ETV Bharat / city

ದ.ಕ.ಜಿಲ್ಲೆಯಲ್ಲಿ RSS ಮಾನಸಿಕತೆಯುಳ್ಳ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಅಗತ್ಯವಿದೆ: ಶಾಫಿ ಬೆಳ್ಳಾರೆ

author img

By

Published : Dec 18, 2021, 10:25 AM IST

SDPI leader Shafi Ballare outrage against dakshina kannada police department
ದ.ಕನ್ನಡ ಪೊಲೀಸ್ ಇಲಾಖೆ ವಿರುದ್ಧ ಎಸ್​ಡಿಪಿಐ ಮುಖಂಡ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆ ವಿರುದ್ಧ ಎಸ್​ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು (ದಕ್ಷಿಣ ಕನ್ನಡ): ದ.ಕ. ಜಿಲ್ಲೆಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯ ಅಗತ್ಯವಿದೆ. ಅಲ್ಲದೇ ಹಾಲಿ ನ್ಯಾಯಾಧೀಶರ ಮೂಲಕ‌ ಸಮಗ್ರ ತನಿಖೆಯ ಅಗತ್ಯವಿದೆ. ಇಲಾಖೆಯಲ್ಲಿರುವ ಶೇ.60ರಷ್ಟು ಸಂಘ ಪರಿವಾರದ ಮಾನಸಿಕತೆಯುಳ್ಳ, ಮುಸ್ಲಿಂ ದ್ವೇಷಿಯುಳ್ಳ ಪೊಲೀಸರನ್ನು ಇಲಾಖೆಯಿಂದ ತೆಗೆದು ಹಾಕಿ ಸ್ವಚ್ಛಗೊಳಿಸಬೇಕು ಎಂದು ಎಸ್​ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕ್ಲಾಕ್ ಟವರ್ ಬಳಿ‌ ನಡೆದ ಧರಣಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ದ್ವೇಷಿಯುಳ್ಳ ಪೊಲೀಸರನ್ನು ಇಲಾಖೆಯಿಂದ ತೆಗೆದು ಹಾಕುವ ಮೂಲಕ ದ.ಕ. ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ದ.ಕನ್ನಡ ಪೊಲೀಸ್ ಇಲಾಖೆ ವಿರುದ್ಧ ಎಸ್​ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಆಕ್ರೋಶ

ಪೊಲೀಸ್ ಇಲಾಖೆಯಲ್ಲಿ ಶೇ.6ಂರಷ್ಟು ಸಂಘ ಪರಿವಾರದ ಮಾನಸಿಕತೆ ಉಳ್ಳವರು ಇದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಇಂತಹ ಪೊಲೀಸರ ಬಗ್ಗೆ ಇಲ್ಲಿನ ಮುಸ್ಲಿಂ ನಾಯಕರು ಮನವಿಯ ಮೇಲೆ ಮನವಿ ಸಲ್ಲಿಸಿದ್ದರು. ತಾರತಮ್ಯ ಎಸಗುವ ಪೊಲೀಸರ ಪಟ್ಟಿಯನ್ನು ಕೊಟ್ಟರು. ಆದರೆ ಅಂತಹವರ ಮೇಲೆ ಕ್ರಮ ಜರುಗಿಸಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಸಂಘ ಪರಿವಾರಕ್ಕೆ ಗೊಬ್ಬರವನ್ನು ಹಾಕಿ ಬೆಳೆಸಿದ್ದು ಅದೇ ಪಕ್ಷದವರು. ಅಂತಹವರು ಈಗ ನಮಗೆ ಪ್ರತಿಭಟನೆ ಮಾಡುವುದಕ್ಕೆ ಪುಕ್ಕಟ್ಟೆ ಸಲಹೆ ಕೊಡುತ್ತಿದ್ದಾರೆ. ಅವರ ಸಲಹೆಯ ಅಗತ್ಯ ನಮಗಿಲ್ಲ. ನಮ್ಮ ಕಾರ್ಯಕರ್ತರ ರಕ್ತಕ್ಕೆ ಅವರ ಅನುಕಂಪದ ಅಗತ್ಯವಿಲ್ಲ ಎಂದು ಶಾಫಿ ವಾಗ್ದಾಳಿ ನಡೆಸಿದರು.

ಉಪ್ಪಿನಂಗಡಿಯಲ್ಲಿ ಇತ್ತೀಚಿಗೆ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಎಸ್​ಡಿಪಿಐ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಡೆಯಬೇಕಿದ್ದ 'ಎಸ್ಪಿ ಕಚೇರಿ ಚಲೋ' ರ್ಯಾಲಿಗೆ ಎಸ್​ಡಿಪಿಐ ಮುಖಂಡರು ಎಷ್ಟೇ ಮನವಿ ಮಾಡಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಮುಂಭಾಗ ಉಪ್ಪಿನಂಗಡಿ ಪೊಲೀಸ್ ದೌರ್ಜನ್ಯಕ್ಕೆ ನ್ಯಾಯ ಕೊಡಬೇಕೆಂದು ಆಗ್ರಹಿಸಿ‌ ಸಾವಿರಾರು ಕಾರ್ಯಕರ್ತರು ಧರಣಿ ನಡೆಸಿದರು.

ಇದನ್ನೂ ಓದಿ: ಉಪ್ಪಿನಂಗಡಿ ಗಲಭೆ, ಲಾಠಿಚಾರ್ಜ್​ ಪ್ರಕರಣ: 10ಮಂದಿ ಆರೋಪಿಗಳ ಬಂಧನ

ಬಳಿಕ ಜಿಲ್ಲಾ ಎಸ್ಪಿ ಋಷಿಕೇಶ ಸೋನಾವಣೆ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟನೆ ಮುಗಿಸಿ ಮನೆಯ ಕಡೆಗೆ ತೆರಳುವಂತೆ ಮನವಿ ‌ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.