ಶಿರಸಿ: ಮದುವೆಯಾಗಲಿಲ್ಲ ಎಂಬುದನ್ನೇ ಮನಸ್ಸಿಗೆ ಹಚ್ಚಿಕೊಂಡ ಯುವಕ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಚಿಪಗಿಯಲ್ಲಿ ನಡೆದಿದೆ.
ಇಲ್ಲಿನ ಸಹ್ಯಾದ್ರಿ ಕಾಲೋನಿಯ ಮಂಜುನಾಥ ಆಂಜನಪ್ಪ ಭೋವಿ (34) ಮೃತಪಟ್ಟ ಯುವಕ. ಈತನು ಕಳೆದ ನಾಲ್ಕು ವರ್ಷಗಳಿಂದ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದು, ಹುಡುಗಿ ಸಿಗದ ಕಾರಣ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದನು ಎಂದು ಮೃತನ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ, ಯುವಕ ತನ್ನ ಮನೆಯ ಸಮೀಪವೇ ಇರುವ ಚಿಪಗಿ ಬೆಟ್ಟಕ್ಕೆ ಹೋಗಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.