ETV Bharat / city

ದಾವಣಗೆರೆ : ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಲೈನ್‌ಮ್ಯಾನ್!

author img

By

Published : Dec 29, 2021, 3:34 PM IST

Lineman Ravikumar arrested while taking bribe at davanagere
ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಲೈನ್ ಮ್ಯಾನ್

ಲೈನ್‌ಮ್ಯಾನ್ ರವಿಕುಮಾರ್ ಇಂದು ಕಚೇರಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಬಳಿ ಶ್ರೀರಾಮ್ ಅವರಿಂದ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ..

ದಾವಣಗೆರೆ : ದಾವಣಗೆರೆಯ ಬೆಸ್ಕಾಂ ಸಹಾಯ ಕಾರ್ಯ ನಿರ್ವಾಹಕ ಕಚೇರಿಯ ಎಂಟಿ ಉಪ ವಿಭಾಗದಲ್ಲಿ ಲೈನ್‌ಮ್ಯಾನ್ ಆಗಿದ್ದ ರವಿಕುಮಾರ್ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಶ್ರೀರಾಮ್ ಎಂಬುವರಿಗೆ ಸೇರಿದ್ದ ಹಿಟ್ಟಿನ ಗಿರಣಿಯ ಹಿಂಬಾಕಿ ಬಿಲ್​ಗೆ 15 ಸಾವಿರ ರೂ. ದಂಡ ಪಾವತಿಸಬೇಕಿತ್ತು.

ದಂಡವನ್ನು ಸರಿಪಡಿಸಲು 5 ಸಾವಿರ ರೂ. ಬೇಡಿಕೆ ಇಟ್ಟಿದ್ದ ಲೈನ್‌ಮ್ಯಾನ್ ರವಿಕುಮಾರ್ ವಿರುದ್ಧ ಹಿಟ್ಟಿನ ಗಿರಣಿ ಮಾಲೀಕ ಶ್ರೀರಾಮ್ ಎಸಿಬಿಗೆ ದೂರು ನೀಡಿದ್ದರು.

ಇದನ್ನೂ ಓದಿ: ತುಮಕೂರು ಮಹಿಳೆ ಅತ್ಯಾಚಾರ, ಕೊಲೆ.. 26 ವರ್ಷಗಳ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ..

ಲೈನ್‌ಮ್ಯಾನ್ ರವಿಕುಮಾರ್ ಇಂದು ಕಚೇರಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಬಳಿ ಶ್ರೀರಾಮ್ ಅವರಿಂದ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.