ETV Bharat / entertainment

ಹೆಂಡತಿಯ ಚಪ್ಪಲಿ ಎತ್ತಿಟ್ಟ ರಣಬೀರ್ ಕಪೂರ್​​: ನೆಟ್ಟಿಗರಿಂದ ಮೆಚ್ಚುಗೆ ಪಡೆದ ವಿಡಿಯೋ

author img

By

Published : Apr 22, 2023, 5:20 PM IST

Ranbir Kapoor
ರಣಬೀರ್ ಕಪೂರ್

ಪಮೇಲಾ ಚೋಪ್ರಾ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್ ದಂಪತಿ ಆದಿತ್ಯ​ ಚೋಪ್ರಾ ನಿವಾಸದಲ್ಲಿ ಕಾಣಿಸಿಕೊಂಡರು. ಈ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ದಿವಂಗತ ಬಾಲಿವುಡ್​ ಖ್ಯಾತ ನಿರ್ದೇಶಕ ಯಶ್​ ಚೋಪ್ರಾ ಅವರ ಪತ್ನಿ, ಗಾಯಕಿ ಪಮೇಲಾ ಚೋಪ್ರಾ ಅವರು ಏಪ್ರಿಲ್​ 20 ರಂದು ನಿಧನರಾಗಿದ್ದಾರೆ. ಈ ಹಿನ್ನೆಲೆ ಸಂತಾಪ ಸೂಚಿಸಲು ಬಾಲಿವುಡ್​ ತಾರಾ ದಂಪತಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಆದಿತ್ಯ​ ಚೋಪ್ರಾ ನಿವಾಸದಲ್ಲಿ ಕಾಣಿಸಿಕೊಂಡರು. ಈ ಭೇಟಿಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಏಕೆಂದರೆ, ನೆಟ್ಟಿಗರು ನಟ ರಣಬೀರ್​ ತಮ್ಮ ಹೆಂಡತಿ ಮೇಲಿಟ್ಟಿರುವ ಪ್ರೀತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋದಲ್ಲಿ, ರಣಬೀರ್​ ಅವರು ಆಲಿಯಾ ಹಿಂದೆ ನಡೆದುಕೊಂಡು ಹೋಗುತ್ತಿರುತ್ತಾರೆ. ಆದಿತ್ಯ ಚೋಪ್ರಾ ಮನೆಯ ಒಳಗೆ ಪ್ರವೇಶಿಸುವಾಗ ನಟಿ ತಮ್ಮ ಚಪ್ಪಲಿಯನ್ನು ಕಳಚಿಟ್ಟು ಹೋಗುತ್ತಾರೆ. ಹಿಂದೆ ಇದ್ದ ರಣಬೀರ್​ ಅದನ್ನು ತಮ್ಮ ಕೈಯಲ್ಲಿ ಎತ್ತಿ ಒಂದು ಮೂಲೆಯಲ್ಲಿ ಇಟ್ಟಿರುವುದು ಕಂಡು ಬಂದಿದೆ. ಇದು ಅಭಿಮಾನಿಗಳ ಪ್ರೀತಿಯ ಲೈಕ್ಸ್​ ಮತ್ತು ಕಮೆಂಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಫ್ಯಾನ್ಸ್​ ಬಗೆ ಬಗೆಯ ಬರಹಗಳು ಮತ್ತು ಕೆಂಪು ಹೃದಯದ ಎಮೋಜಿಗಳಿಂದ ಕಮೆಂಟ್​ ವಿಭಾಗವನ್ನು ತುಂಬಿದ್ದಾರೆ.

ಅಭಿಮಾನಿಯೊಬ್ಬರು, 'ರಣಬೀರ್​ ಈ ಗೆಸ್ಟರ್ಗಾಗಿ ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಈ ದಂಪತಿಗೆ ವಿಶೇಷವಾದ ಗೌರವ. ಅವರು ಸಾಧ್ಯವಾದಷ್ಟು ಹಿರಿಯರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಾರೆ' ಎಂದು ಹೇಳಿದ್ದಾರೆ. ಮತ್ತೊಬ್ಬ ಫ್ಯಾನ್​, 'ಭಾರತದ ಅತ್ಯುತ್ತಮ ಜೋಡಿ. ನಾಟಕ, ಓವರ್​ ಆ್ಯಕ್ಟಿಂಗ್​ ಯಾವುದೂ ಇಲ್ಲ' ಎಂದು ಕಮೆಂಟ್​ ಮಾಡಿದ್ದಾರೆ. ರಣಬೀರ್​ ಮತ್ತು ಆಲಿಯಾ ಅಲ್ಲದೇ ಸೈಫ್​ ಅಲಿ ಖಾನ್​, ಕರೀನಾ ಕಪೂರ್​, ಸಿದ್ಧಾರ್ಥ್​ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ಬಾಲಿವುಡ್​ ತಾರೆಯರು ಆದಿತ್ಯ ಚೋಪ್ರಾ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: 'ಸೂತ್ರಧಾರಿ' ಜಪ ಮಾಡುತ್ತಿರುವ ಚಂದನ್ ಶೆಟ್ಟಿ: ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ

ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಮೇಲಾ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ತಮ್ಮ 74 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪ್ರಸಿದ್ಧ ಹಿನ್ನೆಲೆ ಗಾಯಕಿ ಪಮೇಲಾ ಅವರು ಯಶ್​ ಚೋಪ್ರಾ ಅವರ ಬೆಂಬಲಕ್ಕೆ ಸದಾ ಒಂದು ಹೆಜ್ಜೆ ಮುಂದಿದ್ದರು. ಇವರು ನಿರ್ಮಾಪಕಿ, ಕಥೆಗಾರ್ತಿ, ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದ್ದಾರೆ. 1970 ರಲ್ಲಿ ಯಶ್​ ಮತ್ತು ಪಮೇಲಾ ಅವರು ದಾಂಪತ್ಯ ಜೀವನ ಆರಂಭಿಸಿದ್ದರು. ಅವರಿಗೆ ಆದಿತ್ಯ ಚೋಪ್ರಾ ಮತ್ತು ಉದಯ್​ ಚೋಪ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಆದಿತ್ಯ ಚೋಪ್ರಾ ಅವರು ನಿರ್ಮಾಪಕ ಮತ್ತು ನಿರ್ದೇಶಕ ಆಗಿದ್ದು, ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರನ್ನು ಮದುವೆಯಾಗಿದ್ದಾರೆ. ಇನ್ನು ಉದಯ್​ ಚೋಪ್ರಾ ನಟ, ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆ 15 ದಿನಗಳ ಕಾಲ ಪಮೇಲಾ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ವೆಂಟಿಲೇಟರ್​ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ಅವರ ಸ್ಥಿತಿ ಹದೆಗೆಡುತ್ತಲೇ ಇತ್ತು. ಹೀಗಾಗಿ ಚಿಕಿತ್ಸೆ ಫಲಿಸದೇ ಏಪ್ರಿಲ್​ 20 ರಂದು ಕೊನೆಯುಸಿರೆಳೆದರು.

ಇದನ್ನೂ ಓದಿ: ಟೀಕೆ, ಟ್ರೋಲ್​ಗಳನ್ನು ಎದುರಿಸಿ ಮಾದರಿ ದಂಪತಿಯಾದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.