ETV Bharat / city

ತುಮಕೂರು : ಆಟದ ಮೈದಾನದಲ್ಲಿ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಹಾವಿನ ರಕ್ಷಣೆ

author img

By

Published : Nov 24, 2021, 3:04 PM IST

snake rescued by experts at tumkur
ತುಮಕೂರಿನಲ್ಲಿ ಹಾವಿನ ರಕ್ಷಣೆ

ಆಟದ ಮೈದಾನದಲ್ಲಿನ ನೆಟ್​​ನಲ್ಲಿ ಏಳು ಅಡಿ ಉದ್ದದ ಕೆರೆ ಹಾವೊಂದು ಸಿಲುಕಿ ಒದ್ದಾಡುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ದಿಲೀಪ್ ಹಾಗೂ ಮತ್ತಿತರರು ನೆಟ್​ ತುಂಡರಿಸಿ ಹಾವು ರಕ್ಷಿಸಿದರು..

ತುಮಕೂರು : ಆಟದ ಮೈದಾನದಲ್ಲಿದ್ದ ಬಲೆಗೆ ಸಿಲುಕಿ ಸಾವು-ಬದುಕಿನ ನಡುವೆ ನರಳುತ್ತಿದ್ದ ಕೆರೆ ಹಾವನ್ನು ವನ್ಯಜೀವಿ ಸಂಘದ ಸದಸ್ಯರು ರಕ್ಷಿಸಿದ್ದಾರೆ.


ತುಮಕೂರು ನಗರದ ಬಟವಾಡಿ ಬಳಿಯಿರುವ ಖಾಸಗಿ ಶಾಲೆ ಬಳಿಯ ಮೈದಾನದಲ್ಲಿನ ನೆಟ್​​ನಲ್ಲಿ ಏಳು ಅಡಿ ಉದ್ದದ ಕೆರೆ ಹಾವು ಸಿಲುಕಿತ್ತು. ಇದನ್ನು ಗಮನಿಸಿದ ಯುವಕನೋರ್ವ ವಾರಂಗಲ್ ವನ್ಯಜೀವಿ ಸಂಘಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ದಿಲೀಪ್, ಗುರುಕಿರಣ್, ಗಿರೀಶ್ ಹಾಗೂ ನಿತಿನ್ ರಾಜ್ ಎಂಬುವರು ಹಾವಿನ ಪ್ರಾಣ ರಕ್ಷಿಸಿದರು.

ಇದನ್ನೂ ಓದಿ: ACB Raid : ಚಿಂತಾಮಣಿ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಮನೆಯಲ್ಲಿ ಚಿನ್ನ, ಅಪಾರ ಆಸ್ತಿ ದಾಖಲೆ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.