು ಬಾರಿ ಮುಖ ತೊಳೆಯಿರಿ

ನಿಮ್ಮ ಮುಖವನ್ನು ನಿಯಮಿತವಾಗಿ ದಿನಕ್ಕೆ ಎರಡು ಮೂರು ಬಾರಿ ಫೇಸ್ ವಾಶ್‌ನಿಂದ ತೊಳೆಯಿರಿ (ವಿಶೇಷವಾಗಿ ಬೆಳಗ್ಗೆ ಎದ್ದ ನಂತರ ಮತ್ತು ಮಲಗುವ ಮುನ್ನ). ಇದು ರಂಧ್ರಗಳಲ್ಲಿ ಸಂಗ್ರಹವಾಗಿರುವ ಬೆವರು, ಬ್ಯಾಕ್ಟೀರಿಯಾ ಮತ್ತು ಧೂಳಿನ ಕಣಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಚರ್ಮದ ರಂಧ್ರಗಳನ್ನು ಮುಚ್ಚಲು ನಿಯಮಿತವಾಗಿ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದು ಸಹ ಬಹಳ ಮುಖ್ಯ. ಇದಕ್ಕಾಗಿ, ಪಪ್ಪಾಯಿ ಮತ್ತು ಇತರ ಹಣ್ಣುಗಳಿಂದ ಮಾಡಿದ ಫೇಸ್ ಪ್ಯಾಕ್ ಹಾಗೂ ಮೊಸರು ಬಳಸಬಹುದು.

ನಿರಂತರವಾಗಿ ಬದಲಾಗುತ್ತಿರುವ ಹವಾಮಾನವು ನಮ್ಮ ಚರ್ಮದ ರಂಧ್ರಗಳ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಜನರು ಇದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ಮತ್ತು ರಂಧ್ರಗಳಲ್ಲಿ ಕೊಳಕು ಸಂಗ್ರಹವಾಗುವುದರಿಂದ, ಮೊಡವೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ನಿಯಮಿತವಾಗಿ ಚರ್ಮದ ಟೋನಿಂಗ್ ಕೂಡ ಬಹಳ ಮುಖ್ಯ. ಚರ್ಮದ ಟೋನಿಂಗ್​ಗಾಗಿ, ನಿಂಬೆ ರಸ, ಸೌತೆಕಾಯಿ ನೀರು ಮತ್ತು ಗ್ರೀನ್​ ಟೀ ಬಳಸಬಹುದು.

ಕಾಂತಿಯುತ ತ್ವಚೆಗೆ ಹೀಗೆ ಮಾಡಿ

ಮಲಗುವ ಮುನ್ನ ಫೇಸ್​ವಾಶ್​ನಿಂದ ಮುಖ ತೊಳೆದ ಬಳಿಕ ನಿಮ್ಮ ಮುಖಕ್ಕೆ ಸ್ವಲ್ಪ ರೋಸ್ ವಾಟರ್​ ಸಿಂಪಡಿಸಿದರೆ, ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಮಳೆಗಾಲದಲ್ಲಿ ಹತ್ತಿ ಬಟ್ಟೆಗಳನ್ನು ತೊಡುವುದು ಉತ್ತಮ ಎಂದು ಸವಿತಾ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.