ETV Bharat / city

ಟಂಟಂ ವಾಹನ ತೊಳೆಯಲು ಹೋಗಿ ಅಪ್ಪ-ಮಗ ಸಾವು.. ಧಾರವಾಡದಲ್ಲಿ ದುರಂತ

author img

By

Published : Jul 21, 2022, 12:33 PM IST

lake
ಕೆರೆ

ಟಂಟಂ ವಾಹನ ತೊಳೆಯಲು ಹೋಗಿದ್ದ ಅಪ್ಪ-ಮಗ ನೀರುಪಾಲು- ಕಾಲು ಜಾರಿ ಕೆರೆಗೆ ಬಿದ್ದು ದುರ್ಘಟನೆ- ತಂದೆಯ ಮೃತದೇಹ ಪತ್ತೆ ಮಗನ ಶವಕ್ಕಾಗಿ‌ ಹುಡುಕಾಟ

ಧಾರವಾಡ: ಟಂಟಂ ವಾಹನ ತೊಳೆಯಲು ಹೋಗಿ ತಂದೆ - ಮಗ ನೀರು ಪಾಲಾದ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ನವೋದಯ ಶಾಲೆ ಪಕ್ಕದಲ್ಲಿರುವ ಕೆರೆಯಲ್ಲಿ ಸಂಭವಿಸಿದೆ. ಗದಿಗೆಪ್ಪ ಅಂಗಡಿ ಹಾಗೂ ರವಿ ಅಂಗಡಿ ಸಾವನ್ನಪ್ಪಿದ ಅಪ್ಪ-ಮಗ.

ಇಂದು ಬೆಳಗ್ಗೆ ಕೆರೆಯಲ್ಲಿ ಟಂಟಂ ವಾಹನ ತೊಳೆಯಲು ಹೋದಾಗ ಈ ದುರ್ಘಟನೆ ನಡೆದಿದೆ. ತಂದೆ ಗದಿಗೆಪ್ಪನ ಮೃತದೇಹ ಪತ್ತೆಯಾಗಿದ್ದು, ಮಗ ರವಿಯ ಮೃತದೇಹಕ್ಕಾಗಿ‌ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಸಾವಿನ ದಿನಾಂಕ ಬರೆದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.