ETV Bharat / entertainment

ಯೋಗಿ ಆದಿತ್ಯನಾಥ್ ಪಾದ ಸ್ಪರ್ಶಿಸಿ ಸಮಸ್ಕರಿಸಿದ 'ಜೈಲರ್​' ಸ್ಟಾರ್​ ರಜನಿಕಾಂತ್​-ವಿಡಿಯೋ

author img

By

Published : Aug 20, 2023, 12:38 PM IST

Updated : Aug 20, 2023, 12:49 PM IST

Rajinikanth met Yogi feet
ಯೋಗಿ ಆದಿತ್ಯನಾಥ್ ರಜನಿಕಾಂತ್ ಭೇಟಿ

Rajinikanth touches CM Yogi Adityanath's feet: ಜೈಲರ್​ ಸ್ಟಾರ್​ ರಜನಿಕಾಂತ್​ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಶನಿವಾರ ಭೇಟಿಯಾದರು.

ಕಾಲಿವುಡ್​ ಸೂಪರ್​ ಸ್ಟಾರ್​ 'ತಲೈವಾ' ರಜನಿಕಾಂತ್​ ಅವರ ಜೈಲರ್​ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿದೆ. ನಿನ್ನೆ (ಶನಿವಾರ) ರಜನಿಕಾಂತ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಕ್ನೋದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.

ಸಿಎಂ ಪಾದ ಸ್ಪರ್ಶಿಸಿದ ರಜನಿಕಾಂತ್: ಶುಕ್ರವಾರ ಲಕ್ನೋದಲ್ಲಿ ಜೈಲರ್​ ಸ್ಪೆಷಲ್​ ಸ್ಕ್ರೀನಿಂಗ್​ ಆಯೋಜಿಸಲಾಗಿತ್ತು. ಈವೆಂಟ್​ನಲ್ಲಿ ಡಿಸಿಎಂ ಕೇಶವ್​ ಪ್ರಸಾದ್​ ಮೌರ್ಯು ಕೂಡಾ ಪಾಲ್ಗೊಂಡಿದ್ದರು. ಇದೀಗ ರಜನಿಕಾಂತ್​ ಮತ್ತು ಯೋಗಿ ಆದಿತ್ಯನಾಥ್ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವೈರಲ್​ ವಿಡಿಯೋದಲ್ಲಿ, ರಜನಿಕಾಂತ್‌ ಅವರು ಸಿಎಂ ಯೋಗಿ ಪಾದ ಸ್ಪರ್ಶಿಸುತ್ತಿರುವುದನ್ನು ನೋಡಬಹುದು.

  • प्रख्यात फिल्म अभिनेता श्री रजनीकांत जी से आज लखनऊ स्थित सरकारी आवास पर शिष्टाचार भेंट हुई।@rajinikanth pic.twitter.com/HIByc0aOO0

    — Yogi Adityanath (@myogiadityanath) August 19, 2023 " class="align-text-top noRightClick twitterSection" data=" ">

ಕೆಲವೇ ಕ್ಷಣಗಳಲ್ಲಿ ಆನ್​ಲೈನ್​ನಲ್ಲಿ ಭಾರಿ ವೀವ್ಸ್ ಪಡೆದಿರುವ ವಿಡಿಯೋದಲ್ಲಿ, ರಜನಿಕಾಂತ್​ ಅವರು ಕಾರಿನಿಂದ ಇಳಿಯುವುದನ್ನು ಕಾಣಬಹುದು. ಜನರಿಗೆ, ಅಭಿಮಾನಿಗಳಿಗೆ ನಮಸ್ಕರಿಸುತ್ತಾ ಅವರು ಮುಂದೆ ಸಾಗುತ್ತಾರೆ. ಸೂಪರ್​ ಸ್ಟಾರ್‌ ಸ್ವಾಗತಿಸಲು ಸಿಎಂ ಯೋಗಿ ಹೊರಗೆ ಆಗಮಿಸಿದ್ದರು. ಈ ವೇಳೆ ರಜನಿಕಾಂತ್‌ ಸಿಎಂ ಯೋಗಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಸೂಪರ್​ ಸ್ಟಾರ್ ಸರಳತೆ ಜನರ ಹೃದಯ ಗೆದ್ದಿದೆ. ವಿಡಿಯೋಗೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: 'ಟೈಗರ್ ನಾಗೇಶ್ವರ ರಾವ್' ಚಿತ್ರದ ಟೀಸರ್​​ ರಿಲೀಸ್​: ರಗಡ್​ ಲುಕ್​ನಲ್ಲಿ ಮಾಸ್​ ಮಹಾರಾಜ

ನೆಟ್ಟಿಗರ ಪ್ರತಿಕ್ರಿಯೆ: ಸೂಪರ್​ ಸ್ಟಾರ್ ರಜನಿ​ ಮತ್ತು ಸಿಎಂ ಯೋಗಿ ಭೇಟಿಯ ವಿಡಿಯೋ ಶೇರ್ ಮಾಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು, "ನಟ ರಜನಿಕಾಂತ್​ ಅವರು ಲಕ್ನೋದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿಯಾಗಿದ್ದು, ಅವರ ಪಾದ ಸ್ಪರ್ಶಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಆನ್​ಲೈನ್​ನಲ್ಲಿ ವೈರಲ್​ ಅಗುತ್ತಿರುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ರಿಯಲ್ ಹೀರೋ ವಿತ್ ರೀಲ್​ ಹೀರೋ' ಎಂದು ಗುಣಗಾನ ಮಾಡಿದ್ದಾರೆ. ಮತ್ತೋರ್ವ ನೆಟ್ಟಿಗ, "ಪೊಲಿಟಿಕಲ್​ ಸೂಪರ್​ ಸ್ಟಾರ್ ಜೊತೆ ಇಂಡಿಯನ್​ ಸಿನಿಮಾ ಸೂಪರ್​ ಸ್ಟಾರ್"​ ಎಂದು ಮೆಚ್ಚಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಪಾದ ಸ್ಪರ್ಶಿಸಿ ಸಮಸ್ಕರಿಸಿರುವ ಹಿನ್ನೆಲೆಯಲ್ಲಿ ಕೆಲವರು ಇಬ್ಬರ ವಯಸ್ಸಿನ ಅಂತರದ ವಿಚಾರವೆತ್ತಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಪ್ಯಾನ್​ ಇಂಡಿಯಾ ಚಿತ್ರ 'ಸಿಕಾಡಾ' ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಗೊಳಿಸಿದ ಮೇಘನಾ ರಾಜ್​, ಪ್ರಜ್ವಲ್​ ದೇವರಾಜ್​

ನೆಲ್ಸನ್​ ದಿಲೀಪ್​ ಕುಮಾರ್ ನಿರ್ದೇಶನದ ಜೈಲರ್​ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ದೇಶೀಯ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ರೂ. ಗಡಿ ದಾಟಿರುವ ಸಿನಿಮಾ ಜಾಗತಿಕವಾಗಿ 500 ಕೋಟಿ ರೂ. ಗಳಿಸುವಲ್ಲಿ ಯಶ ಕಂಡಿದೆ. ರಜನಿಕಾಂತ್​ ಅವರು ಸಿನಿಮಾ ಬಿಡುಗಡೆಗೂ ಮುನ್ನ ಹಿಮಾಲಯ ಪ್ರವಾಸ ಕೈಗೊಂಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಇಂದು ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

Last Updated :Aug 20, 2023, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.