ETV Bharat / city

ಬಿಎಂಟಿಸಿ ಬಸ್​ಗೆ ಗುದ್ದಿದ ಕಾಡಾನೆ.. ಬಸ್​​ ಮುಂಭಾಗ ನಜ್ಜುಗುಜ್ಜು

author img

By

Published : Mar 26, 2022, 12:02 PM IST

ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯ ಅಗರ ಕ್ರಾಸ್ ಬಳಿ ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಆನೆ ಗುದ್ದಿದ ರಭಸಕ್ಕೆ ಬಸ್​​ನ ಮುಂಭಾಗ ಜಖಂಗೊಂಡಿದೆ.

ಬಸ್​ ಅಪಘಾತ
ಬಸ್​ ಅಪಘಾತ

ಬೆಂಗಳೂರು : ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್​ ಜಖಂಗೊಂಡ ಘಟನೆ ನಗರದ ಹೊರವಲಯದ ಕನಕಪುರ ಮುಖ್ಯ ರಸ್ತೆಯ ಅಗರ ಕ್ರಾಸ್ ಬಳಿ ತಡರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ಬಸ್​ ಸಂಚರಿಸುತ್ತಿದ್ದ ವೇಳೆ ಏಕಾಏಕಿ ರಸ್ತೆಗೆ ಆನೆ ಅಡ್ಡ ಬಂದಿದ್ದು, ಬಸ್​ನ ಮುಂಭಾಗ ಜಖಂಗೊಂಡಿದೆ.

ಬಸ್​ನಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪ್ರಯಾಣಿಕರಿದ್ದರು. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಚಾಲಕ ನಾಗೇಂದ್ರ ಕಾಲಿಗೆ ಗಾಯಗಳಾಗಿದ್ದು, ಅಪಘಾತ ಸ್ಥಳದಿಂದ ಆನೆ ಚೇತರಿಸಿಕೊಂಡು ವಾಪಸ್​ ಆಗಿದೆ.

ಕಾಡಾನೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್

ಇದನ್ನೂ ಓದಿ:ಆಸ್ಟರ್ ಆಸ್ಪತ್ರೆಯಿಂದ ರಾಮಯ್ಯ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.