ETV Bharat / city

ಪುನೀತ್ ಹಣೆಗೆ ಮುತ್ತಿಟ್ಟು, ಕೆನ್ನೆ ಸವರಿ ಅಂತಿಮ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ

author img

By

Published : Oct 31, 2021, 6:34 AM IST

Updated : Oct 31, 2021, 6:53 AM IST

cm basavaraja bommai tribute to puneeth rajkumar
ಪುನೀತ್ ಹಣೆಗೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ...

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮುಂಜಾನೆ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಹಣೆಗೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದರು.

ಬೆಂಗಳೂರು: ಸ್ಯಾಂಡಲ್​ವುಡ್​ನ ಯುವರತ್ನ ಪುನೀತ್ ರಾಜ್​ಕುಮಾರ್​​ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದ ಆವರಣದಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಜಾನೆ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಹಣೆಗೆ ಮುತ್ತಿಟ್ಟು ಭಾವಪೂರ್ಣ ವಿದಾಯ ಕೋರಿದರು.

ಪುನೀತ್ ಹಣೆಗೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ

ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಸಿಎಂ, ಪುನೀತ್‌ ಹಣೆಗೆ ಮುತ್ತಿಕ್ಕಿ ಕೆನ್ನೆ ಸವರಿದರು. ಈ ಸಂದರ್ಭದಲ್ಲಿ ಅವರು ಕೆಲಹೊತ್ತು ಭಾವುಕರಾದರು. ನಂತರ ಪಾರ್ಥಿವ ಶರೀರವನ್ನು ಚಿರಶಾಂತಿ ವಾಹನಕ್ಕೆ ಸ್ಥಳಾಂತರಿಸಲಾಯಿತು. ಅದಕ್ಕೂ ಮುನ್ನ ಪುನೀತ್ ರಾಜ್‍ಕುಮಾರ್ ಪತ್ನಿ ಹಾಗೂ ಮಗಳು ಅಂತಿಮ ನಮನ ಸಲ್ಲಿಸಿದರು. ಚಿರಶಾಂತಿ ವಾಹನದಲ್ಲಿ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​​ಕುಮಾರ್, ಶಾಸಕ ರಾಜೂಗೌಡ ಉಪಸ್ಥಿತರಿದ್ದರು.

ಮುಂಜಾನೆಯವರೆಗೂ ಅಂತಿಮ ದರ್ಶನ:

ಅಪ್ಪು ಅಭಿಮಾನಿಗಳು ಮುಂಜಾನೆ 3 ಗಂಟೆಯವರೆಗೂ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು. ಬೆಳಗ್ಗೆ 3 ಗಂಟೆಯವರೆಗೆ ಪೊಲೀಸರು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದರು. ರಾತ್ರಿಪೂರ್ತಿ ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿ ಅಗಲಿದ ಅಪ್ಪುಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ: ಪುನೀತ್ ರಾಜ್​​ಕುಮಾರ್​ ಅಂತ್ಯಕ್ರಿಯೆ: ಕುಟುಂಬ ಸದಸ್ಯರು, ಗಣ್ಯರಿಗೆ ಮಾತ್ರ ಅವಕಾಶ

Last Updated :Oct 31, 2021, 6:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.