ETV Bharat / city

ಜನ ಮತ ಹಾಕಿದ್ದಾರೆ, ಅದನ್ನು ಪಡೆದಿದ್ದೇವೆ : ಸಂಸದ ಬಸವರಾಜು

author img

By

Published : Dec 1, 2021, 7:47 PM IST

MP Basavraju
ಸಂಸದ ಬಸವರಾಜು

ಅವರಂತಹ ಕೆಟ್ಟ ರಾಜಕಾರಣವನ್ನು ನಾನು ಮಾಡುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ವಿರುದ್ಧ ಸಂಸದ ಬಸವರಾಜು ಗುಡುಗಿದ್ದಾರೆ..

ತುಮಕೂರು : ಮಧುಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನ ಮತ ಹಾಕಿದ್ದಾರೆ, ಅದನ್ನು ಪಡೆದಿದ್ದೇವೆ. ಅವರಂತಹ ಕೆಟ್ಟ ರಾಜಕಾರಣವನ್ನು ನಾನು ಮಾಡುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ವಿರುದ್ಧ ಸಂಸದ ಜಿ.ಎಸ್​ ಬಸವರಾಜು ಗುಡುಗಿದ್ದಾರೆ.

ಮಾಜಿ ಶಾಸಕ ಕೆ ಎನ್‌ ರಾಜಣ್ಣ ವಿರುದ್ಧ ಸಂಸದ ಬಸವರಾಜು ಕಿಡಿ..

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತಿದ್ದರೆ ಸೋತಿದ್ದೇವೆ ಎಂದು ಒಪ್ಪಿಕೊಳ್ಳುತ್ತೇವೆ. ಆದ್ರೆ, ಅವರು ಹಾಗಲ್ಲ. ನಾನು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ರಾಜಕಾರಣ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ಕೌಟುಂಬಿಕ ಕಲಹ : ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಲೋಕಸಭಾ ಚುನಾವಣೆಗೆ ಮೂರು ತಿಂಗಳು ಮುನ್ನವೇ ಒಂದು ತೊಟ್ಟು ನೀರನ್ನು ಕೊಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ, ಜನ ಮತ ಹಾಕಿಲ್ಲ ಎಂದು ಅಂದಿನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ವಿರುದ್ಧವೂ ಪರೋಕ್ಷವಾಗಿ ಕಿಡಿಕಾರಿದರು.

ತುಮಕೂರು ಜಿಲ್ಲೆಯ ಜನರಿಗೆ ಹೇಮಾವತಿ ನದಿ ನೀರು ಕುಡಿಯಲು ಬೇಕಾಗಿತ್ತು. ಹೀಗಾಗಿ, ನಮ್ಮ ಜಿಲ್ಲೆಯವರೇ ಅಭ್ಯರ್ಥಿಯಾದರೆ ಅವರಿಂದ ಸಾಧ್ಯವಿದೆ ಎಂದು ಅರಿತು ನನಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.