ETV Bharat / city

ಗ್ರಾಪಂ ಸದಸ್ಯನ ಕೊಲೆ: ನಾಲ್ವರು ಆರೋಪಿಗಳ ಬಂಧನ

author img

By

Published : Nov 7, 2020, 2:55 AM IST

gram panchayat member
ಗ್ರಾಪಂ ಸದಸ್ಯನ ಕೊಲೆ

ಜಮೀನು ವಿವಾದದ ಹಿನ್ನೆಲೆ ಗ್ರಾಪಂ ಸದಸ್ಯನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ: ಕಡಗಂಚಿ ಗ್ರಾಮ ಪಂಚಾಯತ್ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಆರ್.ಜಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

gram panchayat member
ಗ್ರಾಪಂ ಸದಸ್ಯ ಶಿವಲಿಂಗಪ್ಪ ಭೋಗಶೆಟ್ಟಿ
ಶರಣಬಸಪ್ಪ @ ಶರಣು ಮಾದಗುಂಡ, ಯೋಗಿನಾಥ್ ಮಾದಗುಂಡ, ಸಾಯಿನಾಥ ಮಾದಗುಂಡ ಹಾಗೂ ಅಶೋಕ ರಾಜಾಪುರ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಆಳಂದ ತಾಲೂಕಿನ ಕಡಗಂಚಿ ಗ್ರಾಮದವರಾಗಿದ್ದಾರೆ.
ಗ್ರಾಪಂ ಸದಸ್ಯನ ಕೊಲೆ: ನಾಲ್ವರು ಆರೋಪಿಗಳ ಬಂಧನ
ಜಮೀನು ವಿವಾದದ ಹಿನ್ನೆಲೆ ಕಲಬುರಗಿಯ ಕೈಲಾಶ ನಗರದಲ್ಲಿ ನವೆಂಬರ್ 2 ರಂದು ರಾತ್ರಿ ಕಡಗಂಚಿ ಗ್ರಾಪಂ ಸದಸ್ಯ ಶಿವಲಿಂಗಪ್ಪ ಭೋಗಶೆಟ್ಟಿ ಎಂಬುವರನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು ಆರೋಪಿಗಳು ತೆಲೆಮರೆಸಿಕೊಂಡಿದ್ದರು. ಸದ್ಯ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೂ ಜಾಲ ಬೀಸಲಾಗಿದೆ ಎಂದು ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.