ETV Bharat / entertainment

'ಕಾಂತಾರ' ಚಿತ್ರ ಕುರಿತು ಹೇಳಿಕೆ; ಬಾಲಿವುಡ್​ ನಿರ್ದೇಶಕರ ನಡುವೆ ಟ್ವೀಟ್​ ವಾರ್​​

author img

By

Published : Dec 15, 2022, 11:03 AM IST

'ಕಾಂತಾರ' ಚಿತ್ರ ಕುರಿತು ಹೇಳಿಕೆ; ಬಾಲಿವುಡ್​ ನಿರ್ದೇಶಕರ ನಡುವೆ ಟ್ವೀಟ್​ ವಾರ್​​
statement-on-kantara-film-tweet-war-between-bollywood-directors-vivek-agnihotri-anurag-kashyap

ಅನುರಾಗ್​ ಕಶ್ಯಪ್​ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ 'ದಿ ಕಾಶ್ಮೀರಿ ಫೈಲ್ಸ್'​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದು, ಇಬ್ಬರ ನಡುವೆ ಟ್ವೀಟ್​ ವಾರ್​ಗೆ ಕಾರಣವಾಗಿದೆ.

ಮುಂಬೈ: ಬಾಲಿವುಡ್​ ಚಿತ್ರ ನಿರ್ದೇಶಕರಾದ ವಿವೇಕ್​ ಅಗ್ನಿಹೋತ್ರಿ ಮತ್ತು ಅನುರಾಗ್​ ಕಶ್ಯಪ್​ ನಡುವೆ ಟ್ವಿಟರ್​ನಲ್ಲಿ ಮಾತಿನ ಚಕಮಕಿ ನಡೆದಿದೆ. ಇತ್ತೀಚೆಗೆ ಅನುರಾಗ್​ ಕಶ್ಯಪ್​, "ಕಾಂತಾರ ಮತ್ತು ಪುಷ್ಪನಂತಹ ಸಿನಿಮಾಗಳು ಉದ್ಯಮವನ್ನು ನಾಶ ಮಾಡುತ್ತಿವೆ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ 'ದಿ ಕಾಶ್ಮೀರಿ ಫೈಲ್ಸ್'​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದು, ಇಬ್ಬರ ನಡುವೆ ಟ್ವೀಟ್​ ವಾರ್​ಗೆ ಕಾರಣವಾಗಿದೆ.

'ಬಾಲಿವುಡ್​ ಮಿಲಾರ್ಡ್​​ ಧೋರಣೆಗೆ ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಇದಕ್ಕೆ ನೀವು ಒಪ್ಪುತ್ತೀರಾ?' ಎಂದು ವಿವೇಕ್​ ಟ್ವೀಟ್​ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ದೇಶಕ ಅನುರಾಗ್​ ಕಶ್ಯಪ್​, 'ಸರ್​​, ಇದು ನಿಮ್ಮ ತಪ್ಪಲ್ಲ. ನನ್ನ ಟ್ವೀಟ್​ಗಳ ಸಂಭಾಷಣೆಗಳಂತೆಯೇ ನಿಮ್ಮ ಚಲನಚಿತ್ರಗಳನ್ನು ಸಂಶೋಧಿಸಲಾಗಿದೆ. ನೀವು ಮತ್ತು ನಿಮ್ಮ ಮಾಧ್ಯಮ ಒಂದೇ ರೀತಿಯ ಸ್ಥಿತಿಯಲ್ಲಿದೆ. ಪರವಾಗಿಲ್ಲ, ಮುಂದಿನ ಬಾರಿ ಸ್ವಲ್ಪ ಗಂಭೀರವಾಗಿ ಸಂಶೋಧನೆ ಮಾಡಿ' ಎಂದಿದ್ದಾರೆ.

  • Sir aapki galti nahin hai, aap ki filmon ki research bhi aisi hi hoti hai jaise aapki mere conversations pe tweet hai. Aapka aur aapki media ka bhi same haal hai. Koi nahin next time thoda serious research kar lena .. https://t.co/eEHPrUeH9u

    — Anurag Kashyap (@anuragkashyap72) December 14, 2022 " class="align-text-top noRightClick twitterSection" data=" ">

ಇದಕ್ಕೆ ಟ್ವೀಟ್​ ಮೂಲಕವೇ ತಿರುಗೇಟು ನೀಡಿರುವ ಅಗ್ನಿಹೋತ್ರಿ, 'ದಿ ಕಾಶ್ಮೀರ್​ ಫೈಲ್ಸ್‌ನ 4 ವರ್ಷಗಳ ಸಂಶೋಧನೆಯು ಸುಳ್ಳು ಎಂದು ಸಾಬೀತುಪಡಿಸಿ. ಗಿರಿಜಾ ಟಿಕೂ, ಬಿ.ಕೆ. ಗಂಜು, ವಾಯುಪಡೆಯ ಸಿಬ್ಬಂದಿ ಹತ್ಯೆ, ನದಿಮಾರ್ಗ ಎಲ್ಲವೂ ಸುಳ್ಳು. 700 ಪಂಡಿತರ ವಿಡಿಯೋಗಳು ಸುಳ್ಳು. ಹಿಂದೂಗಳು ಎಂದಿಗೂ ಸಾಯಲಿಲ್ಲ ಎಂಬುದನ್ನು ನೀವು ಸಾಬೀತು ಪಡಿಸಿ. ಆಗ ಈ ರೀತಿ ತಪ್ಪು ಮತ್ತೊಮ್ಮೆ ಆಗುವುದಿಲ್ಲ' ಎಂದಿದ್ದಾರೆ.

ಈ ಟ್ವೀಟ್​ ವಾರ ಎರಡು ಬಳಕೆದಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದು, ಕೆಲವರು ಅಗ್ನಿಹೋತ್ರಿಯನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಕಶ್ಯಪ್​ ಅವರ ಪರ ನಿಂತಿದ್ದಾರೆ.

  • Bholenath, aap lage haath sabit kar hi do ki #TheKashmirFiles ka 4 saal ka research sab jhooth tha. Girija Tikoo, BK Ganju, Airforce killing, Nadimarg sab jhooth tha. 700 Panditon ke video sab jhooth the. Hindu kabhi mare hi nahin. Aap prove kar do, DOBAARA aisi galti nahin hogi. https://t.co/jc5g3iL4VI

    — Vivek Ranjan Agnihotri (@vivekagnihotri) December 14, 2022 " class="align-text-top noRightClick twitterSection" data=" ">

ಸದ್ಯ ವಿವೇಕ್​ 'ದಿ ವಾಕ್ಸಿನ್​ ವಾರ್'​ ಎಂಬ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ 2023ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ.

ಇನ್ನು, ಅನುರಾಗ್​ ಕಶ್ಯಪ್​ ಅವರು ನಿರ್ದೇಶಿಸಿದ್ದ 'ದುಬಾರಾ' ಚಿತ್ರ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಹೆಚ್ಚಾಗಿ ಸದ್ದು ಮಾಡಲಿಲ್ಲ.

ಇದನ್ನೂ ಓದಿ: ''ಬೇಶರಂ ರಂಗ್'' ವಿವಾದ: ಪಠಾಣ್‌ ಬಿಡುಗಡೆ ಆಗೋದು ಅನುಮಾನ​ ಎಂದ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.