ETV Bharat / international

ಮ್ಯಾಂಚೆಸ್ಟರ್‌ನಲ್ಲಿ ವಾಸೀಂ ಅಕ್ರಂಗೆ ಅವಮಾನ; ಅಳಲು ತೋಡಿಕೊಂಡು ಪಾಕ್ ಕ್ರಿಕೆಟಿಗ

author img

By

Published : Jul 23, 2019, 10:36 PM IST

ವಾಸಿಂ ಅಕ್ರಮ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಎಡಗೈ ವೇಗಿ ವಾಸಿಂ ಅಕ್ರಮ್ ತನಗೆ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಅವಮಾನವಾಗಿದೆ ಎಂದು ಟ್ವಿಟ್ಟರ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಮ್ಯಾಂಚೆಸ್ಟರ್/ ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ರನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ವಾಸಿಂ ಅಕ್ರಮ್ ಕೈಯಲ್ಲಿದ್ದ ಇನ್ಸುಲಿನ್ ನನ್ನು ಬ್ಯಾಗ್ ನಿಂದ ತೆಗೆದಿರುವ ವಿಮಾನ ನಿಲ್ಧಾಣ ಅಧಿಕಾರಿಗಳು ಪ್ಲಾಸ್ಟಿಕ್ ಚೀಲಕ್ಕೆ ಸುರಿಯುವಂತೆ ತಿಳಿಸಿದ್ದರು. ಈ ಬಗ್ಗೆ ವಾಸಿಂ ಅಕ್ರಮ್ ಟ್ವಿಟ್ಟರ್‌ನಲ್ಲಿ ಅಸಮಧಾನ ವ್ಯಕ್ತಪಡಿಸಿದ್ದು,"ತನ್ನ ಪ್ರಯಾಣದ ಕೋಲ್ಡ್ ಕೇಸ್ನಿಂದ ಇನ್ಸುಲಿನ್ ಅನ್ನು ಹೊರತೆಗೆಯಲು ಮತ್ತು ಅದನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಲು ತಿಳಿಸಿದರು. ಇದರಿಂದಾಗಿ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ನಾನು ತುಂಬಾ ನಿರಾಶೆಗೊಳ್ಳುವಂತಾಯಿತು. ನನ್ನ ಇನ್ಸುಲಿನ್‌ನೊಂದಿಗೆ ನಾನು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದೇನೆ. ಆದರೆ ನಾನು ಎಂದಿಗೂ ಮುಜುಗರಕ್ಕೊಳಗಾಗಿದ್ದಿಲ್ಲ. ನನ್ನನ್ನು ಅಸಭ್ಯವಾಗಿ ಪ್ರಶ್ನಿಸಿದ್ದರಿಂದ ಮತ್ತು ನನ್ನ ಇನ್ಸುಲಿನ್ ಪ್ರಯಾಣದ ಕೋಲ್ಡ್ ಕೇಸ್‌ನಿಂದ ಹೊರತೆಗೆಯಲು ಸಾರ್ವಜನಿಕವಾಗಿ ಆದೇಶಿಸಿದ್ದರಿಂದ ನನಗೆ ತುಂಬಾ ಅವಮಾನವಾಯಿತು ಎಂದು ಬರೆದುಕೊಂಡಿದ್ದಾರೆ.

  • Very disheartened at Manchester airport today,I travel around the world with my insulin but never have I been made to feel embarrassed.I felt very humiliated as I was rudely questioned & ordered publicly to take my insulin out of its travel cold-case & dumped in to a plastic bag pic.twitter.com/UgW6z1rkkF

    — Wasim Akram (@wasimakramlive) July 23, 2019 " class="align-text-top noRightClick twitterSection" data=" ">

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಎಡಗೈ ವೇಗಿ ಆಗಿರುವ ಅಕ್ರಮ್, 104 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದು, 414 ವಿಕೆಟ್ ಪಡೆದಿದ್ದಾರೆ. 356 ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು ಒಟ್ಟು 502 ವಿಕೆಟ್‌ಗಳನ್ನು ಪಡೆದಿದ್ದಾರೆ.

ವಾಸಿಂ ಅಕ್ರಮ್ ದೂರಿಗೆ ಪ್ರತಿಕ್ರಿಯಿಸಿದ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದ ಅಧಿಕೃತರು "ಹಾಯ್ ವಾಸಿಂ, ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು. ದಯವಿಟ್ಟು ನೀವು ವೈಯುಕ್ತಿಕವಾಗಿ ನಮಗೆ ಸಂದೇಶ ಕಳುಹಿಸಿ ನಾವು ಅದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಾಸಿಂ ನಾನು ವಿಮಾನ ನಿಲ್ಧಾಣದಲ್ಲಿ ಆದ್ಯತೆಯನ್ನು ಬಯಸುವುದಿಲ್ಲ. ಆದರೆ ವಿಮಾನ ನಿಲ್ದಾಣ ಅಧಿಕಾರಿಗಳು ಎಲ್ಲಾ ಜನರೊಂದಿಗೂ ಘನೆತೆಯಿಂದ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವುದನ್ನು ನಿರೀಕ್ಷಿಸುತ್ತೇನೆ ಎಂದು ತಿಳಿಸಿದ್ದಾರೆ.

  • I do not believe I should have been treated differently from anyone else. I just believe there should be a standard of care when dealing with all people. I understand there are proper safety precautions but that doesn’t mean people should be humiliated whilst undergoing them.

    — Wasim Akram (@wasimakramlive) July 23, 2019 " class="align-text-top noRightClick twitterSection" data=" ">
Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.