ETV Bharat / city

ಬೆಂಗಳೂರು: ಗಾಂಜಾ ನಶೆಯಲ್ಲಿ ಮನೆಗೆ ನುಗ್ಗಿ ಸ್ನೇಹಿತನಿಂದಲೇ ಯುವಕನ ಬರ್ಬರ ಕೊಲೆ!

author img

By

Published : Dec 25, 2021, 10:25 AM IST

boy-murder-in-bangalore
ಯುವಕನ ಬರ್ಬರ ಹತ್ಯೆ

Murder in Bengaluru: ಗಾಂಜಾ ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿ ಸ್ನೇಹಿತನ ಮನೆಗೆ ನುಗ್ಗಿ ಕತ್ತು ಸೀಳಿ ಗೆಳೆಯರೇ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು : ನಗರದ ಹಲಸೂರು ಠಾಣಾ ವ್ಯಾಪ್ತಿಯ ಎಮ್.ವಿ ಗಾರ್ಡನ್​ನಲ್ಲಿ ಗಾಂಜಾ ಮತ್ತಿನಲ್ಲಿ ಸ್ನೇಹಿತನಿಂದಲೇ ಯುವಕನ ಬರ್ಬರ ಹತ್ಯೆ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಮಿನ್ಯುಸ್ (18) ಮೃತ ಯುವಕ.

ಹಲಸೂರು ಠಾಣಾ ವ್ಯಾಪ್ತಿಯ ಎಮ್​.ವಿ ಗಾರ್ಡನ್​ನಲ್ಲಿ ಶುಕ್ರವಾರ ತಡರಾತ್ರಿ ಸ್ನೇಹಿತರ ನಡುವೆ ಗಾಂಜಾ ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಸಂತೋಷ್ ಆಪರೇಷನ್ ಬ್ಲೇಡ್ ತೆಗೆದುಕೊಂಡ ಮಿನ್ಯುಸ್ ಕತ್ತಿಗೆ ಚುಚ್ಚಿದ್ದಾನೆ. ನಂತರ ಅರೋಪಿಗಳು ಕುತ್ತಿಗೆ ಸೀಳಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಿನ್ಯುಸ್​ನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮಿನ್ಯುಸ್ ಮೃತಪಟ್ಟಿದ್ದಾನೆ ಎಂದಿದ್ದಾರೆ.

ಮಾರ್ಕೆಟ್​ನಲ್ಲಿ ಗಲಾಟೆ ರಾತ್ರಿ ಕೊಲೆ : ನಿನ್ನೆ ಸಂಜೆ ಮರ್ಫಿ ಟೌನ್ ಮಾರ್ಕೆಟ್‌ನಲ್ಲಿ ಗಲಾಟೆ ನೆಡೆದಿತ್ತು. ಈ ವೇಳೆ ಸಂತೋಷ್ ಎಂಬಾತನ ಮೇಲೆ ಮಿನ್ಯುಸ್ ಗಲಾಟೆ ತೆಗೆದಿದ್ದ. ನಂತರ ಸಂತೋಷ್ ತನ್ನ ಮೂವರು ಗೆಳೆಯರ ಜೊತೆಯಲ್ಲಿ ರಾತ್ರಿ ಮಿನ್ಯುಸ್ ಮನೆಗೆ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಆಪರೇಷನ್ ಬ್ಲೇಡ್ ತೆಗೆದುಕೊಂಡು ಕುತ್ತಿಗೆಗೆ ಇರಿಯಲಾಗಿದೆ.

ಆರೋಪಿ ವಶಕ್ಕೆ : ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವ ಅರೋಪಿ ಸಂತೋಷ್ ಎಂಬುವನನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಮೂರು ಅರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.